PM Modi France visit: ₹90,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಲು ಭಾರತ ಸಿದ್ಧತೆ- ಪ್ರಮುಖ ಅಂಶಗಳನ್ನು ತಿಳಿಯಿರಿ
ನವದೆಹಲಿ, ಜುಲೈ 12: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 14ರಿಂದ 16ರ ವರೆಗೆ ಫ್ರಾನ್ಸ್ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮೋದಿಯವರ ಫ್ರಾನ್ಸ್ ಭೇಟಿಯು ಹಲವು ಪ್ರಮುಖ ವಿಚಾರಗಳಿಂದ ಮಹತ್ವವನ್ನು ಪಡೆದುಕೊಂಡಿದೆ. ಅಮೆರಿಕ ಭೇಟಿಯ ಎರಡು ವಾರಗಳ ನಂತರದ ಭೇಟಿಯು ತೀವ್ರ ಕುತೂಹಲ ಕೆರಳಿಸಿದೆ. ಅಲ್ಲಿ ಅವರಿಗೆ ವಾಷಿಂಗ್ಟನ್ನಲ್ಲಿ ಶ್ವೇತಭವನದ ರಾಜ್ಯ ಭೋಜನದ ಗೌರವವನ್ನು ನೀಡಲಾಯಿತು.
ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಶಸ್ತ್ರಾಸ್ತ್ರ ಒಪ್ಪಂದಗಳು, ಸೆಮಿಕಂಡಕ್ಟರ್ ಹೂಡಿಕೆ ಮತ್ತು ಬಾಹ್ಯಾಕಾಶ ಸಹಕಾರದ ಬಗ್ಗೆ ಸುದೀರ್ಘವಾದ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಮೋದಿಯವರ ಫ್ರಾನ್ಸ್ ಪ್ರವಾಸ: ಹತ್ತು ಪ್ರಮುಖ ಅಂಶಗಳು
1- ಈ ಭೇಟಿಯ ಪ್ರಮುಖ ಅಂಶವೆಂದರೆ, 26 ರಫೇಲ್ ಎಂ ವಿಮಾನಗಳು ಮತ್ತು ಮೂರು ಹೆಚ್ಚುವರಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ₹90,000 ಕೋಟಿಗಳ ಒಪ್ಪಂದ ಮಾಡಿಕೊಳ್ಳುವುದು.
2- ಈ ಒಪ್ಪಂದದಲ್ಲಿ 26 ರಫೇಲ್ ಎಂ ವಿಮಾನಗಳು ಸೇರಿದಂತೆ 22 ಸಿಂಗಲ್ ಸ್ವೆಟರ್ಗಳು ಮತ್ತು ನಾಲ್ಕು ಡಬಲ್ ಸ್ವೆಟರ್ ಟ್ರೈನರ್ ಆವೃತ್ತಿಗಳು ಸೇರಿವೆ.
3- ರಕ್ಷಣಾ ಸಚಿವಾಲಯದ ಪ್ರಾಜೆಕ್ಟ್ 75 ರ ಅಡಿಯಲ್ಲಿ ಮೂರು ಹೆಚ್ಚುವರಿ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಭಾರತೀಯ ನೌಕಾಪಡೆಗೆ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಸ್ಕಾರ್ಪೀನ್ ಒಪ್ಪಂದದ ಒಂದು ಭಾಗವಾಗಿದೆ.

4- ಮುಂದಿನ ಕೆಲವು ದಿನಗಳಲ್ಲಿ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಮುಂದೆ ಒಪ್ಪಂದಗಳನ್ನು ಇರಿಸಲಾಗುತ್ತದೆ.
5- ಬಹುಕೋಟಿ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಇದನ್ನು ಪ್ರಧಾನಿಯವರ ಮುಂಬರುವ ಭೇಟಿಯ ಸಮಯದಲ್ಲಿ ಘೋಷಿಸಲಾಗುವುದು ಎಂದು ತಿಳಿದುಬಂದಿದೆ.
6- ಫ್ರಾನ್ಸ್ನಲ್ಲಿ ನಡೆಯಲಿರುವ ಬಾಸ್ಟಿಲ್ ಡೇ ಆಚರಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಗೌರವ ಅತಿಥಿಯಾಗಿ ಆಹ್ವಾನಿಸಲಿದ್ದಾರೆ. ಬಾಸ್ಟಿಲ್ ಡೇ ಮಿಲಿಟರಿ ಪರೇಡ್ನಲ್ಲಿ ಭಾರತೀಯ ಸೈನಿಕರು ಸಹ ಸೇರಿಕೊಳ್ಳಲಿದ್ದಾರೆ.

7- ಡಾ ಮನಮೋಹನ್ ಸಿಂಗ್ ನಂತರ ಬಾಸ್ಟಿಲ್ ಡೇ ಪರೇಡ್ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಪಡೆಯುವ ಎರಡನೇ ಭಾರತೀಯ ಪ್ರಧಾನಿ ಮೋದಿ ಆಗಲಿದ್ದಾರೆ.
8- ಪೆಸಿಫಿಕ್ ಪ್ರದೇಶದಲ್ಲಿ ಬಲಶಾಲಿ ಆಗುತ್ತಿರುವ ಚೀನಾದ ಅಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ.
9- ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 10.7 ಬಿಲಿಯನ್ ಯೂರೊ ಆಗಿದೆ. ಭಾರತದಲ್ಲಿ 1,000 ಕ್ಕೂ ಹೆಚ್ಚು ಫ್ರೆಂಚ್ ಕಂಪನಿಗಳು ಒಟ್ಟು 20 ಬಿಲಿಯನ್ ಯೂರೊ ವಹಿವಾಟು ಹೊಂದಿವೆ.
10- 210 ಭಾರತೀಯ ಕಂಪನಿಗಳು ಫ್ರಾನ್ಸ್ನಲ್ಲಿ 1 ಬಿಲಿಯನ್ ಯೂರೊ ಹೂಡಿಕೆ ಕಾರ್ಯನಿರ್ವಹಿಸುತ್ತಿವೆ.
-
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ ಆರೋಪ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕೇಂದ್ರದ ಕಿಡಿ, ಮೋದಿ ಆಕ್ರೋಶ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ












Click it and Unblock the Notifications