ಚಿಲಿಯ ಅಂಟಾರ್ಕ್ಟಿಕಾ ಕರಾವಳಿಯಲ್ಲಿ ಭಾರಿ ಭೂಕಂಪ, ಸುನಾಮಿ ಅಲರ್ಟ್
ಸ್ಯಾಂಟಿಯಾಗೋ, ಜನವರಿ 24: ಚಿಲಿಯ ಅಂಟಾರ್ಕ್ಟಿಕಾ ಕರಾವಳಿಯಲ್ಲಿ ಶನಿವಾರದಂದು ಭಾರಿ ಪ್ರಮಾಣದ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 7.0 ತೀವ್ರತೆ ಕಂಡು ಬಂದಿದೆ. ಚಿಲಿಯ ಎಡ್ವರ್ಡೊ ಫ್ರೀ ಬೇಸ್ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಡ್ವರ್ಡೊ ಫ್ರೀ ಬೇಸ್ ನಿಂದ ಪೂರ್ವಕ್ಕೆ 210 ಕಿಲೋಮೀಟರ್ (130 ಮೈಲಿ) ದೂರದಲ್ಲಿ ಶನಿವಾರ ರಾತ್ರಿ 8: 36 ಕ್ಕೆ (23:36 ಜಿಎಂಟಿ) 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಚಿಲಿಯ ರಾಷ್ಟ್ರೀಯ ತುರ್ತು ಕಚೇರಿ (Onemi) ಎಚ್ಚರಿಕೆ ನೀಡಿದೆ.
ಅಂಟಾರ್ಕ್ಟಿಕ್ ಕರಾವಳಿ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಚಿಲಿಯ ವಾಯುನೆಲೆಯ ಸುತ್ತಾ ಹಳ್ಳಿ, ಆಸ್ಪತ್ರೆ, ಶಾಲೆ, ಬ್ಯಾಂಕ್, ಅಂಚೆ ಕಚೇರಿ ಮತ್ತು ಪ್ರಾರ್ಥನಾ ಮಂದಿರಗಳಿದ್ದು, ಅಂಟಾರ್ಕ್ಟಿಕಾದಲ್ಲಿ ದೇಶದ ಅತಿದೊಡ್ಡ ಜನನಿಬಿಡ ಪ್ರದೇಶ ಎನಿಸಿಕೊಂಡಿದೆ. ಬೇಸಿಗೆಯಲ್ಲಿ ಗರಿಷ್ಠ ಜನಸಂಖ್ಯೆ 150 ಜನ, ಮತ್ತು ಚಳಿಗಾಲದಲ್ಲಿ ಸರಾಸರಿ ಜನಸಂಖ್ಯೆ 80 ದಾಟಲ್ಲ.

ಇದಲ್ಲದೆ, ಸ್ಯಾಂಟಿಯಾಗೊ ಬಳಿ 5.9 ತೀವ್ರತೆಯ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಹಾನಿ ಅಥವಾ ನಂತರದ ಪರಿಣಾಮ ಸಂಭವಿಸಿಲ್ಲ ಎಂದು ಒನೆಮಿ ಹೇಳಿದೆ. ವಿಶ್ವದ ಅತ್ಯಂತ ಭೂಕಂಪನಶೀಲ ದೇಶಗಳಲ್ಲಿ ಚಿಲಿ ಕೂಡಾ ಒಂದಾಗಿದೆ. ಫೆಬ್ರವರಿ 27, 2010 ರಂದು ಕಾನ್ಸೆಪ್ಷನ್ ನಗರದಲ್ಲಿ ರಿಕ್ಟರ್ ಮಾಪಕದಲಿ 8.8-ಪ್ರಮಾಣದ ಭೂಕಂಪದಿಂದಾಗಿ 500 ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ವಾಲ್ಡಿವಿಯಾ ನಗರದಲ್ಲಿ 9.6 ತೀವ್ರತೆಯ ಭೂಕಂಪ ಸಂಭವಿಸಿ, 60 ವರ್ಷಗಳು ಕಳೆದಿದ್ದು, ಇಲ್ಲಿ ತನಕದ ಅತ್ಯಂತ ಪ್ರಬಲ ಕಂಪನ ಎನಿಸಿಕೊಂಡಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications