Get Updates
Get notified of breaking news, exclusive insights, and must-see stories!

ಉಚಿತದ ಹೊರೆಯನ್ನು ಶ್ರೀಸಾಮಾನ್ಯನ ತಲೆ ಮೇಲಿಟ್ಟ ಸರ್ಕಾರ

ಬೆಂಗಳೂರು, ಮಾರ್ಚ್‌, 02: ವಿಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ವಿರುದ್ಧ ಪುಂಖಾನು ಪುಂಖವಾಗಿ ಆರೋಪಗಳನ್ನು ಮಾಡುವ ಯಾವುದೇ ರಾಜಕೀಯ ಪಕ್ಷ ತಾನು ಅಧಿಕಾರಕ್ಕೆ ಬಂದಾಗ ತಾವು ವಿರೋಧಪಕ್ಷದಲ್ಲಿದ್ದಾಗ ಮಾಡಿದ ಆರೋಪಗಳೆಲ್ಲವನ್ನು ಮರೆತು ಸ್ವಹಿತ ಬಯಸಲು ಆರಂಭಿಸುತ್ತಾರೆ. ಅಷ್ಟೇ ಅಲ್ಲದೆ ಎಂದೆಂದಿಗೂ ನಮಗೆ ಅಧಿಕಾರ ಶಾಶ್ವತವಾಗಿರುತ್ತದೆ. ಮತದಾರರನ್ನು ನಮ್ಮನ್ನೇ ಮುಂದೆಯೂ ಅಧಿಕಾರಕ್ಕೆ ತರುತ್ತಾರೆ ಎಂಬ ಭ್ರಮೆಯಲ್ಲಿ ತೇಲಾಡುತ್ತಾರೆ.

ಜನರ ಆಶೋತ್ತರಗಳನ್ನು ಈಡೇರಿಸಬೇಕು ಎಂಬುದನ್ನು ಮರೆತು ತಮ್ಮ ನಡವಳಿಕೆ ತೋರಿಸುತ್ತಾರೆ. ಇದು ಎಲ್ಲಾ ಪಕ್ಷಗಳ ನಾಯಕರು ಅಧಿಕಾರದಲ್ಲಿದ್ದಾಗ ವರ್ತಿಸುವ ರೀತಿ ನೀತಿಗಳಾಗಿದ್ದು, ಇದ್ಯಾವುದೂ ಬದಲಾಗುವುದು ಕಷ್ಟವೇ.

Do You Know Problems Faced for Common People Due to Free Guarantee Schemes

ರಾಜಕೀಯ ಪಕ್ಷಗಳ ಉದ್ದೇಶಗಳು ಅಧಿಕಾರಕ್ಕೆ ಬಂದ ತಕ್ಷಣ ಬದಲಾಗಿ ಬಿಡುತ್ತವೆ. ತಮ್ಮನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಸಂಘಟನೆಗಳು, ಸಮುದಾಯ, ಕಾರ್ಯಕರ್ತರು ಹೀಗೆ ಎಲ್ಲರನ್ನು ಮರೆತು ಬಿಡುತ್ತಾರೆ. ಚುನಾವಣೆಗೆ ಮುನ್ನ ಮಠಮಾನ್ಯ, ದೇಗುಲ, ಸಮುದಾಯ ಹೀಗೆ ಎಲ್ಲ ಕಡೆ ಓಡಾಡಿ ಕೈಕಾಲು ಹಿಡಿದು ಮತ ಕೇಳುವ ನಾಯಕರು ಬಳಿಕ ಎಲ್ಲರಿಗೂ ಎಳ್ಳು ನೀರು ಬಿಟ್ಟು ಬಿಡುತ್ತಾರೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಿಗೆ ಮಣ್ಣುಹಾಕಿ ಸಮಾಧಿ ಮಾಡಿ ಬಿಡುತ್ತಾರೆ.

ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರಗಳಿರಲಿ ಅವು ನಾವು ಜನತೆಗೆ ದೊಡ್ಡ ಉಪಕಾರ ಮಾಡಿಬಿಟ್ಟೆವು ಎಂದು ಬೆನ್ನುತಟ್ಟಿಕೊಳ್ಳುವ ಯಾವುದೇ ಅಗತ್ಯವೇನಿಲ್ಲ. ಸರ್ಕಾರ ನಡೆಸುವ ಯಾವ ನಾಯಕರು ಕೂಡ ತಮ್ಮ ಮನೆಯಿಂದ ಸಂಪನ್ಮೂಲಗಳನ್ನು ತಂದು ಜನರಿಗೆ ನೀಡಿದ ಉದಾಹರಣೆಗಳಿಲ್ಲ. ಜನಸಾಮಾನ್ಯರ ತೆರಿಗೆ ಹಣದಿಂದ ಒಂದಿಷ್ಟು ಒಳ್ಳೆ ಕೆಲಸಗಳನ್ನು ಮಾಡಿರಬಹುದಷ್ಟೆ. ಕೆಲ ನಾಯಕರು ಚುನಾವಣೆ ವೇಳೆ ಮತಕ್ಕಾಗಿ ತಮ್ಮ ಹಣವನ್ನು ಖರ್ಚು ಮಾಡಿರಬಹುದೇನೋ? ಅದರಾಚೆಗೆ ಜನಕಲ್ಯಾಣಕ್ಕಾಗಿ ಮನೆಯಿಂದ ಹಣವನ್ನು ತಂದು ಹಂಚುವವರು ಯಾರೂ ಇಲ್ಲ.

ಸರ್ಕಾರಿ ಸವಲತ್ತು ಪಡೆಯುವವರು ಸಮಾಜಸೇವಕರೇ?: ರಾಜಕೀಯ ನಾಯಕರನ್ನು ಮತದಾರರು ಆಯ್ಕೆ ಮಾಡಿ ಕಳುಹಿಸುವುದೇ ಜನ ಸೇವೆ ಮಾಡಲೆಂದು. ಹೀಗಿರುವಾಗ ಜನರಿಗಾಗಿ ಯಾವುದಾದರೂ ಯೋಜನೆಗಳ ಮೂಲಕ ಒಳಿತಾಗುವಂತೆ ಮಾಡಿದರೆ ಅದರಲ್ಲಿ ಸಾಧನೆ ಏನು ಬಂತು? ತಮಗೇನು ಮಾಡಿಕೊಳ್ಳದೆ ತಾವು ದುಡಿದ ಸಂಪಾದನೆಯಲ್ಲಿ ಸಮಾಜ ಸೇವೆ ಮಾಡುವ ಜನ ಬೇಕಾದಷ್ಟಿದ್ದಾರೆ.

ಸಮಾಜ ಸೇವೆ ಮಾಡುವ ಜನರ ಮುಂದೆ ರಾಜಕೀಯ ನಾಯಕರು ಶೂನ್ಯವೇ ಸರಿ. ಆದರೂ ಸಾರ್ವಜನಿಕರ ಹಣವನ್ನು ತಮ್ಮದೇ ಹಣ ಎಂಬಂತೆ ಬಿಂಬಿಸಿಕೊಂಡು ಸಮಾಜ ಸೇವೆ ಮಾಡಿದೆವು ಎಂದು ಹೇಳಿಕೊಂಡು ತಿರುಗಾಡುವ ನಾಯಕರನ್ನು ಜನ ದೂರವಿಡಬೇಕಾಗಿದೆ. ರಾಜಕೀಯವನ್ನೇ ಸಂಪಾದನೆ ಎಂಬಂತೆ ಮಾಡಿಕೊಂಡು ತಾವು ಮಾತ್ರವಲ್ಲದೆ, ತಮ್ಮ ಇಡೀ ಕುಟುಂಬವನ್ನು ದುಂಡಗೆ ಮಾಡಿಕೊಂಡಿರುವ ನಾಯಕರು ನಮ್ಮ ದೇಶದಲ್ಲಿ ಬೇಕಾದಷ್ಟು ಮಂದಿಯಿದ್ದಾರೆ.

ರಾಜಕೀಯ ನಾಯಕರಲ್ಲಿ ಎಷ್ಟು ಜನ ಸಮಾಜಕ್ಕಾಗಿ ಬದುಕುತ್ತಿದ್ದಾರೆ? ಎಂದು ನೋಡಿದರೆ ಫಲಿತಾಂಶ ಮಾತ್ರ ಶೂನ್ಯ. ಆಡಳಿತದಲ್ಲಿ ಇರುವ ಸಮಾಜ ಸೇವಕರು ಅರ್ಥಾತ್ ಜನಪ್ರತಿನಿಧಿಗಳಿಗೆ ಸರ್ಕಾರ ಹಲವು ರೀತಿಯ ಸೌಲಭ್ಯಗಳನ್ನು ನೀಡಿದೆ. ಅದೆಲ್ಲವನ್ನು ಬಳಸಿಕೊಂಡ ಮೇಲೆ ಅವರು ಹೇಗೆ ಸಮಾಜ ಸೇವಕರಾಗಲು ಸಾಧ್ಯ ಎಂಬ ಪ್ರಶ್ನೆ ಮೂಡದಿರದು.

ಮತ ತಂದು ಕೊಡುವ ಉಚಿತ ಯೋಜನೆ: ಇವತ್ತಿನ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಟಾಸ್ಕ್ ಎಂದರೂ ತಪ್ಪಾಗಲಾರದು. ಹಿಂದೆ ಚುನಾವಣೆ ಸಮಯದಲ್ಲಿ ಮತ ಸೆಳೆಯುವ ಸಲುವಾಗಿ ಹತ್ತಾರು ಭರವಸೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ನೀಡುತ್ತಿದ್ದರು. ಜನ ಮತನೀಡಿದ ಬಳಿಕ ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಭರವಸೆಗಳ ಪೈಕಿ ಒಂದಷ್ಟನ್ನು ಈಡೇರಿಸಿದರೆ ಅದೇ ಸಾಧನೆ. ಇಲ್ಲದಿದ್ದರೆ ಇಲ್ಲ.

ಇತ್ತೀಚೆಗಿನ ದಿನಗಳಲ್ಲಿ ಅರ್ಥ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಗೊತ್ತಿದ್ದರೂ ಗ್ಯಾರಂಟಿ ಯೋಜನೆಗಳನ್ನು ನೀಡಲು ರಾಜಕೀಯ ಪಕ್ಷಗಳು ಆರಂಭಿಸಿವೆ. ಈ ಉಚಿತ ಯೋಜನೆಗಳು ಜನಪ್ರಿಯವಾಗ ತೊಡಗಿವೆ. ಆದರೆ ಮುಂದೆ ಯಾವ ರೀತಿ ತೊಂದರೆಗಳು ಆಗುತ್ತವೆ ಎನ್ನುವುದನ್ನು ಮಾತ್ರ ಯೋಚನೆ ಮಾಡುತ್ತಿಲ್ಲ.

ಇದರಿಂದ ಸಮಾಜಕ್ಕೆ ತೊಂದರೆ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗಿದ್ದರೂ, ವಯಕ್ತಿಕವಾಗಿ ತಮಗೆ ಒಂದಿಷ್ಟು ಆದಾಯ ಬರುತ್ತದೆ ಎಂಬ ಸಮಾಧಾನ ಮತ್ತು ಖುಷಿ ಮತದಾರರಲ್ಲಿದೆ. ಸಾರ್ವಜನಿಕವಾಗಿ ನೋಡುವುದಾದರೆ ಉಚಿತ ಯೋಜನೆಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗುತ್ತಿದೆ. ಹಾಗಾದ್ರೆ, ಉಚಿತ ಯೋಜನೆಗಳು ಬೇಡವೇ? ಹಾಗೆಂದು ಹೇಳಲಾಗುವುದಿಲ್ಲ. ಅದು ಯಾರಿಗೆ ನೀಡಬೇಕಾಗಿತ್ತೋ ಅವರಿಗಷ್ಟೆ ನೀಡಿದ್ದರೆ ಅದರಿಂದ ಬಡತನದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗುತ್ತಿತ್ತು.

ಸರ್ಕಾರಕ್ಕೆ ಉಚಿತದ ಹೊರೆ, ಜನಕ್ಕೆ ಬೆಲೆ ಏರಿಕೆಯ ಬರೆ: ಇವತ್ತು ಅವೈಜ್ಞಾನಿಕವಾಗಿ ಉಚಿತ ಯೋಜನೆಗಳನ್ನು ನೀಡಿದ್ದರಿಂದ ಉಪಯೋಗಕ್ಕಿಂತ ದುರುಪಯೋಗ ಆಗುತ್ತಿದೆ. ಸರ್ಕಾರದ ಖಜಾನೆ ಬರಿದಾಗುತ್ತಿದೆ. ಅದನ್ನು ಭರಿಸಲು ತೆರಿಗೆ, ಬೆಲೆ ಏರಿಕೆ ಮಾಡಿ ಎಲ್ಲರಿಗೂ ಬರೆ ಎಳೆಯಲಾಗುತ್ತಿದೆ. ಮತದಾರರನ್ನು ಸೆಳೆದು ಮತ ಪಡೆದು ಅಧಿಕಾರಕ್ಕೆ ಬಂದರಾಯಿತು. ಆಮೇಲೆ ನೋಡಿಕೊಳ್ಳೋಣ ಎಂಬ ಆಲೋಚನೆಗಳಿಂದ ಅವೈಜ್ಞಾನಿಕವಾಗಿ ಕೆಲವೊಂದು ಯೋಜನೆಗಳನ್ನು ಘೋಷಿಸುವ ರಾಜಕೀಯ ಪಕ್ಷಗಳತ್ತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಇತ್ತೀಚೆಗಿನ ಚುನಾವಣೆಗಳನ್ನು ಗಮನಿಸಿದರೆ, ಎಲ್ಲಾ ಪಕ್ಷಗಳು ಉಚಿತ ಯೋಜನೆಗಳನ್ನು ಘೋಷಿಸದಿದ್ದರೆ, ಗೆಲುವು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಆದ್ದರಿಮದ ಕಲರ್ ಕನ್ನಡ ಹಾಕುತ್ತಿದ್ದಾರೆ. ನಾವು ಕಣ್ಣಿದ್ದು ಕುರುಡರಾಗುತ್ತಿದ್ದೇವೆ. ಇದು ಹೀಗೆಯೇ ಮುಂದುವರೆದರೆ ದೇಶದ ಗತಿಯೇನು? ಈಗಾಗಲೇ ಉಚಿತ ಯೋಜನೆಗಳನ್ನು ಜಾರಿ ಮಾಡಿರುವ ಬಹುತೇಕ ರಾಜ್ಯಗಳ ಪರಿಸ್ಥಿತಿ ಸಂಕಷ್ಟಕ್ಕೀಡಾಗಿದೆ. ಸಾಲದ ಹೊರೆ ಹೆಚ್ಚಾಗುತ್ತಿದೆ. ಬೆಲೆ ಏರಿಕೆ ಜನರನ್ನು ಸುಡುತ್ತಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದೆಲ್ಲವೂ ಜನರ ಕಣ್ಣಮುಂದೆಯೇ ಇದೆ. ಹಾಗಾದರೆ ಜನ ಎಚ್ಚೆತ್ತುಕೊಳ್ಳುವುದು ಯಾವಾಗ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+