Get Updates
Get notified of breaking news, exclusive insights, and must-see stories!

Sabarimala pilgrimage: ಶಬರಿಮಲೆ ಅಯ್ಯಪ್ಪನ ಭಕ್ತರನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹೊಸ ಆ್ಯಪ್ ಬಿಡುಗಡೆ- ಇದರ ಸೌಲಭ್ಯಗಳೇನು?

ಪತ್ತನಂತಿಟ್ಟ ನವೆಂಬರ್ 17: ಶಬರಿಮಲೆ ಅಯ್ಯಪ್ಪನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಉದ್ದೇಶದಿಂದ ಅಯ್ಯನ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ದಿನ ಮಂಡಲ ಪೂಜೆಗಾಗಿ ಶಬರಿಮಲೆ ಅಯ್ಯಪ್ಪನ ದೇವಸ್ಥಾನದ ಕಡೆಗೆ ನಡಿಗೆಯನ್ನು ಆರಂಭಿಸಲಾಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ಉಪವಾಸ ಆಚರಿಸಲು ಆರಂಭಿಸಿದ್ದಾರೆ. ಅದೇ ರೀತಿ ಮಕರವಿಳಕ್ಕು ಪೂಜೆಗಳು ಕೂಡ ಇಂದು ಆರಂಭವಾಗುತ್ತವೆ. 41 ದಿನಗಳ ಪೂಜೆಗಳ ನಂತರ ಡಿ.27ರಂದು ಮಂಡಲಪೂಜೆ ನಡೆಯಲಿದೆ. ಮುಂದಿನ ವರ್ಷ ಜನವರಿ 15 ರಂದು ಮಕರವಿಳಕ್ಕು ಪೂಜೆ ನಡೆಯಲಿದೆ.

New app launched to protect Ayyappas devotees from wild animals!

ಈ ನಡುವೆ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಶಬರಿಮಲೆಗೆ ಭೇಟೆ ನೀಡುತ್ತಾರೆ. ಕಾಡಿನಲ್ಲಿ ನೆಲೆಗೊಂಡಿರುವ ಅಯ್ಯಪ್ಪನ ದರ್ಶನ ಪಡೆದು ಪುನೀತರಾಗಲು ಭಕ್ತ ಸಾಗರವೇ ಹರಿದು ಬರುತ್ತದೆ. ಇತ್ತೀಚೆಗೆ ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಪ್ರಾಣಿಗಳು ಜನರಲ್ಲಿ ಭೀತಿಯನ್ನು ಹುಟ್ಟಿಸಿವೆ. ಹೀಗಿರುವಾಗ ಶಬರಿಮಲೆಗೆ ತೆರಳುವ ಭಕ್ತರಲ್ಲೂ ಈ ಭಯ ಕಾಡತೊಡಗಿದೆ. ಹೀಗಾಗಿ ಈ ಭಯವನ್ನು ಕಡಿಮೆ ಮಾಡಲು ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ ಹೊಸ ಆನ್‌ಲೈನ್ ಸೆಲ್ ಫೋನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್ ಕಾಡು ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಭಕ್ತರಿಗೆ ಸಹಾಯ ಮಾಡುತ್ತದೆ.

New app launched to protect Ayyappas devotees from wild animals!

ಅಯ್ಯನ್ ಆ್ಯಪ್ ಮೂಲಕ ಕಾಡಿನಲ್ಲಿ ಪ್ರಾಣಿಗಳ ಚಲನವಲನವಿದೆಯೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬಹುದು. ಅಲ್ಲದೆ ಭಕ್ತರು ಈ ಆ್ಯಪ್ ಮೂಲಕ ವೈದ್ಯಕೀಯ ಸೌಲಭ್ಯಗಳು, ಕುಡಿಯುವ ನೀರಿನ ಸೌಲಭ್ಯಗಳು, ವಸತಿ ಸೌಲಭ್ಯಗಳು ಲಭ್ಯವಿರುವ ಸ್ಥಳಗಳ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು. ಮಾತ್ರವಲ್ಲದೆ ಇದರಲ್ಲಿ ಪೂಜಾ ಸಮಯಗಳು, ಇತ್ತೀಚಿನ ಸುದ್ದಿಗಳು ಸೇರಿದಂತೆ ವಿವರಗಳನ್ನು ಒದಗಿಸಲಾಗುತ್ತದೆ.

ಇದರೊಂದಿಗೆ ಭಕ್ತರ ಸುರಕ್ಷತೆಗಾಗಿ ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನೂ ನೇಮಿಸಲಾಗಿದೆ. ಅಯ್ಯಪ್ಪನ ದರ್ಶನ ಪಡೆಯಲು ಪ್ರತಿ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ.

ಭಕ್ತರಿಗಾಗಿ ಆರೋಗ್ಯ, ಆಹಾರ ಸುರಕ್ಷತೆ, ಮೋಟಾರು ವಾಹನ, ಕೇರಳ ಜಲ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಯಾತ್ರೆ ಸುಗಮವಾಗಿ ನಡೆಯಲು ವ್ಯವಸ್ಥೆ ಕಲ್ಪಿಸಿವೆ ಎಂದು ಟಿಡಿಬಿ ತಿಳಿಸಿದೆ. ಅಲ್ಲದೆ ಆರೋಗ್ಯ ಇಲಾಖೆಯು ಭಕ್ತರಿಗಾಗಿ ಶಬರಿಮಲೆಯಲ್ಲಿ ಮೂರು ಹೊಸ ಆಸ್ಪತ್ರೆಗಳು ಮತ್ತು ಎರಡು ಹೃದ್ರೋಗ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿಗಳು ಸ್ಥಳೀಯ ತಿನಿಸುಗಳಿಂದ ಭಕ್ತರು ಸುಲಿಗೆ ಮಾಡುವುದನ್ನು ತಡೆಯಲು ಆಹಾರ ಪದಾರ್ಥಗಳ ಬೆಲೆ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಗೃಹ ಇಲಾಖೆ ಆರು ಹಂತಗಳಲ್ಲಿ 13,000 ಸಿಬ್ಬಂದಿಯನ್ನು ನಿಯೋಜಿಸಲಿದೆ. ಸನ್ನಿಧಾನಂ, ನಿಲಕ್ಕಲ್ ಮತ್ತು ವಡಸ್ಸೆರಿಕ್ಕರದಲ್ಲಿ ಮೂರು ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಕಣ್ಗಾವಲುಗಾಗಿ ಡ್ರೋನ್‌ಗಳನ್ನು ಬಳಸಲಾಗುವುದು.

ಕಾರ್ತಿಕ ಮಾಸದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯನ ದರ್ಶನಕ್ಕೆ ತೆರಳುತ್ತಾರೆ. ಇಂದು ಕಾರ್ತಿಕ 1ನೇ ದಿನವಾಗಿರುವುದರಿಂದ ಮುಂಜಾನೆ 3.30ಕ್ಕೆ ಅಯ್ಯನಿಗೆ ತುಪ್ಪದ ಅಭಿಷೇಕ ಮಾಡಲಾಯಿತು. ಬಳಿಕ ದೇವಸ್ಥಾನದಲ್ಲಿ ಮಹಾದೀಪ ಬೆಳಗಿಸಿ ಮಂಡಲಪೂಜೆಗೆ ಚಾಲನೆ ನೀಡಲಾಯಿತು.

ಇಂದಿನಿಂದ ಪ್ರತಿದಿನ ಮುಂಜಾನೆ 3.15 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತುಪ್ಪದ ಅಭಿಷೇಕ ನಡೆಯಲಿದೆ. ತಿರುವಾಂಕೂರು ರಾಜನು ಅಯ್ಯಪ್ಪನಿಗೆ ಮಂಡಲ ಪೂಜೆಗಾಗಿ 420 ಸವರನ್ ತೂಕದ ಚಿನ್ನದ ನಿಲುವಂಗಿಯನ್ನು ನೀಡುತ್ತಾರೆ. ಇದನ್ನು ಮಂಡಲ ಪೂಜೆಯ ಸಮಯದಲ್ಲಿ ಧರಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+