ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು
ಕೊಲ್ಲಂ, ಏಪ್ರಿಲ್ 10 : ಕೇರಳದ ಕೊಲ್ಲಂ ಜಿಲ್ಲೆಯ ಪಾರವೂರ್ ಮೂಕಾಂಬಿಕಾ ದೇವಾಲಯದ ಪಟಾಕಿ ಅವಘಡಕ್ಕೆ ಸಿಕ್ಕಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಗಂಭೀರ ಗಾಯಗೊಂಡಿದ್ದವರ ಸ್ಥಿತಿ ಚಿಂತಾಜನಕವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಘಟನೆಗೆ ಸಂತಾಪ ಸೂಚಿಸಿದ್ದಾರೆ. ನಾನು ಅವಘಡದ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕೇರಳ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.[ಕೇರಳದಲ್ಲಿ ಪಟಾಕಿ ಸಿಡಿದು ಭಾರೀ ಅಗ್ನಿ ದುರಂತ, 102 ಸಾವು]

ಆಕಾಶದಲ್ಲಿ ಸಿಡಿಯಬೇಕಾಗಿದ್ದ ಬಾಣಬಿರುಸುಗಳು ನೆಲದಲ್ಲಿಯೇ ಸಿಡಿದಿದ್ದರಿಂದ ಈ ಅನಾಹುತ ಸಂಭವಿಸಿದೆ. ಪಟಾಕಿ ಸಿಡಿತದ ತೀವ್ರತೆ ಯಾವ ಮಟ್ಟದ್ದಿತ್ತೆಂದರೆ ದೇವಸ್ಥಾನದ ಒಂದು ಭಾಗ ಕೂಡ ಕುಸಿದಿದೆ. ದುರ್ಘಟನೆಯ ಕಾರಾಳ ಚಿತ್ರಗಳು ಎಂಥವರ ಮನಸ್ಸನ್ನು ಒಂದು ಕ್ಷಣ ಕದಡಿಬಿಡುತ್ತದೆ.
I will be reaching Kerala soon to take stock of the situation arising due to the unfortunate fire tragedy in Kollam.
— Narendra Modi (@narendramodi) April 10, 2016












Click it and Unblock the Notifications