ವಿಕ್ರಮನ ಚಿತ್ರ ಕಳಿಸಿದ ನಾಸಾಕ್ಕೆ ಚುರುಕು ಮುಟ್ಟಿಸಿದ ಇಸ್ರೋ ಅಧ್ಯಕ್ಷ!
ಜೈಪುರ್, ಡಿಸೆಂಬರ್ 4; ಮೂರು ತಿಂಗಳಿನ ಹಿಂದೆ ಪತನಗೊಂಡಿದ್ದ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ರ ವಿಕ್ರಮ್ ಲ್ಯಾಂಡರ್ ಪತ್ತೆಹಚ್ಚಿರುವ ವಿಷಯದಲ್ಲಿ ಭಾರತದ ಇಸ್ರೋ ಹಾಗೂ ಅಮೆರಿಕದ ನಾಸಾ ದ ನಡುವೆ ಮುಜುಗರ ಉಂಟಾಗುವ ಸನ್ನಿವೇಶ ಎದುರಾಗಿದೆ.
ನಿನ್ನೆಯಷ್ಟೇ ನಾಸಾದ ವಿಜ್ಞಾನಿಯೊಬ್ಬರು, ಲ್ಯಾಂಡಿಂಗ್ ಸಮಯದಲ್ಲಿ ಚಂದ್ರನ ದಕ್ಷಿಣ ತುದಿಯಲ್ಲಿ ಸಂಪರ್ಕ ಕಳೆದುಕೊಂಡು ಪತನಗೊಂಡಿದ್ದ ವಿಕ್ರಮ್ ಲ್ಯಾಂಡರ್ ನ್ನು ಭಾರತದ ಟೆಕ್ಕಿಯೊಬ್ಬ ಸಹಾಯದಿಂದ ಸ್ಪಷ್ಟವಾಗಿ ಗುರುತಿಸಲಾಯಿತು ಎಂದು ಹೇಳಿದ್ದು, ಭಾರತದಲ್ಲಿ ಸಂಚಲನವನ್ನುಂಟು ಮಾಡಿತ್ತು. ಈ ಬಗ್ಗೆ ಇಂದು ರಾಜ್ತಸಾನದ ಕಿಶನಗರ್ ನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್, ನಾಸಾ ವಿಕ್ರಮ್ ಲ್ಯಾಂಡರ್ ನ್ನು ಗುರುತಿಸುವ ಮೊದಲು, ನಮ್ಮದೇ ಲುನಾರ್ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳವನ್ನು ಸ್ಪಷ್ಟವಾಗಿ ಗುರುತಿಸಿದೆ. ಇದನ್ನು ಬೇಕಾದರೆ ಇಸ್ರೋ ವೆಬ್ಸೈಟಿನಲ್ಲಿ ನೋಡಬಹುದು. ಚೆನ್ನೈ ಟೆಕ್ಕಿಯೊಬ್ಬರು ವಿಕ್ರಮ್ ಲ್ಯಾಂಡರ್ ಗುರುತಿಸಲು ಅದೇಗೆ ನಾಸಾಗೆ ಸಹಾಯ ಮಾಡಿದರೋ? ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ನಾಸಾದ ವಿಜ್ಞಾನಿಗಳು, ವಿಕ್ರಮ್ ಲ್ಯಾಂಡರ್ ಬಿದ್ದ ನಿಖರ ಸ್ಥಳ ಸಂಶೋಧನೆ ಬಗ್ಗೆ ಗೊಂದಲವುಂಟಾದಾಗ ಚೈನ್ನೈ ನ ಮೆಕಾನಿಕಲ್ ಇಂಜನಿಯರ್ ಷಣ್ಗುಗ ಸುಬ್ರಮಣಿಯನ್ ಅವರು ಕಳಿಸಿದ ಫೋಟೊ ವಿಶ್ಲೇಷಣೆಗಳು ಸ್ಥಳ ನಿಖರತೆಯನ್ನು ಕಂಡು ಹಿಡಿಯಲು ಸಹಾಯವಾಯಿತು ಎಂದು ಹೇಳಿದ್ದರು. ಇದು ಭಾರತದಲ್ಲಿ ಸಂಚಲವನ್ನುಂಟು ಮಾಡಿತ್ತು. ಇದೀಗ ಕೆ.ಶಿವನ್ ಅವರ ಹೇಳಿಕೆ ನಾಸಾಕ್ಕೆ ಮುಕುಗರವನ್ನುಂಟು ಮಾಡಿದೆ.
ಚಂದ್ರನ ದಕ್ಷಿಣ ದ್ರುವದ ಅಧ್ಯಯನಕ್ಕೆ ಭಾರತ ಚಂದ್ರಯಾನ 2 ನ್ನು ಕಳೆದ ಜುಲೈ 22 ರಂದು ಕೈಗೊಂಡಿತ್ತು. ಲುನಾರ್ ಆರ್ಬಿಟರ್ ನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದ ಇಸ್ರೋ, ವಿಕ್ರಮ್ ಲ್ಯಾಂಡರ್ನ್ನು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಸುವಲ್ಲಿ ವಿಫಲವಾಗಿತ್ತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications