ಚಿತ್ರಗಳಲ್ಲಿ ಹೃದಯವನ್ನು ಬೆಚ್ಚಗಿಡಿ, ಸಂರಕ್ಷಿಸಿ
ಬೆಂಗಳೂರು, ಸೆ.30: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೃದಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆಯಂತೆ. ಹೃದಯಕ್ಕೆ ಸಂಬಂಧಿಸಿ ಸಮಸ್ಯೆಗಳು ಹೆಚ್ಚಾಗಲು ನಮ್ಮ ಜೀವನ ಶೈಲಿ ಪ್ರಮುಖ ಕಾರಣ ಎಂಬುವುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಹೃದಯಾಘಾತ, ಇತರ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು ಎಂದು ವಡೋದರಾ, ಮುಂಬೈನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಜನ ಜಾಗೃತಿ ಮೂಡಿಸಿದ್ದಾರೆ.
ನೀವು ಚಾಕಲೇಟ್ ಪ್ರಿಯರಾ? ಹಾಗಾದರೆ ಚಾಕಲೇಟ್ ತಿನ್ನಲು ಇನ್ನು ಮುಂದೆ ಹಿಂದೇಟು ಹಾಕಬೇಕಾಗಿಲ್ಲ. ಚಾಕಲೇಟ್ ತಿನ್ನುವುದರಿಂದ ನಿಮ್ಮ ಆರೋಗ್ಯ ಹೆಚ್ಚಾಗುತ್ತದೆ. ಇದರಿಂದ ಹೃದಯದ ಖಾಯಿಲೆ ಬರುವ ಸಾಧ್ಯತೆ 37 % ಕಡಿಮೆಯಾಗುತ್ತದೆ ಎನ್ನುತ್ತದೆ ಈ ವರದಿ ಇಲ್ಲಿ ಓದಿ...
ಉಳಿದಂತೆ ಚಾಂಪಿಯನ್ಸ್ ಲೀಗ್ ಟೂರ್ನಿಯ ಸೆಮಿಫೈನಲ್ ತಲುಪಿದ ರಾಹುಲ್ ಪಡೆ ವಿಜಯೋತ್ಸವ, ಥಾಣೆಯಲ್ಲಿ ಹೆಲಿ ಕಾಪ್ಟರ್ ದುರಂತ, ತಾಜ್ ಮಹಲ್ ಮುಂದೆ ನರ್ತನ, ತಿರುವನಂತಪುರದಲ್ಲಿ ಕಾಂಗ್ರೆಸ್ ಅಧಿನಾಯಕಿ,ನ್ಯೂಯಾರ್ಕಿನಲ್ಲಿ ಮನಮೋಹನ್ ಸಿಂಗ್ ಹಾಗೂ ನವಾಜ್ ಷರೀಫ್, ಚೆನ್ನೈನಲ್ಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ವಿರುದ್ಧ ಪ್ರತಿಭಟನೆ, ತೆಲಂಗಾಣದಲ್ಲಿ ಮುಂದುವರೆದ ಜನ ಜಾತ್ರೆ ಪ್ರತಿಭಟನೆ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ

ವಡೋದರಾದಲ್ಲಿ
ವಿದ್ಯಾರ್ಥಿಗಳು ಹೃದಯದ ಆಕಾರದಲ್ಲಿ ಕುಳಿತು ವಿಶ್ವ ಹೃದಯ ದಿನ ಆಚರಿಸಿದರು.

ಮುಂಬೈನಲ್ಲಿ
ಮುಂಬೈ: ವಿದ್ಯಾರ್ಥಿಗಳು, ಸರ್ಕಾರೇತರ ಸಂಸ್ಥೆಗಳು ಹೃದಯದ ರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ

ತೆಲಂಗಾಣದಲ್ಲಿ
ಹೈದರಾಬಾದ್: ಸಕಲ ಜನ ಭೇರಿ ವಿವಿಧ ತೆಲಂಗಾಣ ರಾಜ್ಯ ಪರ ರಾಜಕೀಯ ಪಕ್ಷಗಳಿಂದ ಆಯೋಜನೆಗೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ.

ಚೆನ್ನೈನಲ್ಲಿ
ಶ್ರೀಲಂಕಾ ಆಟಗಾರರು ಭಾರತದ ತಂಡಗಳಲ್ಲಿ ಆಡುವುದನ್ನು ವಿರೋಧಿಸಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ವಿರುದ್ಧ ವಿದ್ಯಾರ್ಥಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ನವಾಜ್-ಎಂಎಂ ಸಿಂಗ್
ನ್ಯೂಯಾರ್ಕ್ ನಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕಿಸ್ತಾನದ ನವಾಜ್ ಷರೀಫ್ ಅವರು ದ್ವಿಪಕ್ಷೀಯ ಮಾತುಕತೆಗೆ ಕುಳಿತ್ತಿದ್ದಾರೆ. PTI Photo by Shahbaz Khan












Click it and Unblock the Notifications