Get Updates
Get notified of breaking news, exclusive insights, and must-see stories!

ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಂಡಿದ್ದ 'ಕೈಲಾಸ' ದೇಶದ ಪ್ರತಿನಿಧಿ ವಿಜಯಾನಂದ ಯಾರು?, ಹಿನ್ನೆಲೆ ತಿಳಿಯಿರಿ

ವಿವಾದಾತ್ಮಕ ದೇವಮಾನವ ನಿತ್ಯಾನಂದ ಸ್ಥಾಪಿತ ಕಲಾಸ ದೇಶ (USK)ದ ಪ್ರತಿನಿಧಿ ವಿಜಯಪ್ರಿಯಾ ನಿತ್ಯಾನಂದ ಎಂಬುವವರು ಇತ್ತೀಚೆಗೆ ವಿಶ್ವಸಂಸ್ಥೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವಿಜಯಪ್ರಿಯಾ ಯಾರು, ಅವರ ಹಿನ್ನೆಲೆ ತಿಳಿಯಿರಿ.

ಬೆಂಗಳೂರು, ಮಾರ್ಚ್ 02: ವಿವಾದಾತ್ಮಕ ದೇವಮಾನವ ನಿತ್ಯಾನಂದ ಸ್ಥಾಪಿತ ಕಲಾಸ ದೇಶ (USK)ದ ಆತನ ಪ್ರತಿನಿಧಿಗಳು ಕಳೆದ ತಿಂಗಳು ವಿಶ್ವಸಂಸ್ಥೆ ನಡೆಸಿದ ಸಭೆ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದವರು ಯಾರು, ಅವರ ವೈಯಕ್ತಿಕ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸ ದೇಶದ ತಮ್ಮ ಪ್ರತಿನಿಧಿಗಳು ಪಾಲ್ಗೊಂಡಿದ್ದರ ಬಗ್ಗೆ ನಿತ್ಯಾನಂದ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ವಿಜಯಪ್ರಿಯಾ ನಿತ್ಯಾನಂದ ಎಂಬುವವರನ್ನು ಉಲ್ಲೇಖಿಸಲಾಗಿದೆ.

Who Vijayapriya Nithyananda from Kailasa who participated in United Nations meeting? know

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿ (CESCR) ಫೆಬ್ರವರಿ 24 ರಂದು ಆಯೋಜಿಸಿದ್ದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಈ ವಿಜಯಪ್ರಿಯಾ, ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಿಗೆ ರಕ್ಷಣೆ ನೀಡಬೇಕೆಂದು ಕೋರಿದರು. ನಿತ್ಯಾನಂದರನ್ನು ದೇಶದಿಂದ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯಪ್ರಿಯಾ ನಿತ್ಯಾನಂದ ಯಾರು?

ಸೀರೆ ಉಟ್ಟು, ಪೇಟ ಧರಿಸಿದ್ದ ಹಾಗೂ ಮೈಮೇಲೆ ಹೆಚ್ಚು ಆಭರಣ ಹಾಕಿಕೊಂಡಿ ಮಹಿಳೆ ತಾನು "ಕೈಲಾಸ ಯುನೈಟೆಡ್ ಸ್ಟೇಟ್ಸ್‌ನ ಶಾಶ್ವತ ರಾಯಭಾರಿ" ಎಂದು ಪರಿಚಯಿಸಿಕೊಂಡಿದ್ದರು. ಅವರೇ ಈ ವಿಜಯಪ್ರಿಯಾ ನಿತ್ಯಾನಂದ.

Who Vijayapriya Nithyananda from Kailasa who participated in United Nations meeting? know

ಈ ವಿಜಯಪ್ರಿಯಾಳ ಫೇಸ್‌ಬುಕ್‌ ಪೇಜ್‌ ಪ್ರಕಾರ, ಅವರು ವಾಷಿಂಗ್ಟನ್ ಡಿಸಿಯಲ್ಲಿ ವಾಸಿಸುತ್ತಿದ್ದಾರೆ. ವಿಜಯಪ್ರಿಯಾ ತನ್ನ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ಬಿಎಸ್‌ಸಿ ಆನರ್ಸ್ ಮಾಡಿದ್ದಾರೆ. ಜೂನ್ 2014 ರಲ್ಲಿ ವಿಶ್ವವಿದ್ಯಾಲಯದ ಡೀನ್ ಗೌರವ ಪಟ್ಟಿಯಲ್ಲಿ ಅವರ ಹೆಸರು ಇದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿದ್ದ ವಿಜಯಪ್ರಿಯಾರ ಫೋಟೊಗಳನ್ನು ನೋಡಿದರೆ ಅವರ ಬಲಗೈ ಮೇಲೆ ನಿತ್ಯಾನಂದನ ದೊಡ್ಡ ಹಚ್ಚೆ ಇರುವುದು ಕಾಣಿಸುತ್ತದೆ.

ನಾಲ್ಕು ಭಾಷೆ ಬಲ್ಲಳು ವಿಜಯಪ್ರಿಯಾ

ವಿಜಯಪ್ರಿಯಾಗೆ ಇಂಗ್ಲಿಷ್, ಫ್ರೆಂಚ್, ಹಿಂದಿ ಮತ್ತು ಕ್ರಿಯೋಲ್ ಮತ್ತು ಫ್ರೆಂಚ್ ಮೂಲದ ಪಿಡ್ಜಿನ್ ಭಾಷೆಗಳನ್ನು ಬಲ್ಲವರಾಗಿದ್ದಾರೆ ಎಂಬುದು ಲಿಂಕ್ಡ್‌ಇನ್ ಪ್ರೊಫೈಲ್ ನಲ್ಲಿದೆ. 'ಕೈಲಾಸ ದೇಶ' ವೆಬ್‌ಸೈಟ್ ಕೂಡ ಹೊಂದಿದೆ. ವಿಜಯಪ್ರಿಯಾ ದೇಶದ ಪರ ಸಂಘಟಕರಾಗಿಯೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೈಲಾಸ ದೇಶದಂತಹ ಕಾಲ್ಪನಿಕ ದೇಶದ ಪ್ರತಿನಿಧಿಗಳು ನೀಡಿದ ಹೇಳಿಕೆಗಳನ್ನು ಪರಿಗಣಿಸದಿರುವುದಾಗಿ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಬಿಬಿಸಿಗೆ ತಿಳಿಸಿದ್ದಾರೆ. ಪ್ರತಿನಿಧಿಗಳು ಸಲ್ಲಿಸಿದ ಹೇಳಿಕೆ/ಸಲ್ಲಿಕೆಗಳು ಅಪ್ರಸ್ತುತ ಎಂದಿದ್ದಾರೆ. ಆದರೆ ವಿಶ್ವಸಂಸ್ಥೆಯ ಸಭೆಯಲ್ಲಿ 'ಕೈಲಾಸ' ಪ್ರತಿನಿಧಿಗಳ ಉಪಸ್ಥಿತಿ ಭಾರತವನ್ನು ಭಾರತವನ್ನು ಬೆರಗುಗೊಳಿಸಿದ್ದಂತು ಸತ್ಯ.

'ಕೈಲಾಸ' ಎಲ್ಲಿದೆ?

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳೊಂದಿಗೆ ನಿತ್ಯಾನಂದ ವರ್ಷಗಳ ಹಿಂದೆ ಭಾರತ ತೊರೆದಿದ್ದರು. ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ದೇಶ ಬಿಟ್ಟ ಬಳಿಕ 2019 ರಲ್ಲಿ ಈಕ್ವೆಡಾರ್ ಕರಾವಳಿಯ ದ್ವೀಪವೊಂದರಲ್ಲಿ 'ಕೈಲಾಸ' ದೇಶ ಸ್ಥಾಪಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+