ಭಾರತೀಯ ರಾಜ್ಯದ ವಿರುದ್ಧ ಹೋರಾಟ: ರಾಹುಲ್ ಗಾಂಧಿ ಹೇಳಿಕೆ ಭಾರತದ ಏಕತೆಗೆ ಬೆದರಿಕೆ
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡುವುದು ಹೊಸದೇನಲ್ಲ. ಇದು ಅವರು ಸರ್ಕಾರ ಮತ್ತು ರಾಜಕೀಯವನ್ನು ಅರ್ಥ ಮಾಡಿಕೊಂಡಿರುವ ಬಗೆಯ ಬಗ್ಗೆಯೇ ಪ್ರಶ್ನೆ ಎತ್ತುವಂತೆ ಮಾಡಿದೆ. ಎರಡು ದಶಕಗಳಲ್ಲಿ ಅವರ ಹಲವು ಹೇಳಿಕೆಗಳು ನಕರಾತ್ಮಕವಾಗಿಯೇ ಇವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಇತ್ತೀಚೆಗೆ ಅವರು ನೀಡಿದ "ಭಾರತೀಯ ರಾಜ್ಯದ ವಿರುದ್ಧ ಹೋರಾಟ" ಹೇಳಿಕೆಯಾಗಿದೆ, ಈ ಕುರಿತು ಈಗ ಆಳವಾಗಿ ಗಮನಿಸಬೇಕಿದೆ.
ಬುಧವಾರ ರಾಹುಲ್ ಗಾಂಧಿ, "ನಾವು ಬಿಜೆಪಿ, ಆರ್ಎಸ್ಎಸ್ ಮತ್ತು ಭಾರತೀಯ ರಾಜ್ಯದ ವಿರುದ್ಧ ಹೋರಾಟ ಮಾಡುತ್ತೇವೆ" ಎಂದು ಘೋಷಣೆ ಮಾಡಿದರು. ಅಲ್ಲದೇ ಅವರು ಇದು ರಾಜಕೀಯ ಸಂಘರ್ಷವಲ್ಲ ಎಂದು ಒತ್ತಿ ಹೇಳಿದರು. ಇದು ಬೌದ್ಧಿಕ ಉದ್ದೇಶ ಮತ್ತು ಸ್ಥಾನೀಕರಣದ ಕುರಿತು ಕಾಳಜಿ ವಹಿಸುವಂತೆ ಮಾಡಿದೆ.

ಲೆಕ್ಕಾಚಾರ ಮತ್ತು ಪ್ರಚೋದನೆಗಳು
ರಾಹುಲ್ ಗಾಂಧಿ ಬಳಕೆ ಮಾಡುವ ಪದಗಳು ಮಾವೋವಾದಿಗಳ ವಾಕ್ಚಾತುರ್ಯದಂತೆ ಲೆಕ್ಕಾಚಾರದ ಅನುಸಂಧಾನಕ್ಕೆ ಕಾರಣವಾಗುತ್ತಿದೆ. ಯಾರು ಸಂವಿಧಾನಿಕ ಹುದ್ದೆಯನ್ನು ಹೊಂದಿದ್ದಾರೆಯೋ ಅವರು ದೇಶದ ಸಮಗ್ರತೆ ನಾಶ ಮಾಡುವಂತೆ ಹೇಳಿಕೆ ನೀಡುತ್ತಿರುವಂತೆ ಭಾವನೆ ಬರುತ್ತಿದೆ. ಇದು ಆಫ್ ದಿ ರೆಕಾರ್ಡ್ ಮಾತುಗಳಲ್ಲ, ಇದು ತಂತ್ರದಂತೆ ಕಾಣುತ್ತದೆ. ಈ ರೀತಿ ಆರೋಪಿಸುವುದು ಅಜ್ಞಾನ ಎಂದು ಭಾವಿಸುವ ದಿನಗಳು ಮುಗಿದು ಹೋಗಿದೆ ಎನ್ನಿಸುತ್ತದೆ.
ರಾಷ್ಟ್ರವಾಗಿ ಭಾರತವನ್ನು ವಿರೋಧಿಸುವುದು
ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಭಾರತದ ಒಗ್ಗಟ್ಟನ್ನು ಪ್ರಶ್ನಿಸಿಲ್ಲ. ಅವರು ಬಹಿರಂಗವಾಗಿ "ಭಾರತ ರಾಷ್ಟ್ರವಲ್ಲ" ಆದರೆ "ರಾಜ್ಯಗಳ ಒಕ್ಕೂಟ" ಎಂದು ಹೇಳಿದ್ದರು. ಇಂತಹ ಹೇಳಿಕೆಗಳು ರಾಷ್ಟ್ರೀಯತೆಯ ಮೂಲ ತತ್ವವನ್ನು ದುರ್ಬಲಗೊಳಿಸುತ್ತದೆ, ಅದನ್ನು ಉದ್ದೇಶಪೂರ್ವಕವಾಗಿ ವಿರೋಧಿಸುತ್ತಾರೆ ಅನ್ನಿಸುತ್ತಿದೆ. ಅವರ ಇತ್ತೀಚಿನ ಹೇಳಿಕೆ ಭಾರತವನ್ನು ಏಕೀಕೃತ ರಾಷ್ಟ್ರವೆಂದು ನಂಬುವುದಿಲ್ಲ ಎಂಬ ಭಾವನೆಯನ್ನು ಬಲಪಡಿಸುತ್ತಿದೆ.
ಭಾರತದ ಸಮಗ್ರತೆ ಮೇಲೆ ದಾಳಿ
ಭಾರತದ ವಿರುದ್ಧ ಹೋರಾಟ ಎಂದು ಘೋಷಣೆ ಮಾಡುವ ಮೂಲಕ ಗಾಂಧಿ ಪರೋಕ್ಷವಾಗಿ ಭಾರತ ಸಮಗ್ರತೆಯ ವಿರುದ್ಧ, ರಾಷ್ಟ್ರ ಧ್ವಜ ಮತ್ತು ಸಂವಿಧಾನದ ವಿರುದ್ಧ ಮಾತನಾಡಿದ್ದಾರೆ. ಇಂತಹ ಹೇಳಿಕೆ ಭಾರತದ ಕೋಟ್ಯಾಂತರ ಜನರ ಸಾರ್ವಭೌಮತ್ವ ಮತ್ತು ಏಕತೆಗೆ ಸವಾಲು ಎಸೆಯುತ್ತದೆ, ವೈವಿಧ್ಯಮಯ ಜನಸಂಖ್ಯೆಯನ್ನು ಧರ್ಮ ನಿರಪೇಕ್ಷತೆಯಲ್ಲಿ ನೋಡುವ ವ್ಯವಸ್ಥೆಯಲ್ಲಿ ಬಿರುಕು ಸೃಷ್ಟಿಸುತ್ತದೆ.
ಸಂವಿಧಾನಿಕ ತತ್ವಗಳು
ಭಾರತದ ಸಂವಿಧಾನದ 12ನೇ ಆರ್ಟಿಕಲ್ ಭಾರತವನ್ನು ರಾಷ್ಟ್ರ ಎಂದು ಹೇಳುತ್ತದೆ, ಇದರಲ್ಲಿ ಸಂಸತ್, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಂತಹ ಎಲ್ಲಾ ಶಾಸನ ಮತ್ತು ಕಾರ್ಯನಿರ್ವಾಹಕ ಅಂಗಗಳು ಇವೆ. ಭಾರತದ ವಿರುದ್ಧ ಹೋರಾಟ ಎಂದು ಘೋಷಣೆ ಮಾಡುವ ಮೂಲಕ ಗಾಂಧಿ ಮೂಲಭೂತವಾದ ಸಂವಿಧಾನಿಕ ಸಂಸ್ಥೆಗಳಿಗೆ ಸವಾಲು ಹಾಕುತ್ತಿದ್ದಾರೆ, ಲೋಕಸಭೆಯಿಂದ ಸುಪ್ರೀಂಕೋರ್ಟ್ ತನಕ ಎಲ್ಲಾ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ.
ಹಿಂದಿನ ತಪ್ಪು ಹೆಜ್ಜೆಗಳು
ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆಗಳು ಹುಬ್ಬೇರಿಸುವಂತೆ ಮಾಡಿಲ್ಲ. ಯುಪಿಎ ಆಡಳಿತದ ಅವಧಿಯಲ್ಲಿಯೂ ಸಚಿವ ಸಂಪುಟದ ಪ್ರಸ್ತಾವನೆಯನ್ನು ಸಾರ್ವಜನಿಕವಾಗಿ ಹರಿದುಹಾಕುವುದು ಮತ್ತು ಸೂಕ್ಷ್ಮ ಪರಿಸ್ಥಿತಿ ಸಮಯದಲ್ಲಿ ಚೀನಾದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸುವುದು ಅವರ ಉದ್ದೇಶ ಅನುಮಾನದಿಂದ ನೋಡುವಂತೆ ಮಾಡಿವೆ.
ಅಪಾಯಕಾರಿ ಮೈತ್ರಿ ಮತ್ತು ಪ್ರಶ್ನಾರ್ಹ ಉದ್ದೇಶಗಳು
ಸಿಐಎ ನಿರ್ವಹಣೆ ಕಾರ್ಯಕರ್ತರ ಜೊತೆ ಸಭೆಗಳಿಂದ ಹಿಡಿದು ಸೋಮಾಲಿ-ಅಮೆರಿಕನ್ ರಾಜಕಾರಣಿ ಇಲ್ಹಾನ್ ಒಮರ್ ಭೇಟಿ ತನಕ ಗಾಂಧಿಯ ಕ್ರಿಯೆಗಳು ಭಾರತ ವಿರೋಧಿ ಧ್ವನಿಗಳೊಂದಿಗೆ ಮೈತ್ರಿ ಮಾಡಿಕೊಂಡಿರುವುದರ ಜೊತೆ ದೇಶದ ಅಖಂಡತೆ ಪ್ರಶ್ನಿಸುವುದನ್ನು ಸೂಚಿಸುತ್ತವೆ.
ಅಖಂಡತೆ ಮತ್ತು ಏಕತೆಗೆ ಬೆದರಿಕೆ
ರಾಹುಲ್ ಗಾಂಧಿ ಹೇಳಿಕೆ ವಿಶ್ವಮಟ್ಟದಲ್ಲಿ ಭಾರತದ ಚಿತ್ರಣಕ್ಕೆ ಪೆಟ್ಟು ನೀಡುವುದು ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಅಖಂಡತೆ ಮತ್ತು ಏಕತೆಗೆ ಬೆದರಿಕೆ ಹಾಕುವಂತಿದೆ. ಹೇಳಿಕೆ ಸಮುದಾಯಗಳನ್ನು ದೂರಗೊಳಿಸುವ, ವಿಭಜನೆ, ರಾಷ್ಟ್ರವಿರೋಧಿ ಅಂಶಗಳನ್ನು ಪ್ರೋತ್ಸಾಹಿಸುವ ಅಪಾಯವನ್ನು ಹೊಂದಿದೆ.
ಉತ್ತರ ಬೇಕಾಗಿದೆ
ಭಾರತ ರಾಜ್ಯದ ವಿರುದ್ಧ ಹೋರಾಟದ ಕರೆಯ ಬಳಿಕ ರಾಹುಲ್ ಗಾಂಧಿ ವಿವರಣೆಯನ್ನು ನೀಡಿದ್ದಾರೆ. ಅವರ ಕುಟುಂಬವನ್ನು ಅತ್ಯಂತ ಉನ್ನತ ಸ್ಥಾನಗಳಲ್ಲಿ ಗೌರವಿಸಿದ ದೇಶದ ವಿರುದ್ಧ ಏಕೆ ಅವರು ಧ್ವನಿ ಎತ್ತುತ್ತಾರೆ? ಎಂದು ಪ್ರಶ್ನಿಸುವಂತೆ ಮಾಡಿದೆ. ಭಾರತಕ್ಕೆ ನಾಯಕತ್ವ ಅಗತ್ಯವಿರುವ ಸಮಯದಲ್ಲಿ, ಅವರ ಹೇಳಿಕೆಗಳು ವಿಭಜನೆ ಮತ್ತು ಅವಿಶ್ವಾಸದ ಬೀಜಗಳನ್ನು ಬಿತ್ತುತ್ತಿವೆ. ಪುರಾತನವಾದ ಪಕ್ಷದ ಪರಂಪರೆಯನ್ನು ಮಸುಕುಗೊಳಿಸುತ್ತಿದೆ.












Click it and Unblock the Notifications