NASA Satellite: 38 ವರ್ಷಗಳ ಬಳಿಕ ಭೂಮಿಗೆ ಬಿದ್ದ ನಾಸಾದ ನಿವೃತ್ತ ಉಪಗ್ರಹ: ಮಾಹಿತಿ ಇಲ್ಲಿದೆ
ನ್ಯೂಯಾರ್ಕ್, ಜ. 10: ಸುಮಾರು ನಾಲ್ಕು ದಶಕಗಳ ನಂತರ ಬಾಹ್ಯಾಕಾಶದಲ್ಲಿ ನಿಷ್ಕ್ರಿಯಗೊಂಡಿದ್ದ ನಾಸಾ ಉಪಗ್ರಹವೊಂದು ಯಾವುದೇ ಅಪಾಯವಿಲ್ಲದೆ ಭೂಮಿಗೆ ಬಿದ್ದಿದೆ ಎಂದು ನಾಸಾ ತಿಳಿಸಿದೆ.
38 ವರ್ಷಗಳ ಕಾಲ ಭೂಮಿಯನ್ನು ಸುತ್ತು ಹಾಕಿದ್ದ ಇಆರ್ಬಿಎಸ್ (ERBS) ಎಂದು ಕರೆಯಲ್ಪಡುವ ಅರ್ತ್ ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್ ಅನ್ನು 1984 ರಲ್ಲಿ ಬಾಹ್ಯಾಕಾಶ ನೌಕೆ ಚಾಲೆಂಜರ್ನಲ್ಲಿ ಉಡಾವಣೆ ಮಾಡಲಾಗಿತ್ತು.
ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತವು 5,400 ಪೌಂಡ್ (2,420 ಕಿಲೋಗ್ರಾಂಗಳು) ಉಪಗ್ರಹವು ಬೇರಿಂಗ್ ಸಮುದ್ರದ ಮೇಲೆ ಬಿದ್ದಿದೆ ಎಂದು ಅಮೆರಿಕಾದ ರಕ್ಷಣಾ ಇಲಾಖೆ ದೃಢಪಡಿಸಿದೆ ಎಂದು ನಾಸಾ ಮಾಹಿತಿ ನೀಡಿದೆ.

ಈ ಹಿಂದೆಯೇ ಉಪಗ್ರಹ ಭೂಮಿಗೆ ಬೀಳುವ ಬಗ್ಗೆ ನಾಸಾ ಮಾಹಿತಿ ನೀಡಿತ್ತು. 5,400 ಪೌಂಡ್ (2,450 ಕಿಲೋಗ್ರಾಂ) ಉಪಗ್ರಹವು ಭೂಮಿ ವಾತಾವರಣಕ್ಕೆ ಮರಳಿ ಬರುವಾಗ ಬಹುತೇಕ ಉರಿದು ಹೋಗುತ್ತದೆ. ಆದರೆ, ಕೆಲವೇ ಕೆಲವು ತುಣುಕುಗಳು ಭೂಮಿಯ ಮೇಲೆ ಬೀಳುಳುತ್ತದೆ . ಇದರಿಂದ 9, 400 ಜನರಲ್ಲಿ ಒಬ್ಬರಿಗೆ ಮಾತ್ರ ಗಾಯವಾಗಬಹುದು ಎಂದಿತ್ತು. ಆದರೆ, ಅಂತತಹ ಯಾವುದೇ ಅಪಾಯವಿಲ್ಲದೇ ಉಪಗ್ರಹವೂ ಬೇರಿಂಗ್ ಸಮುದ್ರಕ್ಕೆ ಬಿದ್ದಿದೆ.
ಇಆರ್ಬಿಎಸ್ ಎಂದು ಕರೆಯಲ್ಪಡುವ ಈ ಬಾಹ್ಯಾಕಾಶ ನೌಕೆಯು ಭೂಮಿಯು ಸೂರ್ಯನಿಂದ ಹೀರಿಕೊಳ್ಳುವ ಶಕ್ತಿ ಮತ್ತು ಹೊರಸೂಸೂವ ಶಕ್ತಿಯ ಬಗ್ಗೆ ಅಧ್ಯಯನ ನಡೆಸುವ ಅರ್ತ್ ರೇಡಿಯೇಷನ್ ಬಜೆಟ್ ಸ್ಯಾಟಿಲೆಟ್ ಪ್ರಯೋಗದ ಭಾಗವಾಗಿತ್ತು. ಇದರ ಜೀವಿತಾವಧಿ ಕೇವಲ ಎರಡು ವರ್ಷಗಳಾಗಿತ್ತು. ಆದರೆ, ಇದು 2005 ರವರೆಗೆ ಕಾರ್ಯನಿರ್ವಹಿಸಿತ್ತು. ಬಳಿಕ ಅದು ನಿಷ್ಕ್ರಿಯಗೊಂಡು ಬಾಹ್ಯಾಕಾಶದಲ್ಲಿಯೇ ಸುತ್ತುತ್ತಿತ್ತು.
1984 ರಲ್ಲಿ ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸ್ಯಾಲಿ ರೈಡ್, ನೌಕೆಯ ರೋಬೋಟ್ ಆರ್ಮ್ ಅನ್ನು ಬಳಸಿಕೊಂಡು ಉಪಗ್ರಹವನ್ನು ಕಕ್ಷೆಗೆ ಬಿಡುಗಡೆ ಮಾಡಿದ್ದರು. ಸ್ಯಾಲಿ ರೈಡ್ ಜೊತೆ ಕ್ಯಾಥರಿನ್ ಸುಲ್ಲಿವನ್ ಗಗನಯಾತ್ರೆ ಮಾಡಿದ್ದರು. 2012 ರಲ್ಲಿ ನಿಧನರಾದ ಸ್ಯಾಲಿ ರೈಡ್ಗೆ ಇದು ಎರಡನೇ ಮತ್ತು ಅಂತಿಮ ಬಾಹ್ಯಾಕಾಶ ಯಾನವಾಗಿತ್ತು ಎಂದು ನಾಸಾ ಮಾಹಿತಿ ನೀಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications