Get Updates
Get notified of breaking news, exclusive insights, and must-see stories!

Ramya: ‘ನಿಮ್ಮಂತೆ ಮತ್ತೊಬ್ಬರು ಇರಲು ಸಾಧ್ಯವಿಲ್ಲ’: SM ಕೃಷ್ಣ ಕುರಿತು ನಟಿ ರಮ್ಯಾ ಭಾವುಕ ಪೋಸ್ಟ್

ಬೆಂಗಳೂರು, ಡಿಸೆಂಬರ್‌ 11: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನವು ಇಡೀ ಕರುನಾಡಿನ ಜನತೆಗೆ ತುಂಬಲಾರದಂತಹ ನಷ್ಟವಾಗಿದೆ. ಕೃಷ್ಣ ಅವರ ಅಗಲಿಕೆಗೆ ಹಲವರು ರಾಜಕೀಯ ನಾಯಕರು ಹಾಗೂ ಚಿತ್ರಂಗವೂ ಸಹ ಕಂಬನಿ ಮಿಡಿದಿದ್ದಾರೆ.

ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಆಪ್ತ ವಲಯದಲ್ಲಿದ್ದರು. ರಮ್ಯಾ ಅವರು ರಾಜಕೀಯ ಪ್ರವೇಶ ಮಾಡಿದಾಗ ಅವರಿಗೂ ಮಾರ್ಗದರ್ಶನವನ್ನು ಕೃಷ್ಣ ಅವರು ಮಾಡಿದ್ದರು. ಇದೀಗ ಅಗಲಿದ ಹಿರಿಯ ಮುತ್ಸಧಿ ಬಗ್ಗೆ ನಟಿ ರಮ್ಯಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

Actress Ramya emotional post about Former CM SM Krishna

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿದ್ದು,ʻʻಒಬ್ಬ Statesman ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು... ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.. ಎಲ್ಲದಕ್ಕಾಗಿ ಧನ್ಯವಾದಗಳು... ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್‌ಫ್ರೆಂಡ್‌ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್‌ ಎಮೊಜಿ ಹಾಕಿದ್ದಾರೆ.

ಮಂಗಳವಾರ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟಿ ರಮ್ಯಾ ಅವರು ಬೆಂಗಳೂರಿನ ಸದಾಶಿವನಗರಕ್ಕೆ ಆಗಮಿಸಿ ಎಸ್. ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟಿ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅವರು, ನಾನು ಈ ಸ್ಥಿತಿಯಲ್ಲಿ ಮಾತನಾಡಲು ಆಗಲ್ಲ ಎಂದು ತಿಳಿಸಿ ಅಲ್ಲಿಂದ ತೆರಳಿದ್ದರು.

ಕೃಷ್ಣ ಅವರನ್ನ ನೋಡಿ ನಾವು ಕಲಿಯಬೇಕು: ಡಿಕೆ ಶಿವಕುಮಾರ್

ಎಸ್.ಎಂ ಕೃಷ್ಣ ಅವರ 92 ವರ್ಷಗಳ ಶಿಸ್ತು, ವರ್ಣರಂಜಿತ ಜೀವನ ನೋಡಿ ನಾವೆಲ್ಲರೂ ಕಲೆಯಬೇಕಾಗಿರುವುದು ಬೇಕಾದಷ್ಟಿದೆ. ಅವರ ಶರೀರ ನಮ್ಮ ಜತೆ ಇಲ್ಲದಿರಬಹುದು, ಆದರೆ ಅವರ ಮಾರ್ಗದರ್ಶನ ಹಾಗೂ ಸಾಧನೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನನ್ನ ರಾಜಕಾರಣದ ಬದುಕಿನಲ್ಲಿ ಕೃಷ್ಣ ಅವರು ನನಗೆ ತಂದೆಯಂತೆ ಮಾರ್ಗದರ್ಶನ ನೀಡಿದ್ದಾರೆ. ನನ್ನನ್ನು ಪೋಷಿಸಿ ಇಲ್ಲಿವರೆಗೂ ತಂದು ನಿಲ್ಲಿಸಿದ್ದಾರೆ. ವೀರಪ್ಪ ಮೋಯ್ಲಿ ಅವರು ನನಗೆ ವಿದ್ಯಾರ್ಥಿ ನಾಯಕನಾಗಿದ್ದಾಗ ಟಿಕೆಟ್ ನೀಡಿದರು. ಬಂಗಾರಪ್ಪ ಅವರು ತಮ್ಮ ಮಂತ್ರಿಮಂಡಲದಲ್ಲಿ ನನ್ನನ್ನು ಮಂತ್ರಿ ಮಾಡಿದರು.

ರಾಜಕೀಯದ ಆರಂಭದ ದಿನಗಳಲ್ಲಿ ನಾನು ಎಸ್.ಎಂ ಕೃಷ್ಣ ಅವರ ಜತೆ ಇದ್ದವನಲ್ಲ. ಬಂಗಾರಪ್ಪನವರು ಪಕ್ಷ ಬಿಡುವ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂದು ಕೇಳಿದಾಗ, ಅವರೇ ಎಸ್.ಎಂ ಕೃಷ್ಣ ಅವರ ಬಳಿ ಹೋಗು ಎಂದು ನನಗೆ ಹೇಳಿದರು. ಆಗ ಎಸ್.ಎಂ ಕೃಷ್ಣ ಅವರ ಜತೆ ನನ್ನ ರಾಜಕಾರಣ ಆರಂಭವಾಯಿತು. ನಾನು, ಸಿ.ಎಂ. ಲಿಂಗಪ್ಪ, ಜಯಚಂದ್ರ, ನಫೀಜ್, ಶಿವಮೂರ್ತಿ ಅವರು ತಿಂಗಳುಗಟ್ಟಲೆ ದೆಹಲಿಯಲ್ಲಿ ಬೀಡುಬಿಟ್ಟು ಕೃಷ್ಣ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಏನು ಮಾಡಿದ್ದೇವೆ ಎಂದು ನಮಗೆ ಮಾತ್ರ ಗೊತ್ತು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಅನೇಕರು ನಕ್ಕರು.

ಎಸ್.ಎಂ ಕೃಷ್ಣ ಅವರು ಸೋತಾಗ ರಾಜ್ಯಸಭೆಗೆ ಕಳುಹಿಸಲು ಏನೆಲ್ಲಾ ನಡೆಯಿತು, ಸಂಪುಟ ಹೇಗೆ ರಚನೆಯಾಯಿತು ಎಂದು ಹೇಳಲು ಸಮಯ ಬೇಕಾಗುತ್ತದೆ. ಅವರು ಮುಖ್ಯಮಂತ್ರಿಯಾದಾಗ ಮಂತ್ರಿಮಂಡಲದಲ್ಲಿ ಯಾರಿರಬೇಕು ಎಂದು ಹೆಸರುಗಳನ್ನು ನಾನು ಬರೆದೆ. ಮಲ್ಲಿಕಾರ್ಜುನ ಖರ್ಗೆ ಅವರು ಆರು ಜನರನ್ನು ಸೇರಿಸಿದ್ದೀಯಾ ಎಂದು ನನಗೆ ಬೈದರು. ಆಗ ಪರಮೇಶ್ವರ್ ಅವರು ಸಂಪುಟದಲ್ಲಿ ಇರಲಿಲ್ಲ. ಆಗ ವೇಣುಗೋಪಾಲ್ ಅವರ ಬಳಿ ಎರಡನೇ ಹಂತದ ನಾಯಕರನ್ನು ಬೆಳೆಸಬೇಕು ಎಂದು ಕೇಳಿದೆ. ಆಗ ಅವರು ರಂಗನಾಥ್, ಖರ್ಗೆ ಅವರು ಇದ್ದಾರೆ. ಇನ್ನೊಬ್ಬರನ್ನು ಹೇಗೆ ಸೇರಿಸಲು ಸಾಧ್ಯ ಎಂದು ಕೇಳಿದರು. ನನಗೆ ಅವಕಾಶ ನೀಡಬೇಕು ಎಂದು ಮಂತ್ರಿಮಂಡಲಕ್ಕೆ ಸೇರಿಸಲಾಯಿತು. ನಂತರ ಅನೇಕ ವಿದ್ಯಮಾನಗಳು ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+