ಕೇಂದ್ರ ಬಜೆಟ್: ಮದ್ಯಪ್ರಿಯರಿಗೆ ಶಾಕ್, ಮದ್ಯ ದುಬಾರಿ, ಈ ವಸ್ತುಗಳ ದರ ಇಳಿಕೆ - ಏರಿಕೆ, ಪಟ್ಟಿ ಇಲ್ಲಿದೆ
Union Budget 2026: ದೇಶದ ಬಹುನಿರೀಕ್ಷೆಯ 2026-27 ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಭಾನುವಾರ (ಫೆಬ್ರವರಿ 01) ಮಂಡಿಸಿದ್ದಾರೆ. ಅದರಲ್ಲಿ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಮಾಡಿ ಆಘಾತ ನೀಡಿದ್ದಾರೆ.
ಇದರೊಂದಿಗೆ ಬಡವರು ಹಾಗೂ ಮಧ್ಯಮ ವರ್ಗದವರು ಬಳಸುವ ವಸ್ತುಗಳ ಬೆಲೆ ಇಳಿಕೆ ಆಗಿದೆ. ರೋಗಿಗಳಿಗೆ ಅಗತ್ಯವಾದ ಹಲವು ಔಷಧಿಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿ, ಕೈಗೆಟುಕುವ ಬೆಲೆ ಅಂದರೆ ಕಡಿಮೆ ಬೆಲೆಗೆ ಔಷಧಿ ಸಿಗುವಂತೆ ಮಾಡಿದ್ದಾರೆ.

ಇನ್ನೂ ಕ್ಯಾನ್ಸರ್ ಮತ್ತು ಶುಗರ್ ಕಾಯಿಲೆಗಳು ಸೇರಿದಂತೆ ಇತರ ರೋಗಿಗಳು ಬಳಸುವ 17 ಔಷಧಿಗಳ ಬೆಲೆ ಇಳಿಕೆ ಆಗಿದೆ. ಏಕೆಂದರೆ ಅವುಗಳ ಮೇಲಿನ ಆಮದು ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮಾತ್ರವಲ್ಲದೇ ಏಳು ಅಪರೂಪದ ಕಾಯಿಲೆಗಳ ಔಷಧಿ ಬೆಲೆ ಇಳಿಕೆ ಮಾಡಲಾಗಿದೆ. ಯಾವೆಲ್ಲ ಬೆಲೆ ಇಳಿಕೆ, ಏರಿಕೆ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ.
ಯಾವೆಲ್ಲ ವಸ್ತುಗಳ ಬೆಲೆ ಇಳಿಕೆ ಆಗಿದೆ? ಪಟ್ಟಿ ಇಲ್ಲಿದೆ
* ಬೀಡಿ, ಪಾದರಕ್ಷೆಗಳ ದರ ಇಳಿಕೆ ಆಗಿದೆ.
* ಲಿಥೀಯಂ ಬ್ಯಾಟರಿ ದರ ಇಳಿಕೆ ಆಗಿದೆ.
* ಸೆಣಬು ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ.
* ಸಿಎನ್ಜಿ ಬಯೋಗ್ಯಾಸ್ ದರ ಕಡಿಮೆ
* ಕ್ಯಾನ್ಸರ್ ಮತ್ತು ಶುಗರ್ ಕಾಯಿಲೆಗಳ ಇತರ 17 ಔಷಧಿಗಳ ಬೆಲೆ ಇಳಿಕೆ
* ಏಳು ಅಪರೂಪದ ಕಾಯಿಲೆಗಳ ಔಷಧಿ ಬೆಲೆ ಕಡಿಮೆ.
* ದುಬಾರಿ ಬೆಲೆಯ ಔಷಧಿಗಳ ಆಮದು ಸುಂಕಕ್ಕೆ ವಿನಾಯಿತಿ.
* ವಿದೇಶ ಪ್ರವಾಸ ಪ್ಯಾಕೇಸ್
* ಕ್ರೀಡಾ ಉಪಕರಣಗಳು
* ವಿದೇಶ ಶಿಕ್ಷಣ
* ಮೈಕ್ರೋವೇವ್ ಓವನ್
* ಎಲೆಕ್ಟ್ರಾನಿಕ್ ವಾಹನದ ಬ್ಯಾಟರಿ
* ಸೌರ ಫಲಕ
* ಮಧುಮೇಹ ಮತ್ತು ಕ್ಯಾನ್ಸರ್ ಔಷಧ
* ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್
* ಅಮೂಲ್ಯ ಖನಿಜ
* ವೈದ್ಯಕೀಯ ಉಪಕರಣ
ಯಾವುದೆಲ್ಲ ದುಬಾರಿ ಆಗಿದೆ? ಇಲ್ಲಿದೆ ವಿವರ
* ಮದ್ಯಗಳ ಮೇಲೆ ಕೇಂದ್ರ ಸರ್ಕಾರದಿಂದ ಸುಂಕ ವಿಧಿಸಲಾಗಿದೆ
* ಬಿಯರ್, ವಿಸ್ಕಿ, ರಮ್ ಸೇರಿದಂತೆ ವಿವಿಧ ಮದ್ಯದ ದರ ಮತ್ತಷ್ಟು ದುಬಾರಿ
* ಸಿಗರೇಟ್ ಮತ್ತು ಪಾನ್ ಮಸಾಲ ದರ ಹೆಚ್ಚಳ
* ರಸಗೊಬ್ಬರ
* ಎಟಿಎಂ ಮತ್ತು ಸ್ವಯಂ ಚಾಲಿತ ಮಾರಾಟ ಯಂತ್ರಗಳು
* ಹೆಣೆದ ಬಟ್ಟೆಗಳು
*ರಾಸಾಯನಿಕಗಳು
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್ಗೆ ಭೇಟಿ ನೀಡಿ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications