Get Updates
Get notified of breaking news, exclusive insights, and must-see stories!

ಪಂಜಾಬ್ ಸಚಿವ ಸಂಪುಟ ವಿಸ್ತರಣೆ: ಮತ್ತಿಬ್ಬರು ಸಚಿವರ ಸೇರ್ಪಡೆ

ಚಂಡೀಗಢ, ಮೇ 31: ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರವು ಬುಧವಾರ ಶಾಸಕರಾದ ಬಾಲ್ಕರ್ ಸಿಂಗ್ ಮತ್ತು ಗುರ್ಮೀತ್ ಸಿಂಗ್ ಖುಡಿಯಾನ್ ಅವರನ್ನು ಕ್ಯಾಬಿನೆಟ್ ಮಂತ್ರಿಗಳಾಗಿ ಸೇರ್ಪಡೆಗೊಳಿಸಿದೆ.

ಬಾಲ್ಕರ್ ಸಿಂಗ್ ಮತ್ತು ಗುರ್ಮೀತ್ ಸಿಂಗ್ ಖುಡಿಯಾನ್ ಚಂಡೀಗಢದಲ್ಲಿ ಪಂಜಾಬ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಲ್ಕರ್ ಸಿಂಗ್ ಜಲಂಧರ್‌ನ ಕರ್ತಾರ್‌ಪುರದ ಶಾಸಕರಾಗಿದ್ದರೆ, ಖುದಿಯಾನ್ ಲಂಬಿ ಕ್ಷೇತ್ರದಿಂದ ಶಾಸಕರಾಗಿದ್ದಾರೆ.

Punjab Cabinet Expansion: Induction of two more ministers

ಸಂಪುಟ ಸಚಿವ ಇಂದರ್‌ಬೀರ್ ಸಿಂಗ್ ನಿಜ್ಜರ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು, ಮುಖ್ಯಮಂತ್ರಿ ಮಾನ್ ಅವರು ಸ್ಥಳೀಯಾಡಳಿತ ಸಚಿವ ನಿಜ್ಜರ್ ಅವರ ರಾಜೀನಾಮೆಯನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ರವಾನಿಸಿದ್ದರು. ಬುಧವಾರ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಭಗವಂತ್ ಮಾನ್ ನೇತೃತ್ವದ ಸಂಪುಟವು ಪಂಜಾಬ್ ರಾಜ್ಯಪಾಲರಿಂದ ಸಮಯ ಕೋರಿದ್ದರು.

ಪ್ರಸ್ತುತ, ಮುಖ್ಯಮಂತ್ರಿ ಸೇರಿದಂತೆ ಮಾನ್ ನೇತೃತ್ವದ ಸಚಿವ ಸಂಪುಟದ ಬಲ 15 ಆಗಿತ್ತು. ಈಗ ಇಬ್ಬರ ಸೇರ್ಪಡೆಯಿಂದ ಸಂಪುಟದಲ್ಲಿ 18 ಸ್ಥಾನಗಳು ಭರ್ತಿಯಾಗಿವೆ. ಈ ಸಂಪುಟ ಸೇರಿರುವ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಬಾಲ್ಕರ್ ಸಿಂಗ್‌ ಅವರು ಕರ್ತಾರ್‌ಪುರ ಮೀಸಲು ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಮೇ 13 ರಂದು ನಡೆದ ಉಪಚುನಾವಣೆಯಲ್ಲಿ ಪಕ್ಷವು ಗೆದ್ದಿರುವ ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಇದು ಬರುತ್ತದೆ. ಇಬ್ಬರೂ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

ಮುಖ್ಯಮಂತ್ರಿ ಭಗವಂತ ಮಾನ್ ನಿಜ್ಜರ್ ಅವರ ರಾಜೀನಾಮೆಯನ್ನು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರಿಗೆ ಶೀಘ್ರ ಅಂಗೀಕಾರಕ್ಕಾಗಿ ರವಾನಿಸಿದ್ದರು. ವೈಯಕ್ತಿಕ ಆಧಾರದ ಮೇಲೆ ರಾಜೀನಾಮೆ ನೀಡಿರುವ ನಿಜ್ಜರ್ ಅವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಸಿಎಂ ರಾಜ್ಯಪಾಲರಿಗೆ ತಿಳಿಸಿದ್ದಾರೆ. ಬಾಲ್ಕರ್ ಸಿಂಗ್ ಮತ್ತು ಖುದಿಯಾನ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಸೇರಿಸಲು ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Punjab Cabinet Expansion: Induction of two more ministers

ಅಮೃತಸರ ದಕ್ಷಿಣದಿಂದ ಶಾಸಕರಾಗಿರುವ ನಿಜ್ಜರ್ ಅವರು ಡೈಲಿ ಅಜಿತ್‌ನ ಮುಖ್ಯ ಸಂಪಾದಕ ಬರ್ಜಿಂದರ್ ಸಿಂಗ್ ಹಮ್ದರ್ದ್ ಅವರನ್ನು ಬೆಂಬಲಿಸುವ ಹೇಳಿಕೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ನಂತರ ರಾಜೀನಾಮೆ ನೀಡಿದ್ದಾರೆ. ಜಂಗ್-ಎ-ಆಜಾದಿ ಸ್ಮಾರಕವನ್ನು ಸ್ಥಾಪಿಸಲು ಹಣದ ದುರುಪಯೋಗದ ಆರೋಪದ ಮೇಲೆ ಬರ್ಜಿಂದರ್ ಸಿಂಗ್ ಹಮ್ದರ್ದ್ ತನಿಖೆಗೆ ಒಳಪಟ್ಟಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ನಡೆದ ಮೊದಲ ಸಂಪುಟ ವಿಸ್ತರಣೆಯಲ್ಲಿ ನಿಜ್ಜರ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ಈ ಹಿಂದೆ ಎಎಪಿ ಸರ್ಕಾರ ರಚಿಸಿದ ನಂತರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಅವರು 50 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಮಾನವ ಕಲ್ಯಾಣ ಸಂಸ್ಥೆಗಳನ್ನು ನಡೆಸುತ್ತಿರುವ 118 ವರ್ಷ ವಯಸ್ಸಿನ ಸಿಖ್ ಸಂಘಟನೆಯ ಮುಖ್ಯ ಖಾಲ್ಸಾ ದಿವಾನ್‌ನ ಅಧ್ಯಕ್ಷರೂ ಆಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+