Ram Mandir inauguratin: ವಿಶೇಷ ಆಹ್ವಾನಿತರ ಪಟ್ಟಿ, 'ಸೀತಾ-ರಾಮ' ಪಾತ್ರಧಾರಿಗೂ ಆಹ್ವಾನ
ಬೆಂಗಳೂರು, ಜನವರಿ 12: ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪಣೆಗೆ ದಿನಗಣನೇ ಆರಂಭವಾಗಿ ದೆ. ಮತ್ತೊಂದು ಕಡೆ ಕಾಯಕ್ರಮಕ್ಕೆ ಹೋಗುವವರು, ಗೈರಾಗುವ ವಿಚಾರವು ಚರ್ಚೆ ಆಗುತ್ತಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಯೋಧ್ಯೆಗೆ ಗಾಗಿ ಹೋರಾಡಿದ ಕರಸೇವಕರು ಸೇರಿದಂತೆ ಅನೇಕರಿಗೆ ಆಹ್ವಾನ ನೀಡಿದೆ. ಈ ವಿಶೇಷ ಆಹ್ವಾನಿತರಲ್ಲಿ 'ಧಾರವಾಹಿ'ಯಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಪಾತ್ರ ಮಾಡಿದವರು ಸೇರಿದ್ದಾರೆ.
ಜನವರಿ 22 ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಶ್ರೀರಾಮ ಜನ್ಮಭೂಮಿ ಹಲವಾರು ವಿಶೇಷ ವ್ಯಕ್ತಿಗಳಿಗೆ ಆಹ್ವಾನ ನೀಡಿದೆ. ಈ ಪೈಕಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಕುಟುಂಬ ಸದಸ್ಯರಿಗೆ, 2014ರಲ್ಲಿ ನರೇಂದ್ರ ಮೋದಿ ಅವರ ವೀಸಾಗಾಗಿ ಹೋರಾಡಿದ ವೈದ್ಯ ಭರತ್ ಬರೈ, ಮುಸ್ಲಿಂ ಕರಸೇವಕ ಮೊಹಮ್ಮದ್ ಹಬೀಬ್ ಹಾಗೂ ಶ್ರೀರಾಮ ಜನ್ಮಭೂಮಿ ವಿವಾದದಲ್ಲಿ ಬಾಬ್ರಿ ಮಸೀದಿ ಪರದಾವೆ ಹೂಡಿದ್ದ ಇಕ್ಸಾಲ್ ಅನ್ಸಾರಿ ಸೇರಿ ಹಲವರಿಗೆ ಆಹ್ವಾನ ನೀಡಲಾಗಿದೆ.

ಇದಷ್ಟೇ ಅಲ್ಲದೇ ವಿಶ್ವದಾದ್ಯಂತ 53 ದೇಶಗಳ 100ಕ್ಕೂ ಹೆಚ್ಚು ವಿಶೇಷ ಅತಿಥಿಗಳಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಕೊಡಲಾಗಿದೆ.
ನವೃತ್ತ ಜಡ್ಜ್, ಮಿಲಿಟರಿ ಮುಖ್ಯಸ್ಥರು ವಿಶೇಷ ಅತಿಥಿಗಳು
ಸುಪ್ರೀಂ ಕೋರ್ಟಿನ ಮೂವರು ನಿವೃತ್ತ ಜಡ್ಜ್ ಗಳು, ಭೂ, ವಾಯು ಮತ್ತು ನೌಕಾ ದಳಗಳ ಮುಖ್ಯಸ್ಥರು, ನೋಬೆಲ್, ಭಾರತ ರತ್ನ, ಪದ್ಮ, ಪರಮ ವೀರ ಚಕ್ರಪ್ರಶಸ್ತಿ ಪುರಸ್ಕತರು, ಕುಟುಂಬ ಸ್ಥರು, ಪ್ರಮುಖ ಹುದ್ದೆಯ ಐಪಿಎಸ್ ಅಧಿಕಾರಿಗಳು, ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರು, ಸ್ವಯಂಸೇವಕ ಸಂಸ್ಥೆಗಳು ಮತ್ತಿತರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ಆಗಮಿಸಲಿದ್ದಾರೆ.
ಇದರೊಂದಿಗೆ ಶಿಕ್ಷಣ ತಜ್ಞರು, ಸಾಹಿತಿಗಳು, ಕವಿಗಳು, ರೈತರು, ಕಲಾವಿದರು, ಕ್ರೀಡಾಳುಗಳು, 150 ವಿವಿಧ ಸಂಪ್ರದಾಯಗಳ ಪೂಜಾರಿಗಳು ಮತ್ತು ಹಿಂದೂ ಸಮುದಾಯದ ಜನರು ವಾಸಿಸುತ್ತಿರುವ 50 ದೇಶಗಳ ಪ್ರಮುಖ 55 ಜನರು ಭಾಗವಹಿಸಲಿದ್ದಾರೆ. ಉದ್ಯಮಿಗಳಾದ ರತನ್ ಟಾಟಾ, ಎಲ್ಲ ಕರಸೇವಕರಿಗೂ ಆಹ್ವಾನ ನೀಡಲಾಗಿದೆ.

ರಾಮ-ಸೀತಾ ಪಾತ್ರಧಾರಿಗಳು ವಿಶೇಷ ಆಹ್ವಾನಿತರು
ಇನ್ನೂ ಹಿಂದಿ ಭಾಷೆಯಲ್ಲಿ ಪ್ರಸಾರವಾಗಿ ಜನಮನ ಗೆದ್ದಿದ್ದ 'ರಾಮಾಯಣ' ಧಾರವಾಹಿಯ 'ಶ್ರೀರಾಮ' ಪಾತ್ರಧಾರಿ' ಅರುಣ್ ಗೋವಿಲ್', 'ಸೀತಾ' ಪಾತ್ರಧಾರಿಯಲ್ಲಿ ಕಾಣಿಸಿಕೊಂಡಿದ್ದ 'ದೀಪಿಕಾ ಚಿಲ್ಲಿಯಾ' ಅವರಿಗೂ ವಿಶೇಷ ಆಹ್ವಾನ ನೀಡಲಾಗಿದೆ. ಇವರು ರಾಮಾಯಣದ ಧಾರವಾಹಿಯಲ್ಲಿ ತಮ್ಮ ನಟನೆ ಮೂಲಕವೇ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಶ್ರಿರಾಮ, ಸೀತೆ ಎಂದ ಕೂಡಲೇ ಈ ಇಬ್ಬರು ಮುಖವೇ ನೆನಪಿಗೆ ಬರುತ್ತದೆ. ಅಷ್ಟರ ಮಟ್ಟಿಗೆ ಸುಂದರವಾಗಿ ಅಭಿನಯಿಸಿದ್ದರು. ಇದೀಗ ಅವರು ರಾಮ ಮಂದಿರ ಮಹತ್ವದ ಕಾರ್ಯಕ್ರಮದ ಭಾಗವಾಗಲಿದ್ದಾರೆ.
ಇದಕ್ಕು ಮೊದಲು ಕನ್ನಡ ಚಿತ್ರರಂಗದಲ್ಲಿ ವಿಶೇಷ ಸಿನಿಮಾಗಳ ಮೂಲಕ ಮಹತ್ವ ಮೈಲಿಗಲ್ಲು ಸಾಧಿಸಿದ ಕೆಜಿಎಫ್ ನಟ ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಹಾಗೂ ಕಾಂತಾರ ಮೂಲಕ ಜನಮನ ಗೆದ್ದ ರಿಶಬ್ ಶೆಟ್ಟಿ (Rishab Shetty) ಸೇರಿದಂತೆ ಅನೇಕ ಮಹನಿಯರನ್ನು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications