Get Updates
Get notified of breaking news, exclusive insights, and must-see stories!

ಮಣಿಪುರದ ಬಗ್ಗೆ ಮೋದಿಯವರನ್ನು ಬಿಟ್ಟು ಭಾರತದಲ್ಲಿ ಯಾರನ್ನೇ ಕೇಳಿ ಹೇಳುತ್ತಾರೆ: ತೃಣಮೂಲದ ಮಹುವಾ ಮೊಯಿತ್ರಾ

ದೆಹಲಿ ಆಗಸ್ಟ್ 11: ಮಣಿಪುರ ಬಿಕ್ಕಟ್ಟು ಸದ್ಯ ಕೇಂದ್ರ ರಾಜಕೀಯದಲ್ಲಿ ವಾಗ್ವಾದಗಳನ್ನು ಸೃಷ್ಟಿದೆ. ವಿಪಕ್ಷಗಳು ಆಡಳಿತ ಪಕ್ಷದ ನಡೆಯನ್ನು ಖಂಡಿಸಿವೆ. ಮಣಿಪುರ ಹಿಂಸಾಚಾರದ ಬಗ್ಗೆ ಮೌನ ತಾಳಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷಗಳು ಕಿಡಿ ಕಾರಿವೆ.

'ಮಣಿಪುರ ಬಿಕ್ಕಟ್ಟಿನ ಬಗ್ಗೆ ಬಿಜೆಪಿ ಸರ್ಕಾರದ ನಿಷ್ಕ್ರಿಯತೆ ನಂತರ ದೇಶವು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆ' ಎಂದು ವಿಪಕ್ಷಗಳು ಆಕ್ರೋಶ ಹೊರಹಾಕಿವೆ. ಕಳೆದ ದಿನ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ವಿಪಕ್ಷ ನಾಯಕರು ಆಡಳಿತ ಪಕ್ಷದ ವಿರುದ್ಧ ಗುಡುಗಿದ್ದಾರೆ.

‘India will say anyone but Modi after Manipur’: Trinamools Mahua Moitra outraged

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, ಮಣಿಪುರದ ವಿಷಯದಲ್ಲಿ ಸರ್ಕಾರ ಮೌನ ತಾಳಿದೆ ಎಂದು ದೂರಿದರು. ಮಣಿಪುರದ ಬಗ್ಗೆ ಮೋದಿ ಅವರನ್ನು ಬಿಟ್ಟರೆ ಬಾಕಿ ಎಲ್ಲರೂ ಮಾತನಾಡುತ್ತಾರೆ. ಆದರೆ ಅವರು ಮಾತ್ರ ಮೌನವಾಗಿದ್ದಾರೆ ಎಂದು ಆಕ್ರೋಶಗೊಂಡರು.

"ಈ ಪ್ರಸ್ತಾವನೆಯೊಂದಿಗೆ ಗೌರವಾನ್ವಿತ ಪ್ರಧಾನಿ ನಿನ್ನೆ ಸದನಕ್ಕೆ ಬಂದಿಲ್ಲ ...ಅವರು ಈಗ ಬರುವುದಿಲ್ಲ, ಅವರು ಕೊನೆಯ ದಿನ ಬಂದು ಎಲ್ಲವನ್ನೂ ನಾಶಮಾಡುತ್ತಾರೆ'' ಎಂದರು.

ಮೊಯಿತ್ರಾ ಅವರು, "ಗೌರವಾನ್ವಿತ ಪ್ರಧಾನಿ ಅವರು ಚುನಾಯಿತ ಸದಸ್ಯರಾಗಿರುವ ಈ ಸದನಕ್ಕೆ ಮಣಿಪುರದ ಬಗ್ಗೆ ನಮಗೆ ಉತ್ತರಿಸಲು ಅಥವಾ ಮಣಿಪುರಕ್ಕೆ ಹೋಗಲು ನಿರಾಕರಿಸುವುದು ಹೆಚ್ಚು ದುರದೃಷ್ಟಕರ ಸಂಗತಿ. ಶಾಂತಿ ಮತ್ತು ಸಮನ್ವಯವು ಅವರ ಧ್ಯೇಯವಾಗಿದೆ ಎಂದು ನೆಪ ಮಾತ್ರಕ್ಕೆ ಹೇಳಲಾಗುತ್ತದೆ" ಎಂದರು.

"ಹರಿಯಾಣದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೋದಿ ಮಾತನಾಡಬೇಕು ಎಂದು ನಾವು (ವಿರೋಧ) ಒತ್ತಾಯಿಸಿದ್ದೇವೆ. ಮಣಿಪುರವು ವಿಭಿನ್ನವಾಗಿದೆ ಎಂದು ನಾನು ಈ ಸದನದಲ್ಲಿ ಹೇಳಲು ಬಯಸುತ್ತೇನೆ. ಏಕೆ ನಾನು ಇದನ್ನು ಹೇಳಲು ಬಯಸುತ್ತೇನೆಂದರೆ, ಮಣಿಪುರದ ವಿಷಯವು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷದ ಅಪರಾಧವಾಗಿದೆ. ಒಂದು ಸಮುದಾಯದ ಪೊಲೀಸ್ ಸಿಬ್ಬಂದಿ, ಪ್ರಾಯಶಃ ಅದೇ ಸಮುದಾಯದ ಮುಖ್ಯಮಂತ್ರಿಗಳು, ಮತ್ತೊಂದು ಸಮುದಾಯದ ಮಹಿಳೆಯರನ್ನು ಗುಂಪು ಅತ್ಯಾಚಾರ ಮತ್ತು ದರೋಡೆಗೆ ಒಪ್ಪಿಸಿದ್ದಾರೆ. ಆ ಮಹಿಳೆಯರಿಗೆ ನ್ಯಾಯ ಕೇಳದಂತೆ ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ'' ಎಂದು ಮೊಯಿತ್ರಾ ಅವರು ಆರೋಪಿಸಿದ್ದಾರೆ.

"ಶ್ರೇಷ್ಠ ಪ್ರಜಾಪ್ರಭುತ್ವದ ಪ್ರಧಾನಿ ಅವರಿಗೆ ಹೊಸ ಸಂಸತ್ತಿನ ಚೇಂಬರ್‌ನಲ್ಲಿ ಬಹುಮತದ ಧಾರ್ಮಿಕ ದಾರ್ಶನಿಕರಿಗೆ ತಲೆಬಾಗುವುದು ಅವಮಾನವನ್ನು ತುಂಬಿದೆ" ಎಂದು ಮೊಯಿತ್ರಾ ಅವರು ಪ್ರಧಾನಿ ವಿರುದ್ಧ ತಮ್ಮ ದಾಳಿಯನ್ನು ತೀಕ್ಷ್ಣಗೊಳಿಸಿದರು.

ಇದೇ ವೇಳೆ ಮೊಯಿತ್ರಾ ಅವರು ಚಾಂಪಿಯನ್ ಕುಸ್ತಿಪಟುಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿದರು. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಘಟನೆಗಳನ್ನು ಉಲ್ಲೇಖಿಸಿದರು. ಹರಿಯಾಣದ ಮೂರು ಜಿಲ್ಲೆಗಳ 50 ಪಂಚಾಯತ್‌ಗಳ ಕ್ರಮಗಳ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. 50 ಪಂಚಾಯತ್‌ಗಳು ಮುಸ್ಲಿಂ ವ್ಯಾಪಾರಿಗಳು ರಾಜ್ಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿ ಪತ್ರಗಳನ್ನು ಹೊರಡಿಸಿವೆ ಎಂದು ದೂರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+