ವೈಷ್ಣೋದೇವಿಗೆ ರೈಲು, ಮೋದಿ ಕನಸು ನನಸು
ಶ್ರೀನಗರ, ಜು.4: ಜಮ್ಮು-ಕಾಶ್ಮೀರದಲ್ಲಿರುವ ಹಿಂದು ಪುಣ್ಯಕ್ಷೇತ್ರ ವೈಷ್ಣೋದೇವಿಗೆ ತೆರಳುವ ಭಕ್ತಾದಿಗಳ ಅನುಕೂಲಕ್ಕೆ ನೇರ ಸಂಪರ್ಕವಿರುವ ರೈಲು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಶುಕ್ರವಾರ ನನಸಾಗಿದೆ. ಕಣಿವೆ ರಾಜ್ಯಕ್ಕೆ ಕಾಲಿಟ್ಟಿರುವ ಮೋದಿ ಅವರು ಉಧಂಪುರ- ಕಟ್ರಾ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
ವೈಷ್ಣೋದೇವಿ ಕ್ಷೇತ್ರವಿರುವ ತ್ರಿಕೂಟ ಪರ್ವತದ ಬುಡದಲ್ಲಿರುವ ಕಾಟ್ರಾವರೆಗಿನ ರೈಲು ಮಾರ್ಗ ಶುಕ್ರವಾರ ಲೋಕಾರ್ಪಣೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಡೊವಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಲ್ಲಿ ತನಕ ಜಮ್ಮು ಹಾಗೂ ಉಧಂಪುರ ನಡುವೆ ಮಾತ್ರ ರೈಲು ಸಂಪರ್ಕವಿತ್ತು. ಈಗ ಇದೇ ರೈಲನ್ನು ಕಟ್ರಾವರೆಗೂ ವಿಸ್ತರಿಸಲಾಗಿದೆ. ಪ್ರಯಾಣಿಕರನ್ನು ಹೊತ್ತ ಮೊದಲ ರೈಲು ಕಟ್ರಾದಿಂದ ಜಮ್ಮುವಿನತ್ತ ಶುಕ್ರವಾರದಿಂದ ಪ್ರಯಾಣ ಆರಂಭಿಸಿದೆ.[ಕಣಿವೆ ರಾಜ್ಯಕ್ಕೆ ಮೋದಿ ಎಂಟ್ರಿ]

ಉಧಂಪುರ- ಕಟ್ರಾ ಮಾರ್ಗದಲ್ಲಿ ಏಳು ಸುರಂಗಗಳು, 30 ಸಣ್ಣ ಹಾಗೂ ಬೃಹತ್ ಸೇತುವೆಗಳು ಇವೆ. 25 ಕಿ.ಮೀ. ಉದ್ದದ ಈ ಮಾರ್ಗದ ನಿರ್ಮಾಣಕ್ಕೆ ಅಂದಾಜು 1132.75 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಜಮ್ಮು- ಉಧಂಪುರ ನಡುವೆ 53 ಕಿ.ಮೀ. ಅಂತರವಿದೆ. ಈ ಮಾರ್ಗದಲ್ಲಿ ಈಗಾಗಲೇ ರೈಲುಗಳು ಓಡಾಡುತ್ತಿವೆ. ಇದೀಗ ಉಧಂಪುರ ಹಾಗೂ ಕಟ್ರಾ ಮಾರ್ಗವೂ ಲೋಕಾರ್ಪಣೆಗೊಳ್ಳುತ್ತಿರುವುದರಿಂದ ವೈಷ್ಣೋದೇವಿ ಭಕ್ತರು ತ್ರಿಕೂಟ ಪರ್ವತದ ತಪ್ಪಲಿನವರೆಗೂ ರೈಲಿನಲ್ಲೇ ಪ್ರಯಾಣಿಸಬಹುದಾಗಿದೆ. ಅಲ್ಲಿಂದ ಕುದುರೆ ಅಥವಾ ಹೆಲಿಕಾಪ್ಟರ್ ಮೂಲಕ ವೈಷ್ಣೋದೇವಿ ದೇಗುಲ ತಲುಪಬಹುದು. ಇಷ್ಟು ದಿನ ಉಧಂಪುರದಿಂದ ಕಟ್ರಾವರೆಗೆ ರಸ್ತೆ ಮಾರ್ಗದಲ್ಲಿಯೇ ಸಂಚರಿಸಬೇಕಾಗುತ್ತಿತ್ತು.
The start made by Atal ji of connecting J&K through Railways, we have to take this ahead: PM @narendramodi
— PMO India (@PMOIndia) July 4, 2014 ಸದ್ಯ ಜಮ್ಮು- ಉಧಂಪುರ ನಡುವೆ ಮೂರು ಲೋಕಲ್ ರೈಲುಗಳು ಸಂಚರಿಸುತ್ತಿವೆ. ಅವೆಲ್ಲವನ್ನೂ ಕಟ್ರಾವರೆಗೆ ವಿಸ್ತರಿಸಲಾಗುತ್ತದೆ. ಅಲ್ಲದೆ, ಜಮ್ಮು ಮೇಲ್ ಹಾಗೂ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲುಗಳನ್ನು ಕಟ್ರಾವರೆಗೂ ಓಡಿಸುವ ಚಿಂತನೆ ಇದೆ. ಕಟ್ರಾ- ಕಲ್ಕಾ ಎಕ್ಸ್ಪ್ರೆಸ್ ಹಾಗೂ ನವದೆಹಲಿ- ಕಟ್ರಾ ಎ.ಸಿ. ಎಕ್ಸ್ಪ್ರೆಸ್ ಸಂಚಾರ ಆರಂಭಿಸುವ ಆಲೋಚನೆ ಇದೆ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಮತ್ತೂಂದು ಪುಣ್ಯ ಕ್ಷೇತ್ರವಾಗಿರುವ ವಾರಾಣಸಿಯಿಂದಲೂ ಕಟ್ರಾಗೆ ಹೊಸ ರೈಲು ಸೇವೆ ಆರಂಭಿಸುವ ಸಾಧ್ಯತೆ ಇದೆ. ಇದಲ್ಲದೆ ವಿವಿಧ ರೈಲ್ವೆ ವಲಯಗಳಿಂದಲೂ ಕಟ್ರಾಗೆ ಸಂಪರ್ಕ ಬೆಸೆಯುವಂತೆ ಕೋರಿಕೆ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಾರ್ಷಿಕ 1 ಕೋಟಿ ಭಕ್ತರು ವೈಷ್ಣೋದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಇದೀಗ ರೈಲು ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಸೂಕ್ಷ್ಮ ನಿಲ್ದಾಣಗಳಲ್ಲಿ ರೈಲ್ವೆ ರಕ್ಷಣಾ ದಳವನ್ನು ನಿಯೋಜನೆ ಮಾಡಲಾಗಿದೆ. ಕಟ್ರಾ ರೈಲು ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರವಾಸಿ ಮಾರ್ಗದರ್ಶಿ ಕೌಂಟರ್, ಲಗೇಜ್ ಕೊಠಡಿ, ನಿರೀಕ್ಷಣಾ ಕೊಠಡಿ, ಎಸ್ಕಲೇಟರ್, ಲಿಫ್ಟ್, ಪಾರ್ಕಿಂಗ್ ತಾಣದ ವ್ಯವಸ್ಥೆ ಮಾಡಲಾಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications