ಆದಾಯ ತೆರಿಗೆ ಮಿತಿ ಏರಿಕೆ: ಮಧ್ಯಮ ವರ್ಗ ಫುಲ್ ಜೋಶ್!
ನವದೆಹಲಿ, ಫೆಬ್ರವರಿ 1: ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್ ಮಧ್ಯಮ ವರ್ಗದ ದುಡಿಯುವ ವರ್ಗಕ್ಕೆ ಖುಷಿ ನೀಡಿದೆ.
ದೇಶದ ಬಹುಸಂಖ್ಯೆಯ ಮಧ್ಯಮ ವರ್ಗದ ಜನತೆ ಹಲವು ವರ್ಷಗಳಿಂದ ಬಯಸಿದ್ದ ಆದಾಯ ತೆರಿಗೆ ಮಿತಿಯ ಏರಿಕೆಯ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿಲ್ಲ.
ಆದಾಯ ತೆರಿಗೆ ಪಾವತಿಯ ಮಿತಿಯನ್ನು 2.50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಅಲ್ಲದೆ, ಆದಾಯದ ಮೇಲಿನ ಉಳಿತಾಯದ ಮಿತಿ 1.50 ಲಕ್ಷವೂ ಇದಕ್ಕೆ ಸೇರಿಕೊಳ್ಳುವುದರಿಂದ ಮ್ಯೂಚುವಲ್ ಫಂಡ್, ವಿಮೆ, ಗೃಹಸಾಲ ಮುಂತಾದವುಗಳ ಮಾಹಿತಿ ಒದಗಿಸುವುದರ ಮೂಲಕ ಒಟ್ಟಾರೆ 6.5 ಲಕ್ಷದವರೆಗೂ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.
ಇದು ಸಹಜವಾಗಿಯೇ ಮಧ್ಯಮ ವರ್ಗದ ಜನರಿಗೆ ಸಂತಸ ನೀಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಕೇಂದ್ರದ ಆರ್ಥಿಕ ನೀತಿಗಳನ್ನು ವಿರೋಧಿಸುವ ಅನೇಕರು ಇದಕ್ಕೆ ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ.
| Array |
ಜೋಶ್ ಹೇಗಿದೆ?
ಐದು ಲಕ್ಷದವರೆಗೂ ಆದಾಯ ತೆರಿಗೆ ಸಂಪೂರ್ಣ ವಿನಾಯಿತಿ. ಜೋಶ್ ಹೇಗಿದೆ? ತುಂಬಾ ಜೋರಾಗಿದೆ ಸರ್! ಎಂದು ಸಂದೀಪ್ ಪಾಟೀಲ್ ಎಂಬುವವರು ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿದ್ದ ಜೋಶ್ ಪದವನ್ನು ಬಳಸಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ 'ಮಧ್ಯಮವರ್ಗದವರ ಮಧ್ಯಮವರ್ಗದ ಪ್ರಧಾನಿ' ಎಂದು ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
| Array |
ಬೆಸ್ಟ್ ಬಜೆಟ್
ಐದು ಲಕ್ಷ ಆದಾಯ ತೆರಿಗೆ ವಿನಾಯಿತಿ.
1.5 ಲಕ್ಷ 80 ಕೋಟಿ
50 ಸಾವಿರ ಸ್ಟಾಂಡರ್ಡ್ ಡಿಡಕ್ಷನ್
ಮೂಲತಃ ನೀವು ಏಳು ಲಕ್ಷದವರೆಗೂ ನೀವು ತೆರಿಗೆ ಕಟ್ಟಬೇಕಾಗಿಲ್ಲ. ಗ್ರಾಮೀಣ ಮತ್ತು ನಗರದ ಮತದಾರರ ಪರ ಕಾಳಜಿ ತೋರುವ ಮೋದಿ ಸರ್ಕಾರದ ಈ 2019ರ ಬಜೆಟ್ ಅತ್ಯುತ್ತಮವಾಗಿದೆ ಎಂದು ರಿಷಿ ಬಗ್ರಿ ಎಂಬುವವರು ಟ್ವೀಟ್ ಮಾಡಿದ್ದಾರೆ.
Interim Union Budget 2019 LIVE:5 ಲಕ್ಷದವರೆಗೆ ತೆರಿಗೆ ವಿನಾಯಿತಿ
|
ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ!
ಆದಾಯ ತೆರಿಗೆ ಮಿತಿಯನ್ನು ಇಳಿಸಿದ್ದಕ್ಕೆ ಕಾಂಗ್ರೆಸ್ ಗುಲಾಮರು ನಾವು ಆದಾಯ 2.5 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ 5ರಷ್ಟು ತೆರಿಗೆ ನೀಡಿ ಪ್ರತಿಭಟನೆ ನಡೆಸುತ್ತೇವೆ ಎನ್ನುತ್ತಾರೆ. ಫಾಸಿಸ್ಟ್ ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ಇದು ಅವರ ಮಾರ್ಗವಾಗಿದೆ ಎಂದು ಅಶು ಎಂಬುವವರು ಲೇವಡಿ ಮಾಡಿದ್ದಾರೆ.
|
ಮೊದಲ ಬಾರಿಗೆ ಪರಿಗಣನೆ
ನನ್ನ ಜೀವಿತಾವಧಿಯಲ್ಲಿ ನೆನಪಿರುವಂತೆ ತೆರಿಗೆ ಪಾವತಿಸುವ ಮಧ್ಯಮ ವರ್ಗದವರನ್ನು ಸರ್ಕಾರ ಮೊದಲ ಬಾರಿಗೆ ಪರಿಗಣಿಸಿದೆ. ಬೃಹತ್ ಆದಾಯ ತೆರಿಗೆ ವಿನಾಯಿತಿ ಬಹುದೊಡ್ಡ ನಿರಾಳತೆ ನೀಡಿದೆ. ಅಲ್ಲದೆ, ಮಧ್ಯಮ ವರ್ಗದ ಜನತೆ ನೀಡಿದ ಕೊಡುಗೆಯನ್ನು ವಿವರಿಸುವ ಮಾತುಗಳು ಮನಗಾಣುವಂಥದ್ದು ಎಂದು ಕಾಂಚನ್ ಗುಪ್ತಾ ಎಂಬುವವರು ಶ್ಲಾಘಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications