Karnataka Rains: ತಾಪಮಾನಕ್ಕೆ ಸೆಡ್ಡು ಹೊಡೆದ ಪೂರ್ವ ಮುಂಗಾರು: ಮೇ ತಿಂಗಳ ಫುಲ್ ರಿಪೋರ್ಟ್ ಇಲ್ಲಿದೆ
ಬೆಂಗಳೂರು, ಮೇ 29: ಕರ್ನಾಟಕ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ ಜೋರಾಗಿತ್ತು. ಕಳೆದ ಒಂದು ದಿನದಿಂದ ಅಷ್ಟಾಗಿ ಮಳೆ ಆಗಿಲ್ಲ. ಇನ್ನೇನು ಅಂತ್ಯಗೊಳ್ಳಲಿರುವ ಈ ಮಳೆ ಮೇ ತಿಂಗಳಲ್ಲಿ ವಾಡಿಕೆಗಿಂತ ಬರೋಬ್ಬರಿ 150 ಮಿ.ಮೀ. ಮಳೆ ದಾಖಲಾಗಿದೆ.
ರಾಜ್ಯದಲ್ಲಿ ಕಳೆದ ತಿಂಗಳ ತೀವ್ರ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಆದರೆ ಮೇ ತಿಂಗಳಲ್ಲಿ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ರೈತರು ಮುಂಗಾರು ಹಂಗಾಮು ವ್ಯವಸಾಯ ಚಟುವಟಿಕೆಗಳಿಗೆ ಸಿದ್ಧವಾಗಿದ್ದಾರೆ. ಮುಂಗಾರು ಹೇಗಿರಲಿದೆ ಎಂಬ ಮುನ್ಸೂಚನೆ ಆಧಾರದಲ್ಲಿ ಮುಂದಿನ ಹೆಜ್ಜೆ ಇಡಲಿದ್ದಾರೆ ಎನ್ನಲಾಗಿದೆ.

ರೈತರ ಖುಷಿ ನೀಡಿದ ಮೇ ತಿಂಗಳ ಮಳೆ
ರಾಜ್ಯದಲ್ಲಿ ಮೇ 1ರಿಂದ 29ರವರೆಗೆ ವಾಡಿಕೆ 62ಮಿ.ಮೀ. ನಷ್ಟು ಮಳೆ ಆಗಬೇಕಿದ್ದು, ಸದ್ಯ 128 ಮಿ.ಮೀ. ಮಳೆ ದಾಖಲಾಗಿದೆ. ಇದು ವಾಡಿಕೆಗಿಂತ ಶೇಕಡಾ 92 ಅಧಿಕ ಮಳೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಈ ತಿಂಗಳ ಕಳೆದ 29 ದಿನಗಳಲ್ಲಿ ಕರಾವಳಿ ಭಾಗಕ್ಕೆ ಒಟ್ಟು 101 ಮಿಮೀ. ಮಳೆ ಆಗಬೇಕಿದ್ದು, ಇಲ್ಲಿ ಅಧಿಕ 165 ಮಿಮೀ. (ಶೇ.63ರಷ್ಟು ಅಧಿಕ) ಮಳೆ ಬಿದ್ದಿದೆ.
ಇದೇ 29 ದಿನ ಅವಧಿಯಲ್ಲಿ ಮಲೆನಾಡು ಭಾಗದಲ್ಲಿ 88 ಮಿಮೀ. ಮಳೆ ಆಗಬೇಕಿದ್ದು, ಬರೋಬ್ಬರಿ 204 ಮಿಮೀ. ಮಳೆ (ಶೇ.131ರಷ್ಟು ಅಧಿಕ) ದಾಖಲಾಗಿದೆ. ಒಣಹವೆ ಕಾಣುತ್ತಿದ್ದ ಉತ್ತರ ಒಳನಾಡಿನ ಭಾಗದಲ್ಲಿ ವಾಡಿಕೆ ಮಳೆ 44 ಮಿಮೀ.ಗಿಂತಲೂ ಅಧಿಕ 76 ಮಿಮೀ. (ಶೇ.72ರಷ್ಟು ಅಧಿಕ) ಮಳೆ ದಾಖಲಾಗಿದೆ.
ದಕ್ಷಿಣ ಒಳನಾಡಿಗೂ ಉತ್ತಮ ಮಳೆ
ಬೆಂಗಳೂರು, ಕೋಲಾರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳನ್ನು ಒಳಗೊಂಡ ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ವಾಡಿಕೆ 80 ಮಿಮೀ. ಮಳೆ ಆಗಬೇಕಿದ್ದು, ವಾಸ್ತವದಲ್ಲಿ 162 ಮಿಮೀ. ಮಳೆ (ಶೇ.162ರಷ್ಟು ಅಧಿಕ) ಹೆಚ್ಚು ಮಳೆ ಬಿದ್ದಿದೆ ಎಂದು ರಾಜ್ಯ ಹವಾಮಾನ ಕ್ಷೇಂದ್ರ ವರದಿಯಲ್ಲಿ ತಿಳಿಸಿದೆ.
ಕರ್ನಾಟಕದ ಮಟ್ಟಿಗೆ ಮೇ ತಿಂಗಳಲ್ಲಿ ಆದ ಮಳೆ ತಾಪಮಾನಕ್ಕೆ ಮುಕ್ತಿ ಕೊಟ್ಟು, ಜನರಿಗೆ, ರೈತರಲ್ಲಿ ಬುದಕಿನ ವಿಶ್ವಾಸ ಮೂಡಿಸಿದೆ. ಮಾರ್ಚ್ನಲ್ಲಿ ರಾಜಧಾನಿ ಬೆಂಗಳೂರು ಶೂನ್ಯ ಮಳೆ ಕಂಡಿದ್ದು, ವಿಪರೀತ ಶಾಖದ ಅಲೆ ಎದುರಿಸುತ್ತು. ಕಳೆದ 29 ದಿನ ರಾಜ್ಯದಲ್ಲಿ ಭರ್ಜರಿ ಮಳೆ ಆಗಿದೆ. ಇದರಿಂದ ಕೆರೆ ಕಟ್ಟೆಗಳು ತುಂಬಿವೆ. ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಬೇಸಾಯಕ್ಕೆ ಭೂಮಿ ಹದಕ್ಕೆ ಬಂದಿದೆ.

ರಾಜ್ಯದ ಮಳೆ ಮುನ್ಸೂಚನೆ
ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಚಂಡಮಾರುತ ತೀವ್ರತೆ ಅಂತ್ಯವಾದ ಪರಿಣಾಮ ರಾಜ್ಯದ ಯಾವ ಭಾಗದಲ್ಲಿಯೂ ಭಾರೀ ಮಳೆ ಮುನ್ಸೂಚನೆ ಇದೇ ಸಾಧಾರಣ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಬರುವ ಲಕ್ಷಣಗಳಿವೆ. ಉಳಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ತಂಪು ವಾತಾವರಣ ಬಿಟ್ಟರೆ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಗಳು ತೀರಾ ಕಡಿಮೆ. ಅಲ್ಲಲ್ಲಿ ಸಾಮಾನ್ಯ ಮಳೆ ಕಂಡು ಬರಬಹುದು. ವಾತಾವರಣದಲ್ಲಿ ಆಗಾಗ ಬಿಸಿಲಿನ ಏರಿಳಿತ, ತಂಪು ವಾತಾವರಣ ಕಂಡು ಬರಲಿದೆ. ಉಳಿದಂತೆ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎನ್ನಲಾಗಿದೆ.
ಮಂಗಳೂರಿಗೆ ಹೆಚ್ಚು ಮಳೆ, ರಾಯಚೂರಿಗೆ ಬಿಸಿಲು
ಬುಧವಾರ ಬೆಳಗ್ಗೆ 8.30 ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಮಂಗಳೂರು ನಗರ, ಪೆಣಂಬೂರು, ವಿಮಾನ ನಿಲ್ದಾಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವಡೆ ವ್ಯಾಪಕ ಮಳೆ ಆಗಿದೆ. ಉಳಿದೆಡೆ ತುಂತುರು ಮಳೆ ಆಗಿದೆ.
ಕರ್ನಾಟಕದ ಗರಿಷ್ಠ ತಾಪಮಾನ ರಾಯಚೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದೆಡೆ ಅದಕ್ಕಿಂತಲೂ ಕಡಿಮೆ ಬಿಸಿಲು ಕಂಡು ಬಂದಿದೆ. ಚಿಕ್ಕಮಗಳೂರಿನಲ್ಲಿ ಅತೀ ಕನಿಷ್ಠ ತಾಪಮಾನ 17 ಡಿಸೆ. ಕಂಡು ಬಂದಿದೆ. ಇನ್ನೂ ಕೆಲವು ದಿನಗಳ ಇದೇ ವಾತಾವರಣ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನಾ ವರದಿ ತಿಳಿಸಿದೆ.
ಸದ್ಯ ಕರ್ನಾಟಕ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಮರೆಯಾಗಿದೆ. ಮತ್ತೆ ತಾಪಮಾನದ, ಶಾಖದ ಅಲೆಯ ವಾತಾವರಣ ಕಂಡು ಬರುತ್ತಿದೆ. ಇದು ಮತ್ತೆ ಜನರಲ್ಲಿನ ಆತಂಕ ಹೆಚ್ಚಾಗಲು ಕಾರಣವಾಗಿದೆ.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications