ವೃಂದಾವನದಲ್ಲಿ ಹಣದ ಮಳೆ, ಮೂಕವಿಸ್ಮಿತರಾದ ಭಕ್ತರು!
ವೃಂದಾವನ(ಉತ್ತರಪ್ರದೇಶ), ಜುಲೈ,21 : ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಇರುತ್ತಾ? ಮಂಗನ ರೀತಿ ಆಡ್ಬೇಡಾ...ಅಂತ ಮಂಗಗಳನ್ನ ನೆಪಮಾಡಿಕೊಂಡು ನಾವು ಯಾರಿಗಾದರೂ ಬೈದೇ ಇರ್ತೇವೆ. ಮಂಗ ಯಾವಾಗಲೂ ಹುಡುಗಾಟ, ತರ್ಲೆ ಮಾಡ್ತಾ ದೇವಾಲಯದಲ್ಲೋ, ದಾರಿಯಲ್ಲೋ ನಾನಾ ಅವಾಂತರಗಳನ್ನು ಸೃಷ್ಟಿಸಿ ಜನರಿಗೆ ದಿಗಿಲು ಹುಟ್ಟಿಸಿರುತ್ತೆ.
ಮಂಗ ಮತ್ತೆ ಏನು ಮಾಡ್ತು ಅಂತಾ ಕೇಳ್ತಿದ್ದೀರಾ? ಮಂಗನ ತರಲೆ ಅವಾಂತರದಿಂದ ವೃಂದಾವನ ಬಳಿಯ ಬಾಂಕೆ ಬಿಹಾರಿ ದೇವಾಲಯದಲ್ಲಿ ಶನಿವಾರ ಮುಂಗಾರು ಮಳೆ ಬದಲು 500ರೂ ನೋಟುಗಳ ಮಳೆ ಸುರಿಯಿತು. ಕ್ಷಣಕಾಲ ಆಶ್ಚರ್ಯಚಕಿತರಾಗಿ, ಮೂಕವಿಸ್ಮಿತರಾಗಿ ನಿಂತಿದ್ದ ಭಕ್ತಾದಿಗಳು ಬಳಿಕ ಬಿದ್ದ ಹಣವನ್ನು ಆರಿಸಿಕೊಳ್ಳತೊಡಗಿದರು.[ನಾಯಿ, ಮಂಗ ಕಚ್ಚಿದರೆ ಎರಡು ಲಕ್ಷ ಪರಿಹಾರ ಸಿಗುತ್ತೆ!]

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ ಇದೇ ಅಲ್ವ? ಹ್ಞೂ...ಹೌದು ರೀ..ಹೇಮಾವತಿ ಸೋನ್ಕರ್ ಎಂಬ 50 ವರ್ಷದ ಮಹಿಳೆ ಮತ್ತು ಕುಟುಂಬದವರು ಆಗ್ರಾ, ಮಥುರಾ ವೃಂದಾವನಕ್ಕೆ ಪ್ರವಾಸದ ನಿಮಿತ್ತ ಆಗಮಿಸಿದ್ದರು. ಆಕೆ ವೃಂದಾವನದ ಬಾಂಕೆ ಬಿಹಾರಿ ದೇವಾಲಯಕ್ಕೆ ಬರುವಾಗ 1.5ಲಕ್ಷ ಹಣವನ್ನು ತಮ್ಮ ಜೊತೆ ತಂದಿದ್ದರು.
ಮಹಿಳೆ ಮೇಲೆ ಗಕ್ಕನೆ ಜಿಗಿದ ಮಂಗ ಬ್ಯಾಗ್ ಕಿತ್ತು ಕೊಂಡು ಕ್ಷಣಾರ್ಧದಲ್ಲಿ ಮರ ಏರಿತು. ಬಳಿಕ ನೋಡು ನೋಡುತ್ತಲೇ ಬ್ಯಾಗಿನಲ್ಲಿದ್ದ 500ರೂ ನೋಟುಗಳನ್ನು ಮರದ ಮೇಲಿಂದ ಎಸೆಯಲಾರಂಭಿಸಿತು. ಎಲ್ಲಾ ಪ್ರದೇಶಗಳ ವೀಕ್ಷಣೆ ಬಳಿಕ ವೃಂದಾವನ ಬಿಹಾರಿ ದೇವಾಲಯಕ್ಕೆ ತೆರಳಿ ಜುಲೈ 19 ಭಾನುವಾರ ನವದೆಹಲಿಯಿಂದ ಮುಂಬೈ ತಲುಪುವ ಯೋಜನೆ ಹಾಕಿಕೊಂಡಿದ್ದರು.[ಕೋಲಾರದಲ್ಲಿ ಸತ್ತ ಕೋತಿಗಳಿಗಾಗಿ ದೇವಾಲಯ ನಿರ್ಮಾಣ]
ವೃಂದಾವನ ಸುತ್ತಮುತ್ತ ಪ್ರದೇಶಗಳಾದ ಗೋಕುಲ, ಬರ್ಸಾನ್, ಗೋವರ್ಧನ್ ಮತ್ತು ರಾಧಾ ಕುಂಧ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಂಗಗಳಿದ್ದು, ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಭಕ್ತಾಧಿಗಳು ದೂರಿದ್ದಾರೆ. ಹಾಗಾಗಿ ಮಥುರಾ ಪ್ರದೇಶದ ಎಂಪಿ ಹೇಮಾಮಾಲಿನಿ ಮಂಗಗಳ ಸಂತತಿ ಹರಣ ಚಿಕಿತ್ಸೆ ಬಗ್ಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬಾಂಕೆ ಬಿಹಾರಿ ದೇವಾಲಯ ಎಲ್ಲಿದೆ?
ಇದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿನ ವೃಂದಾವನ ಎಂಬ ಪ್ರದೇಶದಲ್ಲಿದೆ. ಇದನ್ನು ಸ್ವಾಮಿ ಹರಿದಾಸರು 1862 ರಲ್ಲಿ ತಮ್ಮ ಗುರು ಥಾನ್ ಸೇನ್ ಅವರ ನೆನಪಿಗಾಗಿ ನಿರ್ಮಿಸಿದ್ದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications