ಪಾಕ್ ಜೈಲಿನಲ್ಲಿ ಮತ್ತೊಬ್ಬ ಭಾರತೀಯ ಮೀನುಗಾರನ ಅಂತ್ಯ, ಒಂದು ತಿಂಗಳಲ್ಲಿ ಮೂರನೇ ಸಾವು
ಇಸ್ಲಾಮಾಬಾದ್, ಮೇ. 30: ಪಾಕಿಸ್ತಾನದ ಜೈಲಿನಲ್ಲಿ ಭಾರತೀಯ ಮೀನುಗಾರರ ಸಾವು ಮುಂದುವರೆದಿದೆ. ಈಗ ಮತ್ತೊಬ್ಬ ಭಾರತೀಯ ಮೀನುಗಾರ ಮೃತಪಟ್ಟಿದ್ದಾರೆ. ಒಂದು ತಿಂಗಳಲ್ಲಿ ಪಾಕ್ ವಶದಲ್ಲಿ ಸಾವನ್ನಪ್ಪಿದ ಮೂರನೇ ಭಾರತೀಯ ಮೀನುಗಾರ ಇವರಾಗಿದ್ದು, ಕಳೆದ ಎರಡು ತಿಂಗಳಲ್ಲಿ ನಾಲ್ಕು ಮಂದಿ ಮೀನುಗಾರರು ಮೃತಪಟ್ಟಿರುವುದು ವರದಿಯಾಗಿದೆ.
ಕಳೆದ ಎರಡು ತಿಂಗಳಲ್ಲಿ ಸಾವನ್ನಪ್ಪಿದ ಇತರ ಭಾರತೀಯ ಮೀನುಗಾರರೆಂದರೆ ಬಿಚನ್ ಕುಮಾರ್ ಅಲಿಯಾಸ್ ವಿಪನ್ ಕುಮಾರ್ (ಏಪ್ರಿಲ್ 4 ರಂದು ನಿಧನರಾಗಿದ್ದಾರೆ), ಜುಲ್ಫಿಕರ್ (ಮೇ 6 ರಂದು ನಿಧನ), ಮತ್ತು ಸೋಮ ದೇವ (ಮೇ 8 ರಂದು ನಿಧನ). ಪಾಕಿಸ್ತಾನದಲ್ಲಿರುವ ಇತರ ಮೂವರು ಭಾರತೀಯ ಮೀನುಗಾರರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ದುರದೃಷ್ಟಕರ ಸಂಗತಿಯೆಂದರೆ, ಈಗ ಮೃತಪಟ್ಟಿರುವ ಜೇಥಾ ಈಗಾಗಲೇ ತನ್ನ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು. ಮೂಲಗಳ ಪ್ರಕಾರ, ಭಾರತೀಯ ಕೈದಿಗಳು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರವೂ ಪಾಕಿಸ್ತಾನವು ತನ್ನ ಜೈಲುಗಳಲ್ಲಿ 400 ಕ್ಕೂ ಹೆಚ್ಚು ಭಾರತೀಯ ಕೈದಿಗಳನ್ನು ಅಕ್ರಮವಾಗಿ ಬಂಧಿಸುವುದನ್ನು ಮುಂದುವರೆಸಿದೆ ಎಮದು ಹೇಳಿವೆ.
ಗಡಿಯ ಎರಡೂ ಬದಿಯ ಮೀನುಗಾರರ ಬಗ್ಗೆ ಸುದ್ದಿಗಳನ್ನು ಗಮನಿಸುತ್ತಿರುವವ ಹಿರಿಯ ಪತ್ರಕರ್ತ ಜತಿನ್ ದೇಸಾಯಿ ಇಂಡಿಯಾ ಟುಡೇ ಟಿವಿಗೆ, "ಇದು ದುಃಖದ ಸ್ಥಿತಿ. ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಮೀನುಗಾರರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಎರಡು ದೇಶಗಳ ಸಂವಹನದ ಕೊರತೆಯಿಂದಾಗಿ ಅವರು ಯಾವಾಗಲೂ ಪಾಕಿಸ್ತಾನದ ಜೈಲಿನಲ್ಲಿರುವ ತಮ್ಮ ಹತ್ತಿರದ ಮತ್ತು ಆತ್ಮೀಯರ ಬಗ್ಗೆ ಚಿಂತಿಸುತ್ತಾರೆ" ಎಂದಿದ್ದಾರೆ.

"ಭಾರತ ಮತ್ತು ಪಾಕಿಸ್ತಾನವು ತಮ್ಮ ಸ್ವಂತ ಕೈದಿಗಳನ್ನು ಪರೀಕ್ಷಿಸಲು ಇತರ ದೇಶಕ್ಕೆ ಭೇಟಿ ನೀಡಲು ವೈದ್ಯರ ತಂಡವನ್ನು ಅನುಮತಿಸಬೇಕು. ಇದು ಕುಟುಂಬ ಸದಸ್ಯರಿಗೆ ಸ್ವಲ್ಪ ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ತುಂಬಾ ಭಯಾನಕವಾಗಿದೆ. ಶಿಕ್ಷೆಯ ಅವಧಿ ಮುಗಿದ ನಂತರ ಮತ್ತು ರಾಷ್ಟ್ರೀಯತೆಯ ದೃಢೀಕರಣದ ನಂತರವೂ ಅವರನ್ನು ಜೈಲುಗಳಲ್ಲಿ ಇರಿಸುವುದು ಕಾನ್ಸುಲರ್ ಪ್ರವೇಶದ ಒಪ್ಪಂದ, 2008 ರ ಉಲ್ಲಂಘನೆಯಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು" ಎಂದು ಪತ್ರಕರ್ತ ಜತಿನ್ ದೇಸಾಯಿ ಆಗ್ರಹಿಸಿದ್ದಾರೆ.
2008 ರ ಕಾನ್ಸುಲರ್ ಪ್ರವೇಶದ ಒಪ್ಪಂದದ ಸೆಕ್ಷನ್ 5 ರ ಪ್ರಕಾರ, "ಎರಡೂ ಸರ್ಕಾರಗಳು ವ್ಯಕ್ತಿಗಳನ್ನು ಅವರ ರಾಷ್ಟ್ರೀಯ ಸ್ಥಾನಮಾನದ ದೃಢೀಕರಣ ಮತ್ತು ಶಿಕ್ಷೆಗಳನ್ನು ಪೂರ್ಣಗೊಳಿಸಿದ ಒಂದು ತಿಂಗಳೊಳಗೆ ಬಿಡುಗಡೆ ಮಾಡಲು ಮತ್ತು ಸ್ವದೇಶಕ್ಕೆ ಕಳುಹಿಸಲು ಒಪ್ಪಿಕೊಳ್ಳುತ್ತವೆ".
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications