ಕಲ್ಲು ಹೃದಯವನ್ನು ಕರಗಿಸಬಲ್ಲ ಚರಮಗೀತೆ ವಿಡಿಯೋ
ಲಾಸ್ ಏಂಜಲೀಸ್, ನ.14: ಕಲ್ಲು ಹೃದಯವನ್ನು ಕರಗಿಸಬಲ್ಲಂಥ ವಿಡಿಯೋ ತುಣುಕೊಂಡು ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಕ್ರಿಸ್ ಎಂಬುವರ ಪತ್ನಿ ಶಿಶುವಿಗೆ ಜನ್ಮ ನೀಡಿ ಮರಣ ಹೊಂದುತ್ತಾಳೆ ನಂತರ ನವಜಾತ ಶಿಶು ಕೂಡಾ ಮರಣ ಶಯ್ಯೆಯಲ್ಲಿರುತ್ತದೆ. ಶಿಶುವಿಗಾಗಿ ಕ್ರಿಸ್ ಚರಮಗೀತೆ ಹಾಡುತ್ತಾನೆ.
ಅವಧಿಗೂ ಮುನ್ನ ಜನಸಿದ ಮಗು ಮರಣ ಹೊಂದುವುದು ಖಾತ್ರಿಯಾಗುತ್ತಿದ್ದಂತೆ ಕ್ರಿಸ್ ಪಿಕ್ಕೋ ಹೃದಯ ಒಡೆದಿದೆ. ಪತ್ನಿಯನ್ನು ಕಳೆದುಕೊಂಡಿದ್ದ ಕ್ರಿಸ್ ತನ್ನ ಕಣ್ಮುಂದೆ ಮಗು ಸಾಯುವುದನ್ನು ನೋಡಬೇಕಾದ ದಾರುಣ ಸ್ಥಿತಿಯಲ್ಲಿರುತ್ತಾನೆ.
ತನ್ನ ಶಿಶುವಿಗಾಗಿ ಚರಮಗೀತೆ ಹಾಡಲು ಕ್ರಿಸ್ ನಿರ್ಧರಿಸುತ್ತಾನೆ. ಐಸಿಯುನಲ್ಲಿದ್ದ ಮಗುವಿನ ಬಳಿ ತೆರಳಿ ಗಿಟಾರ್ ತೆಗೆದು ಬೀಟಲ್ಸ್ ನ ಬ್ಲಾಕ್ ಬರ್ಡ್ ಸಾಂಗ್ ನುಡಿಸುತ್ತಾ ಹಾಡಲು ಮುಂದಾಗುತ್ತಾನೆ. ಇದೇ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. [ನಾಲ್ವರ ಪ್ರಾಣ ಉಳಿಸಿ ತಾನೇ ಕೊಚ್ಚಿಹೋದ ದುರ್ದೈವಿ]

ನವೆಂಬರ್ 8ರಂದು ಸೀ ಸೆಕ್ಷನ್ ಗೆ ಒಳಪಟ್ಟ ಕ್ರಿಸ್ ಪಿಕೋ ಪತ್ನಿ ಆಶ್ಲೆ ಎಲಿಜಬೇತ್(ವುಡ್) ಪಿಕ್ಕೋ(30)ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪುತ್ತಾಳೆ. ಪತ್ನಿಯನ್ನು ಕಳೆದುಕೊಂಡ ಕ್ರಿಸ್ ತನ್ನ ಮಗುವಿಗೆ ಲೆನ್ನಾನ್ ಎಂದು ಹೆಸರಿಡುತ್ತಾನೆ. 24 ವಾರಗಳ ವಯಸ್ಸಿನ ಲೆನ್ನಾನ್ ಆಯಸ್ಸು ಮೂರು ದಿನಗಳು ಮಾತ್ರ ಎಂದು ತಿಳಿಯುತ್ತದೆ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]
ಲಾಸ್ ಏಂಜಲೀಸ್ ನ ಲೋಮಾ ಲಿಂಡಾ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಲೆನ್ನಾನ್ ನ.11ರಂದು ಸಾವನ್ನಪ್ಪಿದ್ದಾನೆ. ಇಂಕ್ಯೂಬೇಟರ್ ನಲ್ಲಿದ್ದ ಮಗು ಲೆನ್ನಾನ್ ಬಳಿ ತಂದೆ ಕ್ರಿಸ್ ಹಾಡಿರುವ ವಿಡಿಯೋ ಸದ್ಯಕ್ಕೆ 5,236,028 ಸಲ ವೀಕ್ಷಣೆ ಪಡೆದುಕೊಂಡಿದೆ. [ಫಾದರ್ಸ್ ಡೇ ಹಿ(ಮಿ)ಷ್ಟರಿ ಬಹಿರಂಗ]
ಲೆನ್ನಾನ್ ಜೇಮ್ಸ್ ಪಿಕ್ಕೋ ಹೆಸರಿನಲ್ಲಿ ಕ್ರಿಸ್ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ್ದಾರೆ. ಹೆಚ್ಚಿನ ವಿವರಣೆಗಳನ್ನು ಈ ವೆಬ್ ತಾಣದಲ್ಲಿ ಪಡೆಯಬಹುದು. ಮಗ ಲೆನ್ನಾನ್ ಗಾಗಿ ಕ್ರಿಸ್ ಹಾಡಿರುವ ಚರಮಗೀತೆ ವಿಡಿಯೋ ಇಲ್ಲಿದೆ ನೋಡಿ..
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications