Get Updates
Get notified of breaking news, exclusive insights, and must-see stories!

ಹವಾಮಾನ ವೈಪರಿತ್ಯದಿಂದ ಗಂಗಾ, ಬ್ರಹ್ಮಪುತ್ರ ಹರಿವು ಕ್ಷೀಣ: ವಿಶ್ವಸಂಸ್ಥೆ ಮುಖ್ಯಸ್ಥ

ನವದೆಹಲಿ, ಮಾರ್ಚ್‌ 23: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮುಂಬರುವ ದಶಕಗಳಲ್ಲಿ ಹಿಮನದಿಗಳು ಮತ್ತು ಮಂಜುಗಡ್ಡೆಗಳು ಕಡಿಮೆಯಾಗುವುದರಿಂದ ಭಾರತದ ಪ್ರಮುಖ ನದಿಗಳಾದ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರದಂತಹ ಪ್ರಮುಖ ಹಿಮಾಲಯದ ನದಿಗಳ ಹರಿವು ಕ್ಷೀಣಸಬಹುದು ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಹಿಮನದಿಗಳ ಸಂರಕ್ಷಣೆಯ ವರ್ಷದ ಸಮಾರಂಭದಲ್ಲಿ ಗುಟೆರಸ್‌ ಹಿಮನದಿಗಳು ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ನಿರ್ಣಾಯಕ ನೀರಿನ ಮೂಲವಾಗಿವೆ. ಶತಮಾನಗಳಿಂದ ಮಾನವರ ನೆಲೆ ಎಂದು ಕರೆಯುವ ಭೂಪ್ರದೇಶಗಳನ್ನು ಹಾನಿಯಾಗಿದೆ. ಇಂದು ನಮ್ಮ ಪ್ರಪಂಚದ 10 ಪ್ರತಿಶತವನ್ನು ಇದು ಆವರಿಸಿದೆ. ಹಿಮನದಿಗಳು ಪ್ರಪಂಚದ ನೀರಿನ ಗೋಪುರಗಳಾಗಿವೆ ಎಂದರು.

Sindhu, Ganga, Brahmaputra flow reduced due to climate change: UN chief

ಮಾನವ ಚಟುವಟಿಕೆಯು ಭೂಗ್ರಹದ ತಾಪಮಾನವನ್ನು ಅಪಾಯಕಾರಿ ಹೊಸ ಮಟ್ಟಗಳಿಗೆ ಕೊಂಡ್ಯೂಯುತ್ತಿದೆ. ಇದರಿಂದಾಗಿ ಕರಗುವ ಹಿಮನದಿಗಳು ಕಲ್ಲಿದ್ದಲು ಗಣಿಯಲ್ಲಿ ಕ್ಯಾನರಿಗಳಾಗಿವೆ. ಅಂಟಾರ್ಕ್ಟಿಕಾ ಪ್ರತಿ ವರ್ಷ ಸರಾಸರಿ 150 ಶತಕೋಟಿ ಟನ್‌ಗಳಷ್ಟು ಮಂಜುಗಡ್ಡೆಯ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತಿದೆ. ಗ್ರೀನ್ಲ್ಯಾಂಡ್ ಐಸ್ ಕ್ಯಾಪ್ ಇನ್ನೂ ವೇಗವಾಗಿ ಕರಗುತ್ತಿದೆ. ವರ್ಷಕ್ಕೆ 270 ಶತಕೋಟಿ ಟನ್ಗಳನ್ನು ಕಳೆದುಕೊಳ್ಳುತ್ತಿದೆ ಎಂದು ಗುಟೆರೆಸ್ ಕಳವಳ ವ್ಯಕ್ತಪಡಿಸಿದರು.

ಏಷ್ಯಾದಲ್ಲಿ 10 ಪ್ರಮುಖ ನದಿಗಳು ಹಿಮಾಲಯ ಪ್ರದೇಶದಲ್ಲಿ ಹುಟ್ಟಿ ಅದರ ಜಲಾನಯನ ಪ್ರದೇಶದಲ್ಲಿ ವಾಸಿಸುವ 1.3 ಶತಕೋಟಿ ಜನರಿಗೆ ಸಿಹಿನೀರನ್ನು ಪೂರೈಸುತ್ತವೆ. ಮುಂಬರುವ ದಶಕಗಳಲ್ಲಿ ಹಿಮನದಿಗಳು ಮತ್ತು ಮಂಜುಗಡ್ಡೆಗಳು ಕಡಿಮೆಯಾಗುತ್ತಿರುವುದರಿಂದ ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರದಂತಹ ಪ್ರಮುಖ ಹಿಮಾಲಯದ ನದಿಗಳು ಅದರ ಪರಿಣಾಮವನ್ನು ಅನುಭವಿಸುತ್ತವೆ. ಅವುಗಳ ಹರಿವು ಕಡಿಮೆಯಾದುದನ್ನು ನೋಡಿ, ಹಿಮಾಲಯವು ಹೇಗೆ ಹದಗೆಟ್ಟಿದೆ ಎಂಬುದನ್ನು ಜಗತ್ತು ಈಗಾಗಲೇ ನೋಡಿದೆ ಎಂದು ಗುಟೆರಸ್ ಹೇಳಿದರು.

ಹೆಚ್ಚುತ್ತಿರುವ ಸಮುದ್ರ ಮಟ್ಟವು ಉಪ್ಪುನೀರಿನ ಒಳನುಗ್ಗುವಿಕೆಯೊಂದಿಗೆ ಈ ಬೃಹತ್ ಡೆಲ್ಟಾಗಳ ದೊಡ್ಡ ಭಾಗಗಳನ್ನು ನಾಶಪಡಿಸುತ್ತದೆ ಎಂದು ಅವರು ಹೇಳಿದರು. ಯುಎನ್ 2023ರ ನೀರಿನ ಸಮಾವೇಶವು ನೀರು ಮತ್ತು ನೈರ್ಮಲ್ಯದ ಕುರಿತಾದ ಯುಎನ್ ದಶಕದ ಅನುಷ್ಠಾನದ ಮಧ್ಯಂತರ ಸಮಗ್ರ ವಿಮರ್ಶೆ (2018-2028) ಪ್ರಸ್ತುತ ಯುಎನ್ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿದೆ.

Sindhu, Ganga, Brahmaputra flow reduced due to climate change: UN chief

ತಜಕಿಸ್ತಾನ್ ಮತ್ತು ನೆದರ್‌ಲ್ಯಾಂಡ್‌ಗಳು ಸಹ ಆತೀಥ್ಯ ವಹಿಸಿದ ಈ ಮಾರ್ಚ್ 22-24 ಸಮ್ಮೇಳನವು ಯುಎನ್‌ಜಿಎ ಅಧ್ಯಕ್ಷರಿಂದ ವರದಿಗಳು ಬಿಡುಗಡೆಯಾಗುತ್ತಿದೆ. ಇದು ಯುಎನ್ ಉನ್ನತ ಮಟ್ಟದ ರಾಜಕೀಯ ವೇದಿಕೆಯ ಸುಸ್ಥಿರ ಅಭಿವೃದ್ಧಿಯ 2023 ಅಧಿವೇಶನಕ್ಕೆ ಸೇರ್ಪಡೆ ಆಗುತ್ತದೆ.

ವಿಶ್ವಸಂಸ್ಥೆ ಜಲ ಸಮ್ಮೇಳನವು ತಜಕಿಸ್ತಾನ್ ಮತ್ತು ನೆದರ್ಲ್ಯಾಂಡ್ಸ್ ಸರ್ಕಾರಗಳು ಸಹ ಆತೀಥ್ಯ ವಹಿಸಿದ 2023 ಜಲ ಸಮ್ಮೇಳನವು ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ವ್ಯವಸ್ಥೆ ಮತ್ತು ಮಧ್ಯಸ್ಥ ದೇಶಗಳನ್ನು ಕ್ರಮ ತೆಗೆದುಕೊಳ್ಳಲು ಮತ್ತು ಯಶಸ್ವಿ ಪರಿಹಾರಗಳನ್ನು ತಂದು ಸಜ್ಜುಗೊಳಿಸಲು ಜಾಗತಿಕ ಮಟ್ಟದಲ್ಲಿ ಒಂದು ಕ್ರಮವಾಗಿದೆ ಎಂದು ಯುಎನ್ ಹೇಳಿದೆ.

ಕಳೆದ 3,000 ವರ್ಷಗಳಲ್ಲಿ ಹಿಂದಿನ ಶತಮಾನಕ್ಕಿಂತ 1900ರಿಂದ ಜಾಗತಿಕ ಸರಾಸರಿ ಸಮುದ್ರ ಮಟ್ಟವು ಈಗಾಗಲೇ ವೇಗವಾಗಿ ಏರಿದೆ. ನಾವು ನಮ್ಮ ಅತೀವ ಪ್ರವೃತ್ತಿಯನ್ನು ಕಡಿಮೆ ಮಾಡದ ಹೊರತು ಪರಿಣಾಮಗಳು ದುರಂತವಾಗುತ್ತವೆ. ತಗ್ಗು ಪ್ರದೇಶದ ಸಮುದಾಯಗಳು ಮತ್ತು ದೇಶಗಳನ್ನು ಶಾಶ್ವತವಾಗಿ ನಾಶಸಬಹುದು. ನಾವು ಪ್ರಪಂಚದಾದ್ಯಂತ ಪ್ರವಾಹಗಳು, ಬರಗಳು ಮತ್ತು ಭೂಕುಸಿತಗಳು ಸೇರಿದಂತೆ ಸಂಪೂರ್ಣ ಜನಸಂಖ್ಯೆಯ ಸಾಮೂಹಿಕ ಚಲನೆಗಳಿಗೆ ನೀರು ಮತ್ತು ಭೂಮಿಗಾಗಿ ತೀವ್ರ ಪೈಪೋಟಿ ಸಾಕ್ಷಿಯಾಗುತ್ತೇವೆ ಎಂದು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+