ರಂಜನ್ ಗೋಗಾಯ್ ರಾಜ್ಯಸಭೆ ಪ್ರವೇಶಿಸಿದ ಮೊದಲ ಸಿಜೆಐ ಅಲ್ಲ

ನವದೆಹಲಿ, ಮಾರ್ಚ್ 17 : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್‌ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ. ಈ ಬಗ್ಗೆ ಈಗ ದೇಶದಲ್ಲಿ ಚರ್ಚೆಗಳು ಆರಂಭವಾಗಿವೆ.

Recommended Video

      ಮಹಿಳೆ ರೈಲು ಓಡಿಸುತ್ತಿರುವ ವಿಡಿಯೋ ವೈರಲ್ | Viral | Oneindia Kannada

      ಅಯೋಧ್ಯೆ, ರಫೆಲ್ ಸೇರಿದಂತೆ ಪ್ರಮುಖ ಪ್ರಕರಣಗಳ ಬಗ್ಗೆ ತೀರ್ಪು ನೀಡಿದ್ದ ರಂಜನ್ ಗೋಗಾಯ್‌ರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವ ಬಗ್ಗೆ ಪ್ರತಿಪಕ್ಷಗಳು ಸಹ ಪ್ರಶ್ನೆ ಎತ್ತಿವೆ. ಆದರೆ, ಗೋಗಾಯ್ ರಾಜ್ಯಸಭೆಗೆ ನಾಮ ನಿರ್ದೇಶಿತಗೊಂಡ ಮೊದಲ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಲ್ಲ.

      ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಗನಾಥ್ ಮಿಶ್ರಾ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಸುಪ್ರೀಂಕೋರ್ಟ್ 21ನೇ ಸಿಜೆಐ ಆಗಿದ್ದ ಅವರು 1990ರ ಸೆಪ್ಟೆಂಬರ್ 25ರ ತನಕ ಕಾರ್ಯ ನಿರ್ವಹಣೆ ಮಾಡಿದ್ದರು. ಅವರು ನಾಮ ನಿರ್ದೇಶನಗೊಂಡಿರಲಿಲ್ಲ, ಕಾಂಗ್ರೆಸ್ ಟಿಕೆಟ್ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು.

      Ranjan Gogoi Not First Former CJI To Enter Rajya Sabha

      ರಂಗನಾಥ್ ಮಿಶ್ರಾ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರು ಸಹ ಆಗಿದ್ದರು. 1984ರ ಸಿಖ್ ವಿರೋಧಿ ದಂಗೆ ಬಗ್ಗೆ ವರದಿ ನೀಡಲು ರಚನೆ ಮಾಡಿದ್ದ ರಂಗನಾಥ್ ಮಿಶ್ರಾ ಆಯೋಗದ ನೇತೃತ್ವ ವಹಿಸಿದ್ದರು. ರಂಗನಾಥ್ ಮಿಶ್ರಾ ಅವರು 1998ರಿಂದ 2004ರ ತನಕ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದರು.

      ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಬಹರುಲ್ ಇಸ್ಲಾಂ ರಾಜ್ಯಸಭೆಗೆ ಮೊದಲು ಆಯ್ಕೆಯಾದ ಸಿಜೆಐ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಹರುಲ್ ಇಸ್ಲಾಂ 1972ರಲ್ಲಿ ಕಾಂಗ್ರೆಸ್ ಟಿಕೆಟ್ ಮೂಲಕ ರಾಜ್ಯಸಭೆ ಪ್ರವೇಶ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+