ರಷ್ಯಾ ಅಧ್ಯಕ್ಷರ ಶತ್ರು ಅಲೆಕ್ಸಿ ನವಲ್ನಿ ವಿಚಾರದಲ್ಲಿ ಯುರೋಪ್ ದೇಶಗಳ ಸ್ಫೋಟಕ ಆರೋಪ | Alexei Navalny
ಅಲೆಕ್ಸಿ ನವಲ್ನಿ ವಿಚಾರ ವರ್ಷಗಳ ನಂತರ ದೊಡ್ಡ ಸದ್ದು ಮಾಡುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಹೋರಾಟ ಮಾಡಿದ್ದ ನವಲ್ನಿ, ಕೆಲ ವರ್ಷದ ಹಿಂದೆ ಮೃತಪಟ್ಟಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ದಿಢೀರ್ ಅಲೆಕ್ಸಿ ನವಲ್ನಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಬ್ರಿಟನ್ ಸೇರಿ ಫ್ರಾನ್ಸ್ ಹಾಗೂ ಜರ್ಮನಿ ಜೊತೆಗೆ ಹಲವು ಯುರೋಪ್ ದೇಶಗಳು ನವಲ್ನಿಗೆ ವಿಷ ಹಾಕಿ ಹತ್ಯೆಯನ್ನು ಮಾಡಲಾಗಿದೆ ಎಂದು ಒಪ್ಪಿಕೊಂಡಿವೆ. ಆ ಮೂಲಕ ಮತ್ತೊಮ್ಮೆ ನವಲ್ನಿ ಸಾವಿನ ಘಟನೆ ರಷ್ಯಾದಲ್ಲಿ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಪುಟಿನ್ ಅವರ ವಿರೋಧಿಗಳಿಗೆ ಹೊಸ ಅಸ್ತ್ರ ಕೊಟ್ಟಂತೆ ಆಗಿದೆ.
ಉಕ್ರೇನ್ ವಿರುದ್ಧ ಹೋರಾಡುತ್ತಿರುವ ರಷ್ಯಾಗೆ ಶತ್ರುಗಳ ಕಾಟ ಹೆಚ್ಚಾಗುತ್ತಿದ್ದು, ಯುರೋಪ್ ಒಕ್ಕೂಟದ ದೇಶಗಳಿಗೆ ರಷ್ಯಾ ಹಾಗೂ ಪುಟಿನ್ ಕಂಡರೆ ಆಗುತ್ತಿಲ್ಲ. ಹೀಗಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಹೋರಾಟ ನಡೆಸಿದ್ದ ಅಲೆಕ್ಸಿ ನವಲ್ನಿ ಸಾವಿನ ಸುದ್ದಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. 2020ರಲ್ಲಿ ನವಲ್ನಿಗೆ ವಿಷ ಹಾಕಿ, ಕೊಲೆಗೂ ಪ್ರಯತ್ನ ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು.

ಆ ನಂತರ ನವಲ್ನಿ ಜರ್ಮನಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು, ಆದರೆ ಮರಳಿ ರಷ್ಯಾಗೆ ಬಂದ ಬಳಿಕ ಅಲೆಕ್ಸಿ ನವಲ್ನಿ ಬಂಧನವಾಗಿ ಸಂಚಲನ ಸೃಷ್ಟಿಯಾಗಿತ್ತು. ಕೊನೆಗೆ ಜೈಲಿನಲ್ಲೇ ಅಲೆಕ್ಸಿ ನವಲ್ನಿ ಜೀವ ಬಿಟ್ಟಿದ್ದು ಇದೀಗ ಹಳೆಯ ವಿಚಾರ, ಆದರೆ ಅಲೆಕ್ಸಿ ನವಲ್ನಿ ಸಾಯಿಸಲು ಭಯಾನಕ ವಿಷವನ್ನೇ ಬಳಸಲಾಗಿತ್ತು ಎಂಬ ಆರೋಪ ದಿಢೀರ್ ಬಿರುಗಾಳಿ ಎಬ್ಬಿಸಿದೆ. ಯುರೋಪ್ ದೇಶಗಳು ಮಾಡಿರುವ ಆರೋಪವನ್ನ ಇದೀಗ ರಷ್ಯಾ ವಿರುದ್ಧ ಹೊರಿಸಲಾಗಿದ್ದು, ಯುದ್ಧದ ನಡುವೆ ಈ ವಿಚಾರ ಕಿಚ್ಚು ಹೊತ್ತಿಸಿದೆ.
ಕಪ್ಪೆ ವಿಷದಿಂದ ಕೊಲೆ ಆರೋಪ
ನವಲ್ನಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈರಿ, ಈ ಕಾರಣಕ್ಕೆ ನವಲ್ನಿ ವಿರುದ್ಧ ಗಂಭೀರ ಆರೋಪ ಹೊರಿಸಿ ಜೈಲಿಗೆ ಹಾಕಿದ್ದ ಆರೋಪ ಕೇಳಿಬಂತು. ಉಗ್ರವಾದ ಆರೋಪ ಹಿನ್ನೆಲೆಯಲ್ಲಿ 19 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಜೈಲಿನಲ್ಲಿ ಇದ್ದಾಗಲೇ ನವಲ್ನಿ ಮೃತಪಟ್ಟಿದ್ದು ತೀವ್ರ ಚರ್ಚೆಗೆ ವೇದಿಕೆ ಒದಗಿಸಿತ್ತು, ಕೊನೆಗೆ ಇದೀಗ ಹೊರಬಿದ್ದಿರುವ ಸಂಗತಿ ಏನು ಅಂದ್ರೆ ಬಾಣದ ಕಪ್ಪೆ ಅಥವಾ ಡಾರ್ಟ್ ಫ್ರಾಗ್ ವಿಷ ಬಳಸಿ ಅಲೆಕ್ಸಿ ನವಲ್ನಿ ಕೊಲೆ ಮಾಡಲಾಗಿದೆಯಂತೆ. ಈ ವಿಚಾರವನ್ನು ಯುರೋಪ್ನ ಪ್ರಮುಖ ದೇಶಗಳು ಒಪ್ಪಿಕೊಂಡಿದ್ದು, ರಷ್ಯಾ ವಿರುದ್ಧ ಗಂಭೀರ ಆರೋಪ ಮಾಡಿವೆ. ಮತ್ತೊಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮಾಡುತ್ತಿರುವಾಗಳೇ ಈ ಆರೋಪ ಸಂಚಲನ ಸೃಷ್ಟಿಸಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications