ಚೀನಾ & ಭಾರತ ನಡುವೆ ಮಾತಿನ ಕಿರಿಕ್: ಮಾತುಕತೆಗೆ ಕರೆದಿದ್ದು ಯಾರು?
ಭಾರತದ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಹೀಗಾಗಿ ಇದಕ್ಕೆಲ್ಲ ಒಂದು ಅಂತ್ಯ ಹಾಡಲು ಎರಡೂ ದೇಶಗಳು ಮುಂದಾಗಲಿವೆ ಎಂಬ ಭರವಸೆ ಇತ್ತು. ಈ ಭರವಸೆ ಇನ್ನೇನು ಈಡೇರಿತು ಅಂತಾ ಅಂದುಕೊಳ್ಳಲಾಗಿತ್ತು. ಆದರೆ ಮತ್ತೆ ಕಿರಿಕ್ ಶುರುವಾಗಿದ್ದು, ಚೀನಾ ಮತ್ತು ಭಾರತದ ನಡುವೆ ಮಾತಿನ ಕಿರಿಕ್ ಜೋರಾಗಿದೆ. ಹಾಗಾದರೆ ಈ ಕಿರಿಕಿರಿ ಶುರುವಾಗಿದ್ದು ಯಾಕೆ? ಬನ್ನಿ ತಿಳಿಯೋಣ.
ಹೌದು, ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿ ನಡೆದಿದ್ದ ಬ್ರಿಕ್ಸ್ ಶೃಂಗ ಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮಹತ್ವದ ಮಾತುಕತೆ ನಡೆಸಿದ್ದರು. ಈ ಚರ್ಚೆ ವೇಳೆ ಗಡಿ ವಿಚಾರ ಕೂಡ ಪ್ರಸ್ತಾಪ ಮಾಡಲಾಗಿತ್ತು. ಗಡಿಯ ವಿವಾದಕ್ಕೆ ಅಂತ್ಯ ಕಾಣಿಸೋದಕ್ಕೆ ಭಾರತ & ಚೀನಾ ನಾಯಕರು ಒಪ್ಪಿಗೆ ಸೂಚಿಸಿದ್ದರು. ಕಳೆದ 3 ವರ್ಷಗಳಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಭಾರತ ಗಡಿ ಭಾಗಕ್ಕೆ ಈಗಲಾದರೂ ನೆಮ್ಮದಿ ಸಿಗುತ್ತಾ? ಅನ್ನೋ ಪ್ರಶ್ನೆ ಮೂಡಿತ್ತು ಹಾಗೂ ನಿರಿಕ್ಷೆಯೂ ಹೆಚ್ಚಾಗಿತ್ತು. ಆದ್ರೆ ಇರೋ ವಿಚಾರ ಬಿಟ್ಟು, ಇಲ್ಲದಿರೋ ವಿಚಾರಕ್ಕೆ ಇದೀಗ ಕ್ಯಾತೆ ಶುರುವಾಗಿದೆ.

ಚರ್ಚೆಗೆ ಕರೆದಿದ್ದು ಭಾರತ ಅಥವಾ ಚೀನಾ?
ಇದಕ್ಕೆ ಅಲ್ವಾ ಹೇಳೋದು ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೋಂಡ್ರು ಅಂತಾ? ಈ ಮಾತು ಯಾಕಪ್ಪ ಅಂದ್ರೆ ಗಡಿಯಲ್ಲಿ ಸೈನಿಕರ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಬ್ರೇಕ್ ಹಾಕಬೇಕು ಅಂತಿರುವಾಗಲೇ ಸಣ್ಣ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಅತ್ತ ಚೀನಾ, ಚರ್ಚೆ ನಡೆಸಿದ್ದು ಭಾರತದ ಕೋರಿಕೆ ಕಾರಣಕ್ಕೆ ಎಂದಿದೆ. ಭಾರತ ಕೂಡ ಚೀನಾ ಹೇಳಿಕೆಗೆ ಇದೀಗ ಖಡಕ್ ಉತ್ತರ ನೀಡಿದೆ. ಮಾತುಕತೆಗೆ ಕೋರಿಕೆ ಸಲ್ಲಿಸಿದ್ದೇ ಚೀನಾ ಎಂದಿದೆ. ಈ ಮೂಲಕ ಎರಡೂ ರಾಷ್ಟ್ರಗಳ ನಡುವೆ ಸಣ್ಣ ವಿಚಾರಕ್ಕೆ ಫೈಟ್ ದೊಡ್ಡದಾಗುತ್ತಿದೆ.
ಹಾಗಾದರೆ ಮಾತುಕತೆ ನಡೆದಿದ್ದು ಹೇಗೆ?
ಅಂತಿಮವಾಗಿ ಇಬ್ಬರ ನಡುವೆ ಗಡಿಯ ವಿವಾದ ಬಿಟ್ಟು ಬೇರೆಯದ್ದೆ ಕಿರಿಕ್ ಶುರುವಾಗಿದೆ. ಹೌದು, ಭಾರತದ ಪ್ರಧಾನಿ ಮೋದಿ ಅವರು ಹಾಗೂ ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್ ನಡುವಿನ ಮಾತುಕತೆ ಬಗ್ಗೆ ಎರಡೂ ದೇಶಗಳ ನಡುವೆ ಕಿರಿಕ್ ನಡಿತಿದೆ. ಈ ಮಾತುಕತೆಯ ಬಗ್ಗೆ ವಿವರ ನೀಡಿದ್ದ ಚೀನಾ ವಿದೇಶಾಂಗ ಸಚಿವಾಲಯ, ಬ್ರಿಕ್ಸ್ ಸಭೆ ಸಂದರ್ಭದಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪ್ರಧಾನಿ ಮೋದಿಯವರ ಕೋರಿಕೆಯ ಮೇರೆಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದಿತ್ತು. ಆದರೆ ಭಾರತ ಮಾತ್ರ ಚೀನಾದ ಈ ವಾದ ತಳ್ಳಿಹಾಕಿ, ಕೋರಿಕೆ ಮಾಡಿದ್ದು ಚೀನಾ ಹೊರತು ಭಾರತವಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಗಡಿ ವಿವಾದದ ಜೊತೆಗೆ ಬೇರೆ ಕಿರಿಕ್ ಕೂಡ ಶುರುವಾಗಿದೆ.

ಭಾರತದ ಗಡಿಯಿಂದ ಚೀನಾ ಸೇನೆ ವಾಪಸ್?
ಬ್ರಿಕ್ಸ್ ಶೃಂಗಸಭೆ ಆರಂಭವಾದ ದಿನ ಪ್ರಶ್ನೆಯೊಂದು ಕಾಡುತ್ತಿತ್ತು. ಚೀನಾ & ಭಾರತದ ನಡುವೆ ಗಡಿ ವಿವಾದದ ಸಂಬಂಧ ಚರ್ಚೆ ನಡೆಯುತ್ತಾ? ಎರಡೂ ದೇಶಗಳು ಸಂಧಾನಕ್ಕೆ ಒಪ್ಪುತ್ತವಾ? ಎಂಬ ಕುತೂಹಲ ಹೆಚ್ಚಾಗಿತ್ತು. ಆದರೆ ಅಧಿಕೃತವಾಗಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್ಪಿಂಗ್ ನಡುವೆ ಗಡಿ ವಿವಾದದ ಚರ್ಚೆ ನಡೆದಿರಲಿಲ್ಲ. ಆದರೆ ಅನೌಪಚಾರಿಕವಾಗಿಯೇ ಇಬ್ಬರೂ ನಾಯಕರು ಮಾತನಾಡಿದ್ದರು. ಅಲ್ಲದೆ ಗಡಿ ವಿವಾದ ಅಂತ್ಯಗೊಳಿಸಲು ಇಬ್ಬರೂ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು. ಚೀನಾ ಹಾಗೂ ಭಾರತದ ನಡುವಿನ ವಾಸ್ತವ ಗಡಿ ರೇಖೆ ಬಳಿ ಸೇನೆ ಹಿಂಪಡೆದು ಸ್ಥಿತಿ ತಿಳಿಗೊಳಿಸಲು ಒಪ್ಪಲಾಗಿದೆ ಎನ್ನಲಾಗಿತ್ತು. ಆದರೆ ಈ ಮಾತುಕತೆ ಬೆನ್ನಲ್ಲೇ ಹೊಸ ಕಿರಿಕ್ ಶುರುವಾಗಿದೆ.
2020ರಲ್ಲಿ ಗಲ್ವಾನ್ ವ್ಯಾಲಿ ಘರ್ಷಣೆ ನಂತರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಚೀನಾ & ಭಾರತ ಗಡಿಯಲ್ಲಿ ಉಭಯ ಸೇನೆಗಳು ಭಾರಿ ಪ್ರಮಾಣದಲ್ಲಿ ಸೈನಿಕರನ್ನ ನಿಯೋಜನೆ ಮಾಡಿವೆ. ನಂತರ ಪರಿಸ್ಥಿತಿ ತಿಳಿಗೊಳಿಸಲು ಸೇನಾ ಮಟ್ಟದ ಮಾತುಕತೆ ನಡೆದಿದೆ. ಆದ್ರೆ ಅದು ಅಂದುಕೊಂಡ ನಿರೀಕ್ಷೆ ಮುಟ್ಟಿಲ್ಲ. ಈ ಕಾರಣಕ್ಕೆ ಭಾರತ & ಚೀನಾ ಮುಖ್ಯಸ್ಥರು ಮಾತುಕತೆ ನಡೆಸಿದ್ದರು. ಆದ್ರೆ ಆ ಮಾತುಕತೆ ಬಗ್ಗೆ ಹೊಸ ವಿವಾದ ಭುಗಿಲೆದ್ದಿದ್ದು ದುರಂತವೇ ಸರಿ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications