ಹಮಾಸ್ ಇಸ್ರೇಲ್ ಯುದ್ಧ: ಪರದೆಯ ಮೇಲೆ ಮಾತ್ರವಲ್ಲ ನಿಜಜೀವನದಲ್ಲೂ ಹೀರೋ ಆದ ನಟ!
ಇಸ್ರೇಲ್ನಲ್ಲಿ ಹಮಾಸ್ ಉಗ್ರರ ಅಟ್ಟಹಾಸ ಇನ್ನೂ ಕೊನೆಗೊಂಡಿಲ್ಲ. ದಾಳಿ ಪ್ರತಿದಾಳಿಯಲ್ಲಿ ಅಪಾರ ಸಾವು ನೋವು ಸಂಭವಿಸಿವೆ. ಈ ನಡುವೆ ನಟನೊಬ್ಬ ಹಮಾಸ್ ಉಗ್ರರ ವಿರುದ್ಧ ಹೋರಾಡಲು ಇಸ್ರೇಲ್ ಸೇನೆಯನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಸ್ವತ: ನಟನೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಹೌದು.... ಹಮಾಸ್ ವಿರುದ್ಧ ಪರದೆಯ ಮೇಲೆ ಯುದ್ಧ ಮಾಡಿದ ನಟ ನಿಜವಾಗಿಯೂ ಯುದ್ಧಭೂಮಿಗಿಳಿದಿದ್ದಾರೆ. "ಫೌಡಾ" ವೆಬ್ ಸರಣಿಯ ಸ್ಟಾರ್ ನಟ ಇಡಾನ್ ಅಮೆಡಿ ಅವರು ಹಮಾಸ್ ಭಯೋತ್ಪಾದಕರನ್ನು ಮಟ್ಟ ಹಾಕಲು ಇಸ್ರೇಲ್ ಸೇನೆಯೊಂದಿಗೆ ಕೈ ಜೋಡಿಸಿದ್ದಾರೆ.

ಅವರು ಪರದೆಯನ್ನು ತೊರೆದು ನಿಜವಾಗಿ ಇಸ್ರೇಲ್ ಸೇನೆಯೊಂದಿಗೆ ಯುದ್ಧಕ್ಕೆ ಸೇರಿಕೊಂಡಿದ್ದಾರೆ. ಇಡಾನ್ ಅಮೆಡಿ ಅವರು ಒಬ್ಬ ನಟ ಮಾತ್ರವಲ್ಲದೆ ಗಾಯಕ ಮತ್ತು ಗೀತರಚನೆಕಾರನೂ ಆಗಿದ್ದಾರೆ. ಆದರೆ ದೇಶದ ಅಗತ್ಯತೆಗೆ ಅನುಗುಣವಾಗಿ ಅವರು ಸಮವಸ್ತ್ರವನ್ನು ಸಹ ಧರಿಸಿದ್ದಾರೆ.
ಈ ಹಿಂದೆ ಈ ಜನಪ್ರಿಯ ಧಾರಾವಾಹಿಯ ನಿರ್ಮಾಪಕ ಮತ್ತು ನಾಯಕ ನಟ ಲಿಯೋರ್ ರಾಜ್ ಕೂಡ ಅದೇ ಹಾದಿಯನ್ನು ಅನುಸರಿಸಿದರು. ಮೊಸ್ಸಾದ್ ಏಜೆಂಟ್ಗಳ ಕುರಿತು ನಿರ್ಮಿಸಲಾದ ''ಫೌಡಾ" ಈ ಸರಣಿಯು ಗಾಜಾ ಸಮಸ್ಯೆ, ಗಡಿ ಘರ್ಷಣೆಗಳು, ಭಯೋತ್ಪಾದಕ ದಾಳಿಯಂತಹ ಘಟನೆಗಳನ್ನು ತೋರಿಸುತ್ತದೆ.
ಇದರಲ್ಲಿ ಲಿಯೋರ್ ದೇಶಕ್ಕಾಗಿ ಸಾವಿನೊಂದಿಗೆ ಹೋರಾಡುವುದನ್ನು ನೋಡುತ್ತಾರೆ. ಆದರೀಗ ನಿಜವಾಗಿಯೂ ಇಸ್ರೇಲ್ ಸೇನೆಯೊಂದಿಗೆ ಕೈ ಜೋಡಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಇತ್ತೀಚಿನ ಸಂಘರ್ಷದಲ್ಲಿ ಅವರು ಇಸ್ರೇಲಿ ನಗರವಾದ ಸ್ಡೆರೋಟ್ಗೆ ಹೋದರು ಮತ್ತು ಹಮಾಸ್ನಿಂದ ಅನೇಕ ಕುಟುಂಬಗಳನ್ನು ಉಳಿಸಿದರು.
ಲಿಯೋರ್ ಅವರ ಸಹನಟ ಇಡಾನ್ ಕೂಡ ಹಾಗೆಯೇ ಮಾಡಿದರು. ಇವರು ಇಸ್ರೇಲ್ ರಕ್ಷಣಾ ಪಡೆಗಳಿಗೆ ಸೇರಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ವಿಡಿಯೋದಲ್ಲಿ ಅವರು ಹಮಾಸ್ ವಿರುದ್ಧ ಹೋರಾಡಲು ರಕ್ಷಣಾ ಪಡೆಗಳನ್ನು ಸೇರುವ ನಿರ್ಧಾರದ ಬಗ್ಗೆ ಮಾತನಾಡಿದರು.
ಅವರ ಮಾತಿನಲ್ಲಿ, "ನೀವು ನೋಡಬಹುದು, ನಾನು ಇಂದು ಸ್ವಲ್ಪ ವಿಭಿನ್ನವಾದ ಬಟ್ಟೆಯನ್ನು ಧರಿಸಿದ್ದೇನೆ. ಇದು ಫೌಡಾದ ದೃಶ್ಯವಲ್ಲ, ಇದು ನಿಜ ಜೀವನ... ಇಸ್ರೇಲ್ನ ದಕ್ಷಿಣದಲ್ಲಿ ಘಟನೆ ನಡೆದ ತಕ್ಷಣ ನಾನು ಸೈನ್ಯವನ್ನು ಸೇರಿಕೊಂಡೆ... ಶೀಘ್ರದಲ್ಲೇ ನಾವು ಶಾಂತ ದಿನಗಳನ್ನು ನೋಡುತ್ತೇವೆ ಎಂದು ನಾನು ಭಾವಿಸುತ್ತೇನೆ'' ಎಂದು ಅವರು ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications