ಹರಿಕೇನ್ ಅಟ್ಟಹಾಸಕ್ಕೆ ಸೋತು ಹೋದ ಅಮೆರಿಕದ ಕರಾವಳಿ ರಾಜ್ಯ...
ಅಮೆರಿಕದ ಕರಾವಳಿ ರಾಜ್ಯ ಎಂದೇ ಕರೆಯಲಾಗುವ ಫ್ಲೊರಿಡಾ ಇದೀಗ ಬೆಚ್ಚಿಬಿದ್ದಿದೆ. ಈ ರೀತಿ ಫ್ಲೊರಿಡಾ ರಾಜ್ಯದಲ್ಲಿ ತೀವ್ರ ಆತಂಕ ಮನೆಮಾಡಲು ಕಾರಣವಾಗಿದ್ದು 'ಮಿಲ್ಟನ್' ಮಹಾ ಚಂಡಮಾರುತ. 100 ಕಿಲೋ ಮೀಟರ್ಗೂ ಹೆಚ್ಚು ವೇಗದಲ್ಲಿ ಬಂದು ಫ್ಲೊರಿಡಾ ರಾಜ್ಯದ ಕರಾವಳಿಗೆ ಅಪ್ಪಳಿಸಿದ 'ಮಿಲ್ಟನ್' ಮಹಾ ಚಂಡಮಾರುತ, ಎಲ್ಲೆಲ್ಲೂ ಅನಾಹುತ ಸೃಷ್ಟಿ ಮಾಡಿದೆ. ಅದ್ರಲ್ಲೂ ಹರಿಕೇನ್ ಅಟ್ಟಹಾಸಕ್ಕೆ ಸೋತು ಹೋದ ಅಮೆರಿಕದ ಕರಾವಳಿ ರಾಜ್ಯ ಫ್ಲೊರಿಡಾ ರಾಜ್ಯದಲ್ಲಿ ಇದೀಗ ಎಲ್ಲೆಲ್ಲೂ ಬರೀ ನೀರೇ ಕಾಣುತ್ತಿದೆ.
ನೀರು.. ನೀರು.. ನೀರು.. ಎಲ್ಲಿ ನೋಡಿದರೂ ಬರೀ ನೀರೇ ನೀರು.. ಅಂದಹಾಗೆ ಇದು ಅಮೆರಿಕದ ಫ್ಲೊರಿಡಾ ರಾಜ್ಯದ ಪರಿಸ್ಥಿತಿ. ಯಾಕಂದ್ರೆ ಫ್ಲೊರಿಡಾ ರಾಜ್ಯದಲ್ಲಿ ಚಂಡಮಾರುತ ಆರ್ಭಟಿಸಿದ ಕಾರಣಕ್ಕೆ ದೊಡ್ಡ ಅನಾಹುತ ಸೃಷ್ಟಿಯಾಗಿ ಹೋಗಿದೆ. ಲಕ್ಷಾಂತರ ಜನ ಈಗ ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡು ಪರದಾಡುತ್ತಿದ್ದರೆ, ಇನ್ನೊಂದು ಕಡೆ 'ಮಿಲ್ಟನ್' ಮಹಾ ಚಂಡಮಾರುತದ ಅಬ್ಬರದ ಕಾರಣಕ್ಕೆ ಭಾರಿ ಭರ್ಜರಿ ಮಳೆ ಬಿದ್ದಿದೆ. ಹೀಗಾಗಿ ಅಲ್ಲಿ ಅಂದ್ರೆ ಫ್ಲೊರಿಡಾ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ. ಭೀಕರ ಪ್ರವಾಹ ಹಿನ್ನೆಲೆ ಲಕ್ಷಾಂತರ ಮನೆಗಳಿಗೆ ಇದೀಗ ನೀರು ನುಗ್ಗಿದೆ.

ಜೀವ ಉಳಿಸಿಕೊಳ್ಳಲು 10 ಲಕ್ಷ ಜನ...
'ಮಿಲ್ಟನ್' ಮಹಾ ಚಂಡಮಾರುತ ಇದೇ ರೀತಿಯಾಗಿ ಅಬ್ಬರಿಸುವ ಮುನ್ಸೂಚನೆ ಮೊದಲೇ ನೀಡಲಾಗಿತ್ತು. ಹೀಗಾಗಿಯೇ ಅಮೆರಿಕದ ಸರ್ಕಾರ & ಫ್ಲೊರಿಡಾ ಆಡಳಿತ ಮುನ್ಸೂಚನೆಯ ನೀಡಿತ್ತು. ಇದರ ಜೊತೆಗೆ 'ಮಿಲ್ಟನ್' ಚಂಡಮಾರುತ ಮೊದಲಿಗೆ ಬಂದು ಭೂಮಿಗೆ ತನ್ನ ಎಂಟ್ರಿ ಕೊಡುವ ಜಾಗದಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಈಗ ಲಕ್ಷ, ಲಕ್ಷ ಜನರ ಜೀವ ಉಳಿಸಲಾಗಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಚಂಡಮಾರುತ ಅಪ್ಪಳಿಸುವ ಮೊದಲು ಸ್ಥಳಾಂತರ ಮಾಡಲಾಗಿತ್ತು.
12 ಜನರು ಚಂಡಮಾರುತಕ್ಕೆ ಬಲಿ
ಈಗ 'ಮಿಲ್ಟನ್' ಚಂಡಮಾರುತದ ಅಬ್ಬರದ ಕಾರಣಕ್ಕೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ. 'ಮಿಲ್ಟನ್' ಮಹಾ ಚಂಡಮಾರುತ ಫ್ಲೊರಿಡಾ ರಾಜ್ಯಕ್ಕೆ ಅಪ್ಪಳಿಸುವ ಬಗ್ಗೆ ಅಮೆರಿಕದಲ್ಲಿ ಭಾರಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಅಮೆರಿಕದ ಸರ್ಕಾರ ಹಾಗೂ ಫ್ಲೊರಿಡಾ ರಾಜ್ಯದ ಆಡಳಿತ ಕ್ರಮ ಕೈಗೊಂಡಿದ್ದರೂ ಈವರೆಗೂ ಸುಮಾರು 12 ಜನರನ್ನು ಬಲಿ ಪಡೆದಿದೆ ಈ 'ಮಿಲ್ಟನ್' ಮಹಾ ಚಂಡಮಾರುತ.
ಮತ್ತೊಂದ್ಕಡೆ ಅತ್ಯಂತ ಸೂಕ್ಷ್ಮ ಪ್ರದೇಶದಿಂದ ಜಾಗ ಖಾಲಿ ಮಾಡಿ ಎಂದು ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ, ಫ್ಲೊರಿಡಾದ ಕರಾವಳಿ ಭಾಗದ ಜನ ಹಾಗೂ ಫ್ಲೊರಿಡಾ ರಾಜ್ಯದ ಮಧ್ಯ ಭಾಗದಲ್ಲಿ ಜೀವನ ಕಟ್ಟಿಕೊಂಡಿದ್ದ ಜನರು ಎದ್ದು ಬಿದ್ದು ಮನೆ ಖಾಲಿ ಮಾಡಿಕೊಂಡು ಓಡಿದ್ದರು. ಈಗ ಅವರೆಲ್ಲಾ ವಾಪಸ್ ಬಂದು ನೋಡಿದರೆ 'ಮಿಲ್ಟನ್' ಸೈಕ್ಲೋನ್ ಅಬ್ಬರಕ್ಕೆ ಅವರ ಮನೆಗಳೆಲ್ಲಾ ಛಿದ್ರ ಛಿದ್ರವಾಗಿ ಹೋಗಿವೆ. ಮತ್ತೆ ಬಹುತೇಕರ ಮನೆಗಳು ನೀರಿನಿಂದ ತುಂಬಿ ಹೋಗಿವೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications