Get Updates
Get notified of breaking news, exclusive insights, and must-see stories!

ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಪ್ರವಾಸಿಗರ ನಡುವೆ ಹೊಡೆದಾಟ- ವಿಡಿಯೋ

ಉತ್ತರಾಖಂಡದ ಋಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಪ್ರವಾಸಿಗರ ನಡುವೆ ಜಗಳದಿಂದ ಹೊಡೆದಾಟ ನಡೆದಿದೆ. ರಿವರ್ ರಾಫ್ಟಿಂಗ್ ವೇಳೆ ಪ್ರವಾಸಿಗರ ನಡುವೆ ನಡೆದ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಂಗಾ ನದಿಯ ಮಧ್ಯದಲ್ಲಿ ಪ್ರವಾಸಿಗರ ಗುಂಪುಗಳು ಹಿಂಸಾತ್ಮಕವಾಗಿ ಒಬ್ಬರನ್ನೊಬ್ಬರು ಪ್ಯಾಡ್ಲ್‌ಗಳಿಂದ ಹೊಡೆದುಕೊಳ್ಳುವುದು ವೀಡಿಯೋದಲ್ಲಿ ಕಂಡು ಬಂದಿದೆ. ಈ ಘಟನೆ ಶನಿವಾರ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

"ನಿನ್ನೆ ರಿಷಿಕೇಶದಲ್ಲಿ ರಿವರ್ ರಾಫ್ಟಿಂಗ್ ಸಂದರ್ಭದಲ್ಲಿ ರಾಫ್ಟರ್‌ಗಳ ನಡುವೆ ಹಿಂಸಾತ್ಮಕ ಗಲಾಟೆ ನಡೆದಿದೆ" ಎಂದು ಎಎನ್‌ಐ ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ.

Violent fight between tourists during river rafting in Rishikesh- Video

ವೀಡಿಯೊ ನೋಡಿ:

ವಾಸ್ತವವಾಗಿ ಬೇಸಿಗೆಯಲ್ಲಿ ಜನರು ರಾಫ್ಟಿಂಗ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗಂಗಾನದಿ ಕೌಡಿಯಾಲ-ಮುನಿಕಿರೆಟಿ ಪರಿಸರ ಪ್ರವಾಸೋದ್ಯಮ ವಲಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ನಡೆದ ಘಟನೆ ಸದ್ಯ ಆತಂಕವನ್ನು ಹುಟ್ಟುಹಾಕಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಗಂಗಾನದಿಯ ಅಲೆಗಳಲ್ಲಿ ತೇಲುತ್ತಿರುವ ಎರಡು ತೆಪ್ಪಗಳಲ್ಲಿ ಸವಾರಿ ಮಾಡುವ ಪ್ರವಾಸಿಗರು ಮತ್ತು ಮಾರ್ಗದರ್ಶಕರು ಒಬ್ಬರಿಗೊಬ್ಬರು ಪ್ಯಾಡ್ಲ್ಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಸ್ಥಳೀಯರ ಪ್ರಕಾರ, ರಾಫ್ಟ್ ಗೈಡ್ ತನ್ನ ಗೋ ಪ್ರೊ ಕ್ಯಾಮೆರಾದಿಂದ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ತೆಪ್ಪಗಳಲ್ಲಿ ದೆಹಲಿ-ಎನ್‌ಸಿಆರ್‌ನಿಂದ ಎರಡಕ್ಕೂ ಹೆಚ್ಚು ಪ್ರವಾಸಿಗರಿದ್ದರು ಎಂದು ಹೇಳಲಾಗುತ್ತಿದೆ. ಈ ತೆಪ್ಪಗಳ ಮಾರ್ಗದರ್ಶಕರ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಮೊದಲಿಗೆ ಗೈಡ್‌ಗಳು ಒಬ್ಬರಿಗೊಬ್ಬರು ಪ್ಯಾಡ್‌ಗಳಿಂದ ಹಲ್ಲೆ ನಡೆಸಿದ್ದು, ಬಳಿಕ ಪ್ರವಾಸಿಗರು ಕೂಡ ಹಲ್ಲೆಗೆ ಮುಂದಾಗಿದ್ದಾರೆ.

ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ರಾಫ್ಟಿಂಗ್ ಪ್ಯಾಡಲ್‌ನಿಂದ ಇನ್ನೊಬ್ಬರ ಮೇಲೆ ಕೆಟ್ಟದಾಗಿ ದಾಳಿ ಮಾಡುವುದನ್ನು ಕಾಣಬಹುದು. ಜೊತೆಗೆ ಪದೇ ಪದೇ ಬಲವಾಗಿ ಹೊಡೆಯುವುದು ಕಂಡುಬಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೂವರು ವ್ಯಕ್ತಿಗಳು ತೆಪ್ಪದಿಂದ ಹಾರಿ ಗಂಗಾ ನದಿಗೆ ಧುಮುಕಿದ್ದಾರೆ.

Violent fight between tourists during river rafting in Rishikesh- Video

ನದಿಗೆ ಧುಮುಕಿದ ಮೂವರು ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರು ಎನ್ನಲಾಗಿದೆ. ಬಂಡೆಗಳ ನಡುವೆ ಅಪಾಯಕಾರಿ ಹೊಡೆದಾಟದಲ್ಲಿ ಮೂವರು ನದಿಗೆ ಧುಮುಕಿದ್ದು ಯಾವುದೇ ಪ್ರಾಣ ಸಂಭವಿಸಿಲ್ಲ. ಪ್ರವಾಸಿಗರು ಮತ್ತು ರಾಫ್ಟಿಂಗ್ ಮಾರ್ಗದರ್ಶಕರಿಗೆ ಇದು ತೀವ್ರ ಅಪಾಯವನ್ನುಂಟುಮಾಡಿದೆ.

ಘಟನೆಯ ಕುರಿತು ಎಸ್ಪಿ ನವನೀತ್ ಭುಲ್ಲರ್ ಅವರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋವನ್ನು ಆಧರಿಸಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ, ಆದರೆ ಇನ್ನೂ ಜಗಳಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಟ್ವಿಟರ್‌ನಲ್ಲಿ ವೀಡಿಯೊಗೆ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಬಳಕೆದಾರರು ಪ್ರವಾಸಿಗರನ್ನು ಆತಂಕ ಸೃಷ್ಟಿಸಿದ್ದಕ್ಕೆ ದೂಷಿಸಿದ್ದಾರೆ.

Violent fight between tourists during river rafting in Rishikesh- Video

"ಈ ರಾಸ್ಕಲ್‌ಗಳು ಯಾರು? ಅವರ ಹೊಡೆದಾಟದ ತೀವ್ರತೆ ನೋಡಿದರೆ ಅವರು ದರೋಡೆಕೋರರು ಎಂದು ತೋರುತ್ತದೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

"ಪ್ರತಿಯೊಂದು ರಾಜ್ಯದ ಪ್ರವಾಸಿಗರು ಪ್ರತಿ ಪ್ರವಾಸಿ ಸ್ಥಳದಲ್ಲಿ ತಮ್ಮ ಕೊಳೆಯನ್ನು ಹೊತ್ತು ತರುತ್ತಾರೆ" ಎಂದು ಮತ್ತೊಬ್ಬರು ಹೇಳಿದರು.

"ಇದು ಅತ್ಯಂತ ನಾಚಿಕೆಗೇಡಿನ ಘಟನೆಯಾಗಿದ್ದು, ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಉತ್ತರಾಖಂಡ - ಸರಳವಾಗಿ ಸ್ವರ್ಗವಾಗಿದೆ. ಈ ರಾಜ್ಯ ಯಾವುದೇ ಹಿಂಸಾಚಾರಕ್ಕೆ ಸ್ಥಳ ಆಗಬಾರದು'' ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.

"ನಾನು ಇಂತಹ ಮೂರ್ಖರ ನಡುವೆ ಜನಿಸಿದ್ದೇನೆ. ನಾನು ಇಂತವರ ನಡುವೆ ಇದ್ದೇನೆ ಎಂದು ನಾನು ತುಂಬಾ ಕೃತಜ್ಞನಾಗಿದ್ದೇನೆ" ಎಂದು ನಾಲ್ಕನೆಯವರು ವ್ಯಂಗ್ಯವಾಗಿ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ವಿಡಿಯೋ 8,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+