ಬೆಂಕಿಯ ಮೇಲೆ ನಡೆಯುತ್ತಿದೆ ಪಾಪಿ ಪಾಕಿಸ್ತಾನ!
ಪಾಕಿಸ್ತಾನ ಪರಿಸ್ಥಿತಿ ಕೆಂಡದ ಮೇಲಿನ ಸೆರಗಿನಂತೆ ಆಗಿದೆ, ಅತ್ತ ಓಡುವಂತೆಯೂ ಇಲ್ಲ.. ಇತ್ತ ಅನುಭವಿಸಲೂ ಆಗಲ್ಲ.. ಹಿಂಗೆ ಪಾಕಿಸ್ತಾನ ಪರದಾಡುತ್ತಿದೆ. ಹೀಗಿದ್ದಾಲೇ ಪಾಕ್ನ ರಾಜಕಾರಣಿಗಳು ದೇಶಕ್ಕೆ ಬೆಂಕಿ ಹಚ್ಚಿ ಜೋಳ ಬೇಯಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಆ ಕಡೆ ಇರಲಿ ಅನ್ನುವಾಗಲೇ ಪಾಕಿಸ್ತಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ, ಯಾಕೆ ಗೊತ್ತಾ?
ಹೌದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಅಧಿಕಾರಿಯೊಬ್ಬರ ಆರೋಪದ ಬಗ್ಗೆ ತನಿಖೆ ನೆಡೆಸಲು ಪಾಕಿಸ್ತಾನ ಚುನಾವಣಾ ಆಯೋಗ ಉನ್ನತ ಮಟ್ಟದ ಸಮಿತಿ ರಚಿಸಿದೆ. ಪಾಕಿಸ್ತಾನದ ಚುನಾವಣೆಯಲ್ಲಿ ಭಾರಿ ದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪವನ್ನ ಇತ್ತೀಚೆಗೆ ಪಾಕ್ ಚುನಾವಣೆ ಅಧಿಕಾರಿ ಒಬ್ಬರು ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಇಂತಹ ನಿರ್ಧಾರ, ಕೈಗೊಂಡಿದೆ ಪಾಕಿಸ್ತಾನ ಚುನಾವಣಾ ಆಯೋಗ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

1 ವಾರದ ಹಿಂದೆ ಸಂಸತ್ ಚುನಾವಣೆ
ಪಾಕಿಸ್ತಾನದಲ್ಲಿ 1 ವಾರದ ಹಿಂದೆ ಸಂಸತ್ ಚುನಾವಣೆ ನಡೆದಿತ್ತು. ತಾಂತ್ರಿಕವಾಗಿ ಭಾರಿ ಹಿಂದೆ ಉಳಿದಿರುವ ಕಾರಣ, ಹಲವು ದಿನಗಳ ಕಾಲ ಮತ ಎಣಿಕೆಯು ನಡೆದು ಚುನಾವಣೆ ಫಲಿತಾಂಶ ಹೊರಬಿದ್ದಿತ್ತು. ಪಾಕಿಸ್ತಾನದಲ್ಲಿ ಯಾರಿಗೂ ಬಹುಮತ ಸಿಕ್ಕಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ಇದೀಗ ಸೃಷ್ಟಿಯಾಗಿದೆ. ಹೀಗಿದ್ದಾಗ ಅಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೊರತಾಗಿ ಸರ್ಕಾರ ರಚನೆ ಮಾಡಲು ಇಮ್ರಾನ್ ಶತ್ರುಗಳು ಪ್ಲ್ಯಾನ್ ಮಾಡಿದ್ದಾರೆ. ಹೀಗಿದ್ದಾಗಲೆ ಸ್ಫೋಟಕ ಆರೋಪವನ್ನ ಮಾಡಿದ್ದಾರೆ ಪಾಕಿಸ್ತಾನ ಚುನಾವಣಾ ಅಧಿಕಾರಿ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಚುನಾವಣೆ ಆಯೋಗ ಅಲರ್ಟ್ ಆಗಿದೆ.
ಗಂಭೀರ ತನಿಖೆ ಗ್ಯಾರಂಟಿ?
ಪಾಕಿಸ್ತಾನ ಚುನಾವಣಾ ಆಯೋಗ ಮುಖ್ಯ ಆಯುಕ್ತರು & ಮುಖ್ಯ ನ್ಯಾಯಮೂರ್ತಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಪಾಕಿಸ್ತಾನ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಪಾಕಿಸ್ತಾನ ಅಧಿಕಾರಿ ಆರೋಪ ಮಾಡಿದ್ದರು. ರಾವಲ್ಪಿಂಡಿ ಮಾಜಿ ಆಯುಕ್ತ, ಲಿಯಾಖತ್ ಅಲಿ ಛತ್ತಾ ಈ ರೀತಿ ಆರೋಪ ಮಾಡಿದ್ದಾರೆ. ಇದೀಗ ಈ ಬಗ್ಗೆ ಗಂಭೀರ ತನಿಖೆಗೆ ಪಾಕಿಸ್ತಾನ ಚುನಾವಣೆ ಆಯೋಗ ಮುಂದಾಗಿದೆ.

ಪಾಕ್ ಆಯೋಗದ ತುರ್ತು ಸಭೆ
ಈ ಆರೋಪದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಆಯೋಗ, ಹಿರಿಯ ಅಧಿಕಾರಿ ಆರೋಪದ ಬಗ್ಗೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮುಖ್ಯ ಚುನಾವಣೆ ಆಯುಕ್ತ ಸಿಖಂದರ್ ಸುಲ್ತಾನ್ ರಜಾ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾವಹಿಸಿದ್ದರು. ಹಾಗೇ ಉನ್ನತ ಮಟ್ಟದ, ಸಮಿತಿ ಆರೋಪ ಕೇಳಿಬಂದ ಜಿಲ್ಲೆಗಳ ಚುನಾವಣಾಧಿಕಾರಿ, ಸಂಬಂಧಿತ ಅಧಿಕಾರಿಗಳ ಹೇಳಿಕೆ ದಾಖಲಿಸಲಿದೆ. 3 ದಿನದಲ್ಲಿ ವರದಿ ಸಲ್ಲಿಸಲಿದೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ?
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಪಾಕಿಸ್ತಾನದಲ್ಲಿ ಹೇಗಾದರೂ ಮಾಡಿ ಸರ್ಕಾರ ರಚಿಸಬೇಕೆಂಬ ಹುಮ್ಮಸ್ಸಿನಲ್ಲಿ ಮಾಜಿ ಪ್ರಧಾನಿ, ನವಾಜ್ ಷರೀಫ್ & ಟೀಂ ಇದೆ. ಮೈತ್ರಿ ಸರ್ಕಾರ ರಚನೆಗೆ ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಮತ್ತು ಬಿಲಾವಲ್ ಭುಟ್ಟೊ ನೇತೃತ್ವದ ಪಿಪಿಪಿ, ಪ್ರಯತ್ನ ನಡೆಸುತ್ತಿದೆ. ನವಾಜ್ ಷರೀಫ್ ಪಕ್ಷ 75 & ಬಿಲಾವಲ್ ಬುಟ್ಟೋ ಪಕ್ಷವು 54 ಸ್ಥಾನ ಗೆದ್ದಿದೆ. 17 ಸ್ಥಾನ ಗೆದ್ದಿರುವ ಎಂಕ್ಯೂಎಂ-ಪಿ ಕೂಡಾ ಮೈತ್ರಿ ಬೆಂಬಲಿಸಲು ತೀರ್ಮಾನಿಸಿದ್ದು, ಈ ಎಲ್ಲಾ ಕಾರಣಗಳ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆಗೂ ಪಾಕಿಸ್ತಾನವು ಈಗ ಸಾಕ್ಷಿ ಆಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications