Dasara 2025: ಮೈಸೂರು ಅರಮನೆಗೆ ಬಂದ ಗಜಪಡೆ: ತೂಕದಲ್ಲಿ ಅಭಿಮನ್ಯು ಆನೆ ಹಿಂದಿಕ್ಕಿದ ಭೀಮ..
ಬೆಂಗಳೂರು, ಆಗಸ್ಟ್ 11: ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2025 ಹಬ್ಬದ ಆಚರಣೆಗೆ ಎಲ್ಲ ಸಿದ್ಧತೆಗಳು ಆರಂಭಗೊಂಡಿವೆ. ದಸರಾ ಕಾರ್ಯಾಕಾರಿಣಿ ಸಭೆ ಈಗಾಗಲೇ ಆಗಿದೆ. ಅರಮನೆ ತುಂಬೆಲ್ಲ ಭರ್ಜರಿ ದೀಪಾಲಂಕಾರ ಮಾಡಲಾಗಿದೆ. ಇಂದು ಗಜಪಡೆ ಅರಮನೆ ಪ್ರವೇಶಿಸಿದ್ದು, ಕಾಡಿನಿಂದ ಬರುತ್ತಿದ್ದಂತೆ ಪ್ರತಿ ವರ್ಷದಂತೆ ಈ ವರ್ಷವು ಒಂದೊಂದೆ ಆನೆಯ ತೂಕ ಪರೀಕ್ಷೆ ನಡೆಯಿತು. ತೂಕದಲ್ಲಿ ಅಭಿಮನ್ಯು ಆನೆಯನ್ನು ಭೀಮ ಮೀರಿಸಿದ್ದಾನೆ.
ಹೌದು, ಮೈಸೂರು ದಸರಾ ಹಬ್ಬ ಹಿನ್ನಲೆ ಇಂದು ಗಜಪಡೆಗೆ ತೂಕ ಪರೀಕ್ಷೆ ಮೊದಲ ಹಂತದ ತೂಕ ಪರೀಕ್ಷೆ ನಡೆಯಿತು. ಕಾಡಿನಿಂದ ನಾಡಿಗೆ ಬಂದ ನಂತರ ನಡೆಯುವ ನಡೆಯುವ ಮೊಲದ ಪ್ರಕ್ರಿಯೆ ಇದಾಗಿದೆ. ಅಭಿಮನ್ಯುಗಿಂತ ಭೀಮ ಹೆಚ್ಚಿನ ತೂಕ (5465 ಕೆಜಿ) ಹೊಂದಿರುವುದು ಗೊತ್ತಾಗಿದೆ. ಈ ಮೂಲಕ ಕ್ಯಾಪ್ಟನ್ ಆನೆ ಅಭಿಮಾನ್ಯ 5360 ಕೆಜಿ ತೂಗುವ ಮೂಲಕ ದಸರಾ ಆನೆಗಳಲ್ಲಿ ಎರಡನೇ ಹೆಚ್ಚು ತೂಕದ ಆನೆಯಾಗಿ ಹೊರ ಹೊಮ್ಮಿತು.

2017ರಲ್ಲಿ ಪಾಲ್ಗೊಂಡಿದ್ದ ಭೀಮ ಮತ್ತದೇ ಕಳೆದ ನಾಲ್ಕು ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಭೀಮನ ತೂಕ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2022ರಲ್ಲಿ 4000 ಕೆಜಿ ತೂಕ ತೂಗಿದ್ದ ಭೀಮನ ತೂಕ ಹೆಚ್ಚಾಗಿದೆ. ಭೀಮನಿಗೆ ಸದ್ಯ 25 ವರ್ಷ ವಯಸ್ಸಾಗಿದೆ. ವಿವಿಧ ಆನೆಗಳು ವರ್ಷಗಳಿಂದಲೂ ಮೈಸೂರು ದಸರೆಗಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ.
ಒಂಬತ್ತು ವರ್ಷಗಳಿಂದ ಮೈಸೂರಿಗೆ ಬರುತ್ತಿರುವ ಆನೆ ಧನಂಜಯ್ 5310 ಕೆಜಿ ತೂಕ ಹೊಂದಿದರೆ, ಆನೆ ಪ್ರಶಾಂತ 5110 ಕೆಜಿ, ಮಹೇಂದ್ರ ಆನೆಯ ತೂಕ 5120 ಕೆಜಿ, ಏಕಲವ್ಯ 5305 ಕೆಜಿ, 26 ವರ್ಷದ ಕಂಜನ್ 4880 ಕೆಜಿ, ಲಕ್ಷ್ಮೀ ಆನೆ 3730 ಕೆಜಿ ಹಾಗೂ ಕಾವೇರಿ ಆನೆ 3010 ಕೆಜಿ ತೂಕ ಹೊಂದಿದೆ. ಈ ಮೂಲಕ ಕಾವೇರಿ ಆನೆ ಅತಿ ಕಡಿಮೆ ತೂಕ ಹೊಂದಿದ ದಸರೆ ಆನೆಯಾಗಿದೆ.
ದಸರಾ ಹಬ್ಬದ ಬಗ್ಗೆ ಸಚಿವರು ಹೇಳಿದ್ದೇನು?
ದಸರಾ ಕಾರ್ಯಾಕಾರಿಣಿ ಸಭೆಯಲ್ಲಿ ಶಾಸಕರು, ಸಚಿವರು ಕೆಲವು ಸಲಹೆ ನೀಡಿದ್ದಾರೆ. ಏನೆಲ್ಲ ಅದ್ಧೂರಿಯಾಗಿ, ಮತ್ತಷ್ಟು ಚನ್ನಾಗಿ ಹಬ್ಬ ಆಚರಿಸಲು ಸಲಹೆ ನೀಡಿದ್ದಾರೆ. ಮೂರು ಮತ್ತು ನಾಲ್ಕು ವಾರಗಳ ಮೊದಲೇ ಹಬ್ಬ ಆರಂಭ, ಮೂರು ಸಾವಿರ ಡ್ರೋನ್ ಶೋಗೆ ನಿರ್ಧಾರ, ಎಲ್ಲ ಸರ್ಕಾರಿ ನಿಗಮಗಳ ಪ್ರದರ್ಶನಗಳು ಸಮಯಕ್ಕೆ ಸರಿಯಾಗಿ ಮಾಡಬೇಕು. ಈ ವರ್ಷ ಲೈಟಿಂಗ್ಸ್ ಮತ್ತಷ್ಟು ಗ್ಯ್ರಾಂಡ್ ಆಗಿ ಕಾಣುವಂತೆ ಸೂಚನೆ ನೀಡಿದ್ದೇವೆ. ನಾಡಿನ ಜನರ ಪರವಾಗಿ ಜನರಿಗೆ ಒಳಿತಾಗುವ ದೃಷ್ಟಿಯಿಂದ ವಿಜೃಂಬಣೆಯಿಂದ ಆಚರಿಸಲು ತಿರ್ಮಾನಿಸಲಾಗಿದೆ. ಯುವ ದಸರಾ, ಸಂಗೀತ ಸಂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಚಿವ ಎಚ್ಸಿ ಮಹಾದೇವಪ್ಪ ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೈಸೂರು ದಸರಾ ಉದ್ಘಾಟಿಸುತ್ತಾರೆ. ಮುಂದಿನ ಮೂರು ವರ್ಷವು ಅವರೇ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸ್ಥಾನ ಬದಲಾಗಲ್ಲ ಎಂದು ಅವರು ತಿಳಿಸಿದರು.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications