ಕಳಪೆ ಸೇವೆ: ವಂದೇ ಭಾರತ್ ಬುಕ್ ಮಾಡಿ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಿದ ವ್ಯಕ್ತಿ
ನವದೆಹಲಿ, ಜೂನ್ 19: ಕೆಳಪೆ ದರ್ಜೆಯ ಸೇವೆಯಿಂದ ಐಷಾರಾಮಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ತನ್ನ ಕನಸು ಭಗ್ನಗೊಂಡಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದು, ತಾನು ಪ್ರಯಾಣಿಸಲು ಬುಕ್ ಮಾಡಿದ್ದ ಟಿಕೆಟ್ ರದ್ದು ಮಾಡಿ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಿದ ಘಟನೆ ನಡೆದಿದೆ.
ಸಿದ್ಧಾರ್ಥ್ ಪಾಂಡೆ ಎಂಬ ವ್ಯಕ್ತಿ ವಂದೇ ಭಾರತ್ನಲ್ಲಿ ತನ್ನ ಅನುಭವವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಭಾರತೀಯ ರೈಲ್ವೆ ಮತ್ತು ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸಿದ್ಧಾರ್ಥ್ ಪಾಂಡೆ ಅವರು ರೈಲಿನೊಳಗಿನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಬ್ಲಾಕ್ ಆಗಿರುವ ಶೌಚಾಲಯ ಮತ್ತು ವಂದೇ ಭಾರತ್ ರೈಲಿನ ಆವರಣದ ಒಳಗಿನ ಕೆಟ್ಟ ವಾತಾವರಣವನ್ನು ತೋರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪೋಸ್ಟ್ ಮಾಡಿದ ಟ್ವೀಟ್ ಈಗ ಹೆಚ್ಚು ವೈರಲ್ ಆಗಿದೆ.

ಸಿದ್ಧಾರ್ಥ್ ಪಾಂಡೆ ತಮ್ಮ ಟ್ವೀಟ್ನಲ್ಲಿ, ವಂದೇ ಭಾರತ್ನಲ್ಲಿ ಮೊದಲ ಬಾರಿ ಪ್ರಯಾಣ ಮಾಡಲು ಉತ್ಸುಕನಾಗಿದ್ದೆ. ಆದರೆ ವಂದೇ ಭಾರತ್ ಹೆಸರಿನಲ್ಲಿ ಮತ್ತೊಂದು ರೈಲನ್ನು ನೋಡಿ ಆಘಾತವಾಯಿತು. ವಾಶ್ರೂಮ್ಗಳು ತುಂಬಾ ಕೆಟ್ಟದಾಗಿದ್ದವು, ಸೇವೆಗಳು ಕೂಡ ಕೆಟ್ಟದಾಗಿವೆ. ವಾಸ್ತವಿಕ ವಂದೇ ಭಾರತ್ ಪ್ರಕಾರ ಇನ್ನೂ ಶುಲ್ಕ ವಿಧಿಸಲಾಗಿದೆ ಎಂದು ಬರೆದಿದ್ದಾರೆ.
ಈ ರೈಲು ನವದೆಹಲಿ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ನಡುವೆ ಸಂಚಾರ ಮಾಡುತ್ತಿತ್ತು. ಜೂನ್ 10 ರಂದು ಅವರು ರೈಲು ಸಂಖ್ಯೆ 22439 ರ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಹತ್ತಲು ನಿರ್ಧರಿಸಿ ರೈಲಿನಲ್ಲಿ ಕಂಡ ಕೆಟ್ಟ ಪರಿಸ್ಥಿತಿಯನ್ನು ಹೇಳಿಕೊಂಡರು. ನಾನು ಅಂದುಕೊಂಡ ರೈಲಿಗೂ ಇದಕ್ಕೂ ಬಹಳ ವ್ಯತ್ಯಾಸವಿದೆ. ಇಲ್ಲಿ ಶೌಚಾಲಯಗಳು ಮುಚ್ಚಿಹೋಗಿದ್ದು, ಕೆಟ್ಟ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಪಾಂಡೆ ಹೇಳಿದರು.
@AshwiniVaishnaw @PMOIndia @IRCTCofficial
— Sidhharth Pandey (@VishalG18804669) June 10, 2023
Was excited to board 1 tym on Vande Bharat. But shocked to see another train in the name of Vande Bharat.
Washrooms are pathetic and services are worst.
Still charged fare as per actual VANDE BHARAT.
Train no - 22439
Date- 10-06-2023 pic.twitter.com/AYaOYvSuvg
ವಂದೇ ಭಾರತ್ ಎಕ್ಸ್ಪ್ರೆಸ್ ಮೇಲಿನ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಗಮನವನ್ನು ಸೆಳೆಯಿತು. ಶೀಘ್ರದಲ್ಲೇ ಟ್ವಿಟರ್ನಲ್ಲಿ ಟೀಕೆಗಳು ಕೇಳಿ ಬಂದವು. ಕೆಲವು ಬಳಕೆದಾರರು ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು. ಕೆಲವು ಪ್ರಯಾಣಿಕರು ರೈಲಿನ ಸೀಟಿನ ಹೊದಿಕೆಗಳನ್ನು ಕಿತ್ತೆಸೆದಿದ್ದರು. ಇದು ರೈಲಿನ ಶೌಚಾಲಯದೊಳಗೆ ಅಡಚಣೆಗೆ ಕಾರಣವಾಯಿತು ಎಂದು ಪ್ರತಿಕ್ರಿಯಿಸಿದರು.
ಮತ್ತೊಬ್ಬರು ಕೆಲವೊಮ್ಮೆ ತಾಂತ್ರಿಕ ದೋಷ ಅಥವಾ ಕೆಲವು ನಿರ್ವಹಣಾ ಸಮಸ್ಯೆಗಳಿಂದಾಗಿ ವಂದೇ ಭಾರತ್ ರೈಲನ್ನು ಆ ದಿನಕ್ಕೆ ಓಡಿಸಲು ಯೋಗ್ಯವೆಂದು ಪರಿಗಣಿಸಲಾಗುವುದಿಲ್ಲ. ಅದಕ್ಕಾಗಿಯೇ ಅಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಹೆಚ್ಚುವರಿ ತೇಜಸ್ ರೈಲನ್ನು ಇಲ್ಲಿ ಒಡಿಸಲಾಗುತ್ತದೆ. ವಂದೇ ಭಾರತ್ ರೈಲು ಸೆಟ್ ಆಗಿರುವುದರಿಂದ ಇಲ್ಲಿ ಸಂಚಾರಕ್ಕೆ ಅನರ್ಹವೆಂದು ಪರಿಗಣಿಸಲಾಗಿದೆ ಎಂದು ಮತ್ತೊಬ್ಬರು ಹೇಳಿದರು.
ಇದು ವಂದೇ ಭಾರತ್ ರೈಲಿನಂತೆ ಕಾಣುತ್ತಿಲ್ಲ. ಹೌದು, ನಾವು ವಂದೇ ಭಾರತವನ್ನು ಬುಕ್ ಮಾಡಿದ್ದೇವೆ ಆದರೆ ರೈಲ್ವೆ ಇಲಾಖೆ ತೇಜಸ್ ರೈಲನ್ನು ಓಡಿಸಲು ಬದಲಾಯಿಸಿಸಲಾಯಿತು ಎಂದು ಪಾಂಡೆ ಅವರ ಟ್ವೀಟ್ಗೆ ಪ್ರತಿಕ್ರಿಯಿಸುವಾಗ ಮತ್ತೊಬ್ಬ ಬಳಕೆದಾರರೊಬ್ಬರು ಹೇಳಿದರು.












Click it and Unblock the Notifications