India & China: ಭಾರತದ ‘ಜೇಮ್ಸ್ ಬಾಂಡ್’ ಚೀನಾಗೆ, ಜಗತ್ತಿನ ಗಮನ ಸೆಳೆದ ಮಾತುಕತೆ!
ಭಾರತ & ಚೀನಾ ನಡುವೆ 2020ರ ಸಮಯದಲ್ಲಿ ಘೋರ ಯುದ್ಧವೇ ನಡೆದು ಹೋಗುತ್ತಾ? ಎಂಬ ಭಯದ ವಾತಾವರಣ ನಿರ್ಮಾಣ ಆಗಿತ್ತು. ಯಾಕಂದ್ರೆ ಭಾರತ & ಚೀನಾ ಗಡಿಯಲ್ಲಿ ಸೈನಿಕರ ನಡುವೆ ಘೋರ ಕಾಳಗ ನಡೆದಿತ್ತು. ಭಾರತೀಯ ಸೈನಿಕರು ಚೀನಾ ಸೈನಿಕರನ್ನು, ಚೀನಾ ಸೇನಾ ವಾಹನಗಳನ್ನು ಅಟ್ಟಾಡಿಸಿ ಬಡಿದಿದ್ದರು. ಭಾರತದ ಗಡಿಗೆ ಬಂದಿದ್ದ ಚೀನಾ ಸೇನೆಗೆ ಈ ಮೂಲಕ ಬುದ್ಧಿ ಕಲಿಸಿದ್ದರು. ಅಲ್ಲದೆ ಭಾರತದ ಹಲವು ಸೈನಿಕರು ಹುತಾತ್ಮರಾದರೆ, ಚೀನಾ ಕಡೆ ಹತ್ತಾರು ಸೈನಿಕರು ಜೀವ ಬಿಟ್ಟರು ಎಂಬ ಆರೋಪ ಕೇಳಿಬಂತು.
ಹೀಗೆ, ಭಾರತ & ಚೀನಾ ಸಂಬಂಧ 2020ರ ಸಮಯದಲ್ಲಿ ಅತ್ಯಂತ ಸೂಕ್ಷ್ಮ ಸ್ಥಿತಿಗೆ ತಲುಪಿ, ಇನ್ನೇನು ಎರಡೂ ದೇಶಗಳ ನಡುವೆ ಯುದ್ಧ ಗ್ಯಾರಂಟಿ ಎಂಬ ಭಯ ಆವರಿಸಿತ್ತು. ಆದರೆ ಕೆಲವು ತಿಂಗಳಿಂದ ಭಾರತ & ಚೀನಾ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದ್ದು, ಭಾರತದ 'ಜೇಮ್ಸ್ ಬಾಂಡ್' ಅಂತಾನೇ ಖ್ಯಾತಿ ಪಡೆದಿರುವ ಅಜಿತ್ ದೋವಲ್ ಚೀನಾ ನೆಲಕ್ಕೆ ಎಂಟ್ರಿ ಕೊಟ್ಟು ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಹಾಗಾದ್ರೆ ಅಜಿತ್ ದೋವಲ್ ಚೀನಾ ಭೇಟಿಯಲ್ಲಿ ಏನೆಲ್ಲಾ ಆಗೋಯ್ತು? ಮುಂದೆ ಓದಿ.

ಭಾರತದ 'ಜೇಮ್ಸ್ ಬಾಂಡ್' ಎಂಟ್ರಿ!
ಮೊದಲೇ ಹೇಳಿದಂತೆ ಭಾರತ & ಚೀನಾ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ. ಅದರಲ್ಲೂ ಭಾರತ & ಚೀನಾ ಸಂಬಂಧ ಹಾಳು ಮಾಡಲು ಕಾಯುತ್ತಿದ್ದ ಕೆಲವು ಶತ್ರುಗಳನ್ನ ದೂರ ಇಟ್ಟು ಎರಡೂ ದೇಶಗಳು ಇದೀಗ ಸಂಬಂಧ ಸುಧಾರಣೆಗೆ ಮುಂದಾಗಿವೆ. ಪರಿಸ್ಥಿತಿ ಹೀಗೆ ಸುಧಾರಣೆ ಕಾಣುವ ಸಮಯದಲ್ಲೇ ಮತ್ತೊಂದು ಪ್ರಮುಖ ಘಟನೆ ನಡೆದಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾಗೆ ಭೇಟಿಯನ್ನು ನೀಡಿದ್ದು, ಚೀನಾ ವಿದೇಶಾಂಗ ಸಚಿವರ ಜೊತೆಗೆ ಮಹತ್ವದ ಮಾತುಕತೆ ನಡೆದಿದೆ. ಅಲ್ಲದೆ ಈ ಸಮಯದಲ್ಲಿ ಭಾರತ & ಚೀನಾ ಗಡಿ ಸಮಸ್ಯೆ ಬಗ್ಗೆ ಕೂಡ ಮಾತುಕತೆ ನಡೆದಿದೆ ಅಂತ ಹೇಳಲಾಗಿದೆ. ಈ ಮೂಲಕ ಬರೋಬ್ಬರಿ 5 ವರ್ಷಗಳ ಗ್ಯಾಪ್ ನಂತರ ಭಾರತ & ಚೀನಾದ ನಡುವೆ ಮಹತ್ವದ ಗಡಿ ಮಾತುಕತೆ ಆರಂಭವಾಗಿದೆ.
ಚೀನಾ ವಿದೇಶಾಂಗ ಸಚಿವರ ಜೊತೆ ದೋವಲ್
ಭಾರತ & ಚೀನಾ ನಡುವಿನ ಸಂಬಂಧ ಸುಧಾರಣೆ ಆಗಬೇಕು ಎಂಬುದು ರಷ್ಯಾ ಸೇರಿದಂತೆ ಹಲವು ದೇಶಗಳ ಒತ್ತಾಸೆ ಆಗಿತ್ತು. ಅದರಲ್ಲೂ ಭಾರತ & ಚೀನಾ ನಡುವೆ ಒಗ್ಗಟ್ಟು ಮೂಡಿ ಎರಡೂ ದೇಶಗಳು ಒಂದಾಗಿ ನಿಂತರೆ ಏಷ್ಯಾ ಖಂಡ ಇಡೀ ಜಗತ್ತಿನಲ್ಲೇ ಶಕ್ತಿಶಾಲಿ ಆಗಲಿದೆ, ಈ ಮೂಲಕ ಭಾರಿ ದೊಡ್ಡ ಬದಲಾವಣೆ ಜಾಗತಿಕ ಮಟ್ಟದಲ್ಲಿ ಗ್ಯಾರಂಟಿ ಎನ್ನಲಾಗಿತ್ತು. ಎಲ್ಲ ಲೆಕ್ಕಾಚಾರಗಳ ನಡುವೆ ಇದೀಗ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾ ವಿದೇಶಾಂಗ ಸಚಿವರನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications