600 ಕಾರುಗಳೊಂದಿಗೆ ಮಹಾರಾಷ್ಟ್ರಕ್ಕೆ ಕೆಸಿಆರ್ ಎಂಟ್ರಿ, ಶಕ್ತಿ ಪ್ರದರ್ಶನದಂತೆ ಕಂಡ ಬೆಳವಣಿಗೆ
ಹೈದರಾಬಾದ್, ಜೂನ್ 27: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಎರಡು ದಿನಗಳ ಪಂಢರಪುರ ಯಾತ್ರೆ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿದೆ.
ಮಹಾರಾಷ್ಟ್ರಕ್ಕೆ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕರೂ ಆಗಿರುವ ಚಂದ್ರಶೇಖರ್ ರಾವ್ ಅವರ ಭೇಟಿಯ ಹಿಂದಿನ ಉದ್ದೇಶವನ್ನು ಮಹಾ ವಿಕಾಸ್ ಅಘಾಡಿ (ಎಂವಿಎ) ಪಕ್ಷಗಳು ಪ್ರಶ್ನಿಸಿದ ಕೆಲವು ದಿನಗಳ ನಂತರ ಅವರು ಮಹಾರಾಷ್ಟ್ರಕ್ಕೆ ತಮ್ಮ ತನ್ನ ಹಲವಾರು ಮಂತ್ರಿಗಳು, BRS ಶಾಸಕರು ಮತ್ತು BRS ಪದಾಧಿಕಾರಿಗಳ ಪಡೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಕ್ಕೆ ಪ್ರಬಲ ಹೊಡೆತದಂತೆ ಕಂಡು ಬಂದಿತು.

ಬಿಆರ್ಎಸ್ ವಕ್ತಾರರು, "ಪಂಢರಪುರದಲ್ಲಿ ರಾತ್ರಿ ತಂಗಿದ ಕೆಸಿಆರ್ ಮತ್ತು ಅವರ ತಂಡ ಭಗವಾನ್ ವಿಠ್ಠಲ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಸಿಎಂ ವಾರ್ಷಿಕ ಪಂಢರಪುರ ಯಾತ್ರೆಯ ಭಾಗವಾಗಲು ಬಯಸಿದ್ದು, ಅವರು ದಾರಿಯುದ್ದಕ್ಕೂ ಜನರನ್ನು ಭೇಟಿಯಾಗುತ್ತಾರೆ" ಎಂದು ಹೇಳಿದ್ದಾರೆ. ಸೋಮವಾರ ಮಹಾರಾಷ್ಟ್ರಕ್ಕೆ ಹೋಗುವ ಮಾರ್ಗದಲ್ಲಿ ಕೆಸಿಆರ್ ಅವರು ಸ್ಥಳೀಯರೊಂದಿಗೆ ಸಂವಾದ ನಡೆಸಲು ಮತ್ತು ಊಟ ಮಾಡಲು ಧಾರಶಿವ್ ಜಿಲ್ಲೆಯ ಒಮೆರ್ಗಾ ಗ್ರಾಮದ ಬಳಿ ನಿಲ್ಲಿಸಿದರು. ಸಂಜೆ ಸೊಲ್ಲಾಪುರದಲ್ಲಿ ಸ್ಥಳೀಯ ಮುಖಂಡರನ್ನು ಬಿಆರ್ಎಸ್ಗೆ ಸ್ವಾಗತಿಸಿದರು.
#WATCH | Telangana CM and BRS chief K Chandrashekar Rao along with cabinet ministers and party leaders on his way to Solapur, Maharashtra.
— ANI (@ANI) June 26, 2023
CM KCR left from Hyderabad to Solapur, earlier today.
(Source: BRS) pic.twitter.com/DSxbM9FQsb
ಹೈದರಾಬಾದ್-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 65 ತಲುಪುವ ವೇಳೆಗೆ ಬೆಂಗಾವಲು ಪಡೆ ಸುಮಾರು 6 ಕಿಮೀ ಉದ್ದವಿತ್ತು ಎಂದು ಬಿಆರ್ಎಸ್ ಮೂಲಗಳು ಹೇಳಿವೆ. ಈ ಸಮಯದಲ್ಲಿ ವಿಠಲ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಗಳ ಮೇಲೆ ಗುಲಾಬಿ ದಳಗಳ ಮಳೆಗರೆಯುವುದಕ್ಕೆ BRS ಅನುಮತಿ ಕೋರಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ಇದಕ್ಕೆ ಅನುಮತಿ ನಿರಾಕರಿಸಿ ಸಿಎಂ ಏಕನಾಥ್ ಶಿಂಧೆ ಅವರು ದೇವಾಲಯಕ್ಕೆ ಭೇಟಿ ನೀಡಿದ ಕೆಸಿಆರ್ ಅವರನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

"ಪಂಢರಪುರ ದೇವಾಲಯದ ಬಾಗಿಲು ಎಲ್ಲರಿಗೂ ತೆರೆದಿರುತ್ತದೆ... ವಿಠ್ಠಲನನ್ನು ಪೂಜಿಸುವುದನ್ನು ಯಾರಾದರೂ ಹೇಗೆ ತಡೆಯಬಹುದು?" ಅವರು ಹೇಳಿದರು. ಇನ್ನು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಯಾರಾದರೂ ಯಾತ್ರೆಯಲ್ಲಿ ಭಾಗವಹಿಸಲು ಬಂದರೆ ನಾವು ಸ್ವಾಗತಿಸುತ್ತೇವೆ. (ಆದರೆ) ಅವರು ರಾಜಕೀಯವನ್ನು ದೂರವಿಡಬೇಕು ಎಂದರು.
'ಅಬ್ಕಿ ಬಾರ್ ಕಿಸಾನ್ ಸರ್ಕಾರ್' ಘೋಷಣೆಯೊಂದಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಆಚೆಗೆ ಬಿಆರ್ಎಸ್ ಪಕ್ಷವನ್ನು ವಿಸ್ತರಿಸಲು ಕೆಸಿಆರ್ ಅವರ ಯೋಜನೆಯ ಪಂಢರಪುರದ ಭೇಟಿ ಉದ್ದೇಶವನ್ನು ನೋಡಲಾಗುತ್ತದೆ. BRS ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಪ್ರದೇಶದಲ್ಲಿ ಯಾತ್ರೆಗಳನ್ನು ನಡೆಸಿದೆ. ಅಲ್ಲದೆ ಆರ್ಎಸ್ಎಸ್ ಪ್ರಧಾನ ಕಚೇರಿಯನ್ನು ಹೊಂದಿರುವ ನಗರವಾದ ನಾಗಪುರದಲ್ಲಿ ಕಚೇರಿಯನ್ನು ಸ್ಥಾಪಿಸಿದೆ, ಪುಣೆ, ಔರಂಗಾಬಾದ್ ಮತ್ತು ಮುಂಬೈನಲ್ಲಿ ಕಚೇರಿ ತೆರೆಯಲು ಯೋಜಿಸಲಾಗಿದೆ.
ಕೆಸಿಆರ್ ರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮುವ ಪ್ರಯತ್ನದ ಭಾಗವಾಗಿ ಇದನ್ನು ಮೊದಲು ನೋಡಲಾಗಿದ್ದರೂ, ಬಿಆರ್ಎಸ್ನ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ನ ಕರ್ನಾಟಕ ವಿಜಯದ ನಂತರ ಅವರು ತಮ್ಮ ಯೋಜನೆಗಳನ್ನು ಬದಲಾಯಿಸಿದ್ದಾರೆಂದು ತೋರುತ್ತದೆ ಮತ್ತು ಸದ್ಯಕ್ಕೆ ಅವರು ಮನೆಯತ್ತ ಗಮನ ಹರಿಸುವುದಾಗಿ ಘೋಷಿಸಿದ್ದಾರೆ.
ಆದರೆ ಈ ನಡೆ ಕೆಸಿಆರ್ ಬಿಜೆಪಿಯ ಬಿ ಟೀಮ್ ಎಂದು ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಕಾರಣವಾಗಿದೆ. ಎನ್ಸಿಪಿಯ ಹಿರಿಯ ನಾಯಕರೊಬ್ಬರು, "ಬಿಆರ್ಎಸ್ನ ರಾಜಕೀಯವು ಎಂವಿಎ ಮತಬ್ಯಾಂಕ್ ಅನ್ನು ಕಸಿಯಲು ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಭವಿಷ್ಯವನ್ನು ಹೆಚ್ಚಿಸಲು ತೋರುತ್ತಿದೆ " ಎಂದಿದ್ದಾರೆ.
ಇದನ್ನು ಅಲ್ಲಗಳೆದಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ, ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಮೈತ್ರಿ ಪಾಲುದಾರರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ (ಮುಂದಿನ ವರ್ಷ) ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications