ಫೆ.19ಕ್ಕೆ ಶಿವರಾತ್ರಿ ನವ ಜೋತಿರ್ಲಿಂಗ ವಿಶೇಷ ಎಕ್ಸ್ ಪ್ರೆಸ್
ಚೆನ್ನೈ, ಜನವರಿ 08: ರಾಮಾಯಣ ಕಾಲದ ಪುರಾಣ ಪ್ರಸಿದ್ಧ ನಗರಗಳನ್ನು ಸಂಪರ್ಕಿಸುವ, ಶ್ರೀರಾಮಚಂದ್ರ ಸಾಗಿದ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲು ರಾಮಾಯಣ ಎಕ್ಸ್ ಪ್ರೆಸ್ ಸಂಚಾರಕ್ಕೆ ಚಾಲನೆ ನೀಡಿದ ಭಾರತೀಯ ರೈಲ್ವೆ ಈಗ ಮಹಾಶಿವರಾತ್ರಿಗಾಗಿ ವಿಶೇಷ ಎರಡು ರೈಲುಗಳನ್ನು ಪರಿಚಯಿಸುತ್ತಿದೆ.
ಎರಡು ಭಾರತ್ ದರ್ಶನ್ ವಿಶೇಷ ಪ್ರವಾಸಿ ರೈಲುಗಳು ತಿರುನೆಲ್ವೇಲಿಯಿಂದ ಚಲಿಸಲಿದೆ ಎಂದು ಐಆರ್ ಸಿಟಿಸಿ ಪ್ರಕಟಿಸಿದೆ. ಈ ಜೋತಿರ್ ಲಿಂಗ ವಿಶೇಷ ರೈಲು ಪ್ರಯಾಣದ ದರ 15,320 ರು ಪ್ರತಿ ವ್ಯಕ್ತಿಗೆ ಹಾಗೂ ರಾಮಾಯಣ ಯಾತ್ರಾ 15, 990ರು ವೆಚ್ಚವಾಗಲಿದೆ.
13 ದಿನಗಳ ಕಾಲ ಮಹಾಶಿವರಾತ್ರಿ ನವ ಜ್ಯೋತಿರ್ ಲಿಂಗ ವಿಶೇಷ ಎಕ್ಸ್ ಪ್ರೆಸ್ ಫೆಬ್ರವರಿ 19 ರಂದು ತಿರುನಲ್ವೇಲಿಯಿಂದ ಹೊರಡಲಿದೆ. 14 ದಿನಗಳ ರಾಮಾಯಣ ಯಾತ್ರಾ ವಿಶೇಷ ಎಕ್ಸ್ ಪ್ರೆಸ್ ಮಾರ್ಚ್ 05ರಂದು ಹೊರಡಲಿದೆ ಎಂದು ಐಆರ್ ಸಿಟಿಸಿ ದಕ್ಷಿಣ ವಲಯದ ಜಂಟಿ ಪ್ರಧಾನ ವ್ಯವಸ್ಥಾಪಕ ಪಿ ಸ್ಯಾಮ್ ಜೋಸೆಫ್ ಹೇಳಿದರು.

ರಾಮಾಯಣ ಯಾತ್ರೆ: ಮಧುರೈ, ಹಂಪಿ, ನಾಸಿಕ್, ಚಿತ್ರಕೂಟ ಧಮ್, ದರ್ಭಾಂಗ, ಸಿತಾಮರ್ಹಿ, ಜನಕ್ ಪುರಿ(ನೇಪಾಳ), ಅಯೋಧ್ಯಾ, ನಂದಿಗ್ರಾಮ, ಅಲಹಾಬಾದ್, ಶ್ರೀಂಗವೆರ್ ಪುರ್, ರಾಮೇಶ್ವರಂ, ದೇವಿಪಟ್ಟಣಂ, ತಿರುಪಳನಿ. ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣ, ತಮಿಳುನಾಡಿನ ಮಧುರೈನಿಂದ ಏಕಕಾಲಕ್ಕೆ ಚಾಲನೆ ಸಿಗಲಿದೆ.
ಶ್ರೀ ರಾಮಾಯಣ ಯಾತ್ರಾ-ಶ್ರೀಲಂಕಾ ಯಾತ್ರೆ ವಿಶೇಷ ರೈಲಿನಲ್ಲಿ 800 ಮಂದಿ ಸಂಚರಿಸಬಹುದು. ದೆಹಲಿಯಿಂದ ಹೊರಟ ರೈಲು ಅಯೋಧ್ಯದಲ್ಲಿ ಮೊದಲಿಗೆ ತಲುಪಲಿದೆ. ಹನುಮನ್ ಗರ್ಹಿ ರಾಮ್ ಕೋಟ್ ಹಾಗೂ ಕನಕ್ ಭವನ್ ದೇಗುಲ ದರ್ಶಿಸಬಹುದು.
ಶ್ರೀಲಂಕಾದಿಂದ ಪ್ರಯಾಣಿಸುವವರಿಗೆ ಪ್ರತ್ಯೇಕ ಶುಲ್ಕ ಟಿಕೆಟ್ ಇರುತ್ತದೆ. ಶ್ರೀಲಂಕಾದಿಂದ ಪ್ರಯಾಣ ಆರಂಭಿಸಲು ಬಯಸುವವರು ಚೆನ್ನೈನಿಂದ ಕೊಲಂಬೋಗೆ ವಿಮಾನದಲ್ಲಿ ಪ್ರಯಾಣಿಸಿ ನಂತರ ರಾಮಾಯಣ ಯಾತ್ರಾ ಪ್ಯಾಕೇಜ್ ಪಡೆಯಬಹುದು.
ಇದಲ್ಲದೆ, ಪ್ರತಿ ಬುಧವಾರ ಶಿರಡಿಗೆ ಚೆನ್ನೈಯಿಂದ ವಿಶೇಷ ರೈಲು ಹೊರಡಲಿದೆ. 1999ರಿಂದ ಆರಂಭವಾದ ಭಾರತ್ ದರ್ಶನ್ ಪ್ರವಾಸಿ ರೈಲುಗಳು ಇಲ್ಲಿ ತನಕ 370 ವಿಶೇಷ ಪ್ಯಾಕೇಜ್ ರೈಲುಗಳನ್ನು ಕಂಡಿದೆ.
-
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ












Click it and Unblock the Notifications