200 Special trains to Ayodhya: ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ 'ಆಸ್ತಾ ವಿಶೇಷ' ರೈಲು: ಎಲ್ಲೆಲ್ಲಿ? ಸ್ಥಳಗಳ ಮಾಹಿತಿ
ಬೆಂಗಳೂರು, ಫೆಬ್ರವರಿ 11: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರಿರಾಮ ಮಂದಿರ ಪ್ರಾಣಪ್ರತಿಷ್ಠಾಣೆ ಆದ ಬಳಿಕ ಅಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ತೆರಳುತ್ತಿದ್ದಾರೆ. ಇವರಿಗಾಗಿ ರೈಲ್ವೆ ಇಲಾಖೆಯು ಸುಮಾರು 200 ರೈಲುಗಳನ್ನು ಬಿಡಲು ವ್ಯವಸ್ಥೆ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಭಾರತೀಯ ರೈಲ್ವೆಯು ಶ್ರೀರಾಮ ಭಕ್ತರಿಗೆ ಅನುಕೂಲವಾಲೆಂದು ವಿವಿಧ ರಾಜ್ಯಗಳ ಹಲವು ಸ್ಥಳಗಳಿಂದ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡುತ್ತಿದೆ. ಈ ಪೈಕಿ ಇಲಾಖೆಯು ಅಯೋಧ್ಯೆಗೆ 200 ಆಸ್ತಾ ವಿಶೇಷ ರೈಲುಗಳ ಕಾರ್ಯಾಚರಣೆ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದೆ.

ದೇಶಾದ್ಯಂತ ಸುಮಾರು 66 ವಿವಿಧ ಸ್ಥಳಗಳಿಂದ ಅಯೋಧ್ಯೆಗೆ 200 ಆಸ್ತಾ ವಿಶೇಷ ರೈಲುಗಳು ಪ್ರಯಾಣಿಕರನ್ನು ಹೊತ್ತು ತೆರಳಲಿವೆ. ಸದ್ಯ ಅಯೋಧ್ಯೆ ರಾಮಲಲ್ಲಾ ನೋಡಲು ಜನ ತಂಡೋಪತಂಡವಾಗಿ ಹೋಗುತ್ತಿದ್ದು, ಅಯೋಧ್ಯೆ ತುಂಬಿ ತುಳುಕುತ್ತಿದೆ.
100 ದಿನಗಳ ಕಾಲ ಈ ವಿಶೇಷ ರೈಲು ಸೇವೆ ಲಭ್ಯ
ಇದೆಲ್ಲ ಗಮನಿಸಿರುವ ರೈಲ್ವೆ ಇಲಾಖೆಯು ಈ ಆಸ್ತಾ ವಿಶೇಷ ರೈಲುಗಳನ್ನು ಘೋಷಿಸುವ ಮೂಲಕ ಭಕ್ತರ ಪ್ರಯಾಣವನ್ನು ಸುಗಮಗೊಳಿಸಲು ನಿರ್ಧರಿಸಿದೆ. ರಾಮ ಮಂದಿರ ಉದ್ಘಾಟನೆ ಆದ ಜ. 22ರಿಂದ ಒಟ್ಟು 100 ದಿನಗಳ ಕಾಲ ವಿವಿಧ ನಗರಗಳಿಂದ ಆಸ್ತಾ ರೈಲು ಓಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅಯೋಧ್ಯೆಗೆ 'ಆಸ್ತಾ ವಿಶೇಷ' ರೈಲುಗಳು ನವದೆಹಲಿ, ಹಳೆ ದೆಹಲಿ, ಜಮ್ಮು, ನಾಸಿಕ್, ಡೆಹ್ರಾಡೂನ್, ನಿಜಾಮುದ್ದೀನ್, ಹೈದರಾಬಾದ್, ಅಗರ್ತಲಾ, ತಿನ್ಸುಕಿಯಾ, ಬಾರ್ಮರ್, ಕತ್ರಾ, ಭದ್ರಕ್, ಖುರ್ದಾ ರಸ್ತೆ, ಕೊಟ್ಟಾಯಂ, ಸಿಕಂದರಾಬಾದ್ ಮತ್ತು ಕಾಜಿಪೇಟ್ನಿಂದ ಕಾರ್ಯಾಚರಣೆ ಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

'ಆಸ್ತಾ ವಿಶೇಷ ರೈಲು' ಏರಲು ಸಾಧ್ಯವಾಗುವ ಸ್ಥಳ-ರಾಜ್ಯದ ವಿವರ
* ಉತ್ತರ ಭಾರತ: ದೆಹಲಿ, ಜಮ್ಮು, ಹರಿದ್ವಾರ, ಕತ್ರಾ ಮತ್ತು ಋಷಿಕೇಶ
* ಪೂರ್ವ ಭಾರತ: ಕೋಲ್ಕತ್ತಾ, ಪಾಟ್ನಾ, ಗುವಾಹಟಿ ಮತ್ತು ಭುವನೇಶ್ವರ
* ಪಶ್ಚಿಮ ಭಾರತ: ಮುಂಬೈ, ಪುಣೆ, ಉಜ್ಜಯಿನಿ, ಇಂದೋರ್ ಮತ್ತು ಅಹಮದಾಬಾದ್
* ದಕ್ಷಿಣ ಭಾರತ: ಚೆನ್ನೈ, ಬೆಂಗಳೂರು, ಮೈಸೂರು, ಮಧುರೈ ಮತ್ತು ಹೈದರಾಬಾದ್
* ಮಧ್ಯ ಭಾರತ: ನಾಗ್ಪುರ, ಭೋಪಾಲ್, ಶಿರಡಿ ಹಾಗೂ ಜಬಲ್ಪುರ
ಫೆ.9ಕ್ಕೆ ಅಯೋಧ್ಯೆಯತ್ತ ಮೊದಲ 'ಆಸ್ತಾ ರೈಲು' ಪ್ರಯಾಣ
ಇದೇ ಫೆಬ್ರವರಿ 9ರಿಂದ ಬೆಳಗ್ಗೆ 10 ಗಂಟೆಗೆ ಕೇರಳದಿಂದ ಅಯೋಧ್ಯೆಗೆ ಮೊದಲ ಆಸ್ತಾ ವಿಶೇಷ ರೈಲು ಸಂಚಾರವು ಕೊಚುವೇಲಿ ರೈಲು ನಿಲ್ದಾಣದಿಂದ ತೆರಳಿದೆ. ಇದೇ ತಿಂಗಳ ಫೆಬ್ರವರಿಯಲ್ಲಿ ಪಂಜಾಬ್ನಿಂದ ನಾಲ್ಕು ವಿಶೇಷ ಆಸ್ತಾ ರೈಲುಗಳು ಭಕ್ತರನ್ನು ಅಯೋಧ್ಯೆಗೆ ಕರೆದೊಯ್ಯಲಿವೆ.
ಪಠಾಣ್ಕೋಟ್ ಮತ್ತು ಅಯೋಧ್ಯೆ ನಡುವೆ ಎರಡು ವಿಶೇಷ ರೈಲುಗಳು ಮತ್ತು ಚಂಡೀಗಢ ಮತ್ತು ನಂಗಲ್ ಡ್ಯಾಮ್ನಿಂದ ತಲಾ ಒಂದು ರೈಲುಗಳು ಕಾರ್ಯ ನಿರ್ವಹಿಸಲಿವೆ. ಮೊದಲ ಆಸ್ತಾ ವಿಶೇಷ ರೈಲು ಫೆಬ್ರವರಿ 9 ರಂದು ಬೆಳಗ್ಗೆ 7:05 ಕ್ಕೆ ಪಠಾಣ್ಕೋಟ್ನಿಂದ ತನ್ನ ಮೊದಲ ಪ್ರಯಾಣ ಆರಂಭಿಸಿತು ಎಂದು ರೈಲ್ವೆ ಇಲಾಖೆ ವೇಳಾಪಟ್ಟಿ ತಿಳಿಸಿದೆ.
-
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications