ಐಪಿಎಲ್ ಫೈನಲ್ ಟಿಕೆಟ್ ಸರ್ಕಸ್, ಪಟ್ಟು ಬಿಡದ ತೃಪ್ತಿ ದೇಸಾಯಿ
ನವದೆಹಲಿ, ಮೇ 26: ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಬೆಂಗಳೂರಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದ ಟಿಕೆಟ್ ಗಾಗಿ ಚಿನ್ನಸ್ವಾಮಿ ಮೈದಾನದಲ್ಲಿ ಸರತಿ ಸಾಲಿನಲ್ಲಿ ಸರ್ಕಸ್ ಮಾಡಿದ ಯುವಕರು.. ದೇವಾಲಯ ಪ್ರವೇಶವನ್ನು ಕಾಯಕ ಮಾಡಿಕೊಂಡಿರುವ ತೃಪ್ತಿ ದೇಸಾಯಿ ನಾಸಿಕ್ ನ ಕಪಲೇಶ್ವರ ದೇವಾಲಯವನ್ನು ಪ್ರವೇಶ ಮಾಡಲು ಯತ್ನಿಸಿದ ವೇಳೆ ಪೊಲೀಸರಿಂದ ತಡೆ ಎದುರಿಸಿದರು.
ಕಶಿಶ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಿಂಚಿದ ಬಾಲಿವುಡ್ ತಾರೆ ಸೋನಂ ಕಪೂರ್, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರ್ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್.[ಟ್ವೀಟ್ ಮಾಡಿ ಚಿಯರ್ ಗರ್ಲ್ಸ್ ಕಣ್ಣೀರು ಒರೆಸಿದ ಶಾರುಖ್!]
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕೋಲ್ಕತಾದಲ್ಲಿ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ ಪೊಲೀಸರು. ಲೋಕ ಜನಶಕ್ತಿ ನಾಯಕ ಸುದೇಶ್ ಪಾಸ್ವಾನ್ ಸಾವಿನ ಕಾರಣಕ್ಕೆ ಹೊತ್ತಿ ಉರಿದ ಗಯಾ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ( ಪಿಟಿಐ ಚಿತ್ರಗಳು)
ಟಿಕೆಟ್ ಗೆ ಪೈಪೋಟಿ
ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಬೆಂಗಳೂರಲ್ಲಿ ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದ ಟಿಕೆಟ್ ಗಾಗಿ ಸರತಿ ಸಾಲಿನಲ್ಲಿ ಸರ್ಕಸ್ ಮಾಡಿದವರು ಕಂಡ ಬಗೆ.
ತೃಪ್ತಿಗೆ ತಡೆ
ರಂಗರಾಗಿನಿ ಭೂಮಾತಾ ಸಂಘಟನೆಯ ಹೋರಾಟಗಾರ್ತಿ ತೃಪ್ತಿ ದೇಸಾಯಿ ನಾಸಿಕ್ ನ ಕಪಲೇಶ್ವರ ದೇವಾಲಯವನ್ನು ಪ್ರವೇಶ ಮಾಡಲು ಯತ್ನಿಸಿದ ವೇಳೆ ಪೊಲೀಸರಿಂದ ತಡೆ.
ಪ್ರಮಾಣಕ್ಕೆ ಸಿದ್ಧತೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದ ಪೊಲೀಸರು.
ಮುಗಿಲು ಮುಟ್ಟಿದ ಆಕ್ರಂದನ
ಲೋಕ ಜನಶಕ್ತಿ ನಾಯಕ ಸುದೇಶ್ ಪಾಸ್ವಾನ್ ಸಾವಿನ ಕಾರಣಕ್ಕೆ ಗಯಾ ಹೊತ್ತಿ ಉರಿಯುತ್ತಿದೆ. ಪಾಸ್ವಾನ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರತಿಭಟನೆ ಆಕ್ರೋಶ
ಲೋಕ ಜನಶಕ್ತಿ ನಾಯಕ ಸುದೇಶ್ ಪಾಸ್ವಾನ್ ಸಾವಿನ ಕಾರಣಕ್ಕೆ ಗಯಾ ಹೊತ್ತಿ ಉರಿಯುತ್ತಿದೆ. ಪ್ರತಿಭಟನಾಕಾರರ ಆಕ್ರೋಶದ ಪರಿ ಯಾವ ರೀತಿ ಇತ್ತು ನೀವೇ ನೋಡಿ.
ಸೋನಂ ವೈಯಾರ
ಕಶಿಶ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಿಂಚಿದ ಬಾಲಿವುಡ್ ತಾರೆ ಸೋನಂ ಕಪೂರ್. ನೀರಜಾ ಸಿನಿಮಾದ ನಂತರ ಸೋನಂ ಅವರ ಬೇಡಿಕೆ ಹೆಚ್ಚಾಗಿದೆ.
ಬಾಲಿವುಡ್ ಹಾಲಿವುಡ್
ಕಶಿಶ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಿಂಚಿದ ಬಾಲಿವುಡ್ ತಾರೆ ಸೋನಂ ಕಪೂರ್ ಜತೆ ಕಾಣಿಸಿಕೊಂಡ ಹಾಲಿವುಡ್ ತಾರೆ ಸರ್ ಇಯಾನ್ ಮೆಕ್ ಲೆನ್.
ಹುಬ್ಬಳ್ಳಿಯಲ್ಲಿ ಅರ್ಜುನ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರ್ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್