Adipurush: ಮಹಾರಾಷ್ಟ್ರದಲ್ಲಿ ಆದಿಪುರುಷ ಸಿನಿಮಾ ಪ್ರದರ್ಶನದ ವೇಳೆ ಹಿಂದೂ ಸಂಘಟನೆ ಸದಸ್ಯರಿಂದ ಗದ್ದಲ

ಮುಂಬೈ, ಜೂನ್. 19: ದೇಶದಲ್ಲಿ ಭಾರೀ ವಿವಾದವನ್ನು ಉಂಟುಮಾಡಿರುವ, ಕೆಲವು ದೇಶದಗಳಲ್ಲಿ ಬ್ಯಾನ್ ಆಗಿರುವ ಆದಿಪುರುಷ ಸಿನಿಮಾ ವಿವಾದಗಳು ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಸಿನಿಮಾ ಸುತ್ತಲಿನ ವಿವಾದಗಳು ಮತ್ತಷ್ಟು ಹೆಚ್ಚಾಗುತ್ತಲೇ ಇವೆ. ಇದರ ನಡುವೆ ಕೆಲವು ಹಿಂದೂ ಸಂಘಟನೆಗಳ ಸದಸ್ಯರು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಚಲನಚಿತ್ರ ಪ್ರದರ್ಶನ ನಿಲ್ಲಿಸುವಂತೆ ಗದ್ದಲವನ್ನು ಸೃಷ್ಟಿಸಿರುವುದು ವರದಿಯಾಗಿದೆ.

ಹಿಂದೂ ಸಂಘಟನೆಗಳ ಸದಸ್ಯರು ಚಿತ್ರ ಪ್ರದರ್ಶನವನ್ನು ನಿಲ್ಲಿಸುವಂತೆ ಹಾಗೂ ಜನರನ್ನು ಸಿನಿಮಾ ನೋಡದಂತೆ ಹೊರಹೋಗುವಂತೆ ಹೇಳಿ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ನಲಸೋಪರದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು "ನಿಮ್ಮ ಮಕ್ಕಳಿಗೆ ಇದನ್ನು ಕಲಿಸುತ್ತೀರಾ..? ನಮಗೆ ನಾಚಿಕೆಯಾಗುತ್ತಿದೆ, ನಮ್ಮ ದೇವರು ಮತ್ತು ದೇವತೆಗಳ ಅವಮಾನವನ್ನು ನಾವು ಸಹಿಸುವುದಿಲ್ಲ" ಎಂದು ಹೇಳುತ್ತಿರುವುದು ಕೇಳಿಸುತ್ತಿದೆ.

Hindu Group Members Create Ruckus During Adipurush Screening in Maharashtra

ಮಲ್ಟಿಪ್ಲೆಕ್ಸ್ ಸಿಬ್ಬಂದಿ ಹಿಂದೂ ಸಂಘಟನೆಗಳ ಸದಸ್ಯರನ್ನು ಶಾಂತಗೊಳಿಸಲು ಪ್ರಯತ್ನಿಸಿದ್ದಾರೆ. ಸಿನಿಮಾ ವೀಕ್ಷಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು ಸಭಾಂಗಣದ ಹೊರಗೆ ಬಂದು ಸಮಸ್ಯೆಯನ್ನು ತಿಳಿಸುವಂತೆ ಪ್ರತಿಭಟನಾಕಾರರನ್ನು ಪದೇ ಪದೇ ಸಿಬ್ಬಂದಿ ಒತ್ತಾಯಿಸಿದ್ದಾರೆ. ಆದರೆ ಆ ವ್ಯಕ್ತಿ ಪ್ರತಿಕ್ರಿಯಿಸಿ, "ಏನೇ ಆಗಲಿ ನಾವು ಇಲ್ಲಿಯೇ ಮಾತನಾಡುತ್ತೇವೆ" ಎಂದು ಹೇಳಿದ್ದಾರೆ.

ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ಸಿಬ್ಬಂದಿಗೆ ವ್ಯಕ್ತಿ ಕಠೋರವಾಗಿ ಹೇಳಿದ್ದು, ನಾವು ಶಕ್ತಿಹೀನರಲ್ಲ, ಹೇಡಿಗಳಲ್ಲ, ನೇಣು ಹಾಕಿಕೊಳ್ಳಲು ಸಿದ್ಧರಿದ್ದೇವೆ, ಕತ್ತು ಸೀಳಿ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದಿದ್ದಾರೆ. ಪ್ರತಿಭಟನಾಕಾರರು ಅಂತಿಮವಾಗಿ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುತ್ತಾ ಚಿತ್ರಮಂದಿರದ ನಿರ್ಗಮನದ ಕಡೆಗೆ ನಡೆಯಲು ಪ್ರಾರಂಭಿಸಿದರು. ಅವರ ಜೊತೆಗೆ ಕೆಲವು ಜನರು ಎದ್ದು ಹೊರಬರುವುದನ್ನು ನೋಡಬಹುದು.

ಏನಿದು ಆದಿಪುರುಷ ಸಿನಿಮಾ ವಿವಾದ?

ಜೂನ್ 16 ರಂದು (ಶುಕ್ರವಾರ) ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆದಿಪುರುಷ ಸಿನಿಮಾದಲ್ಲಿ, ರಾಘವ್ (ರಾಮ್) ಆಗಿ ಪ್ರಭಾಸ್, ಜಾನಕಿ (ಸೀತಾ) ಆಗಿ ಕೃತಿ ಸನೋನ್ ಮತ್ತು ಲಂಕೇಶ್ (ರಾವಣ) ಆಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಚಲನಚಿತ್ರವು ಬಿಡುಗಡೆಯಾದಾಗಿನಿಂದ, ಚಲನಚಿತ್ರವು ಅದರ ಕಳಪೆ VFX, ಆಡುಮಾತಿನ ಸಂಭಾಷಣೆಗಳು ಮತ್ತು ನಟರಿಂದ ಕಳಪೆ ನಟನೆಗಾಗಿ ತೀವ್ರ ವಿವಾದಕ್ಕೆ ಟೀಕೆಗೊಳಗಾಗಿದೆ.

ಜೂನ್ 17 ರಂದು, ಛತ್ತೀಸ್‌ಗಢದ ಮನೇಂದ್ರಗಢ-ಚಿರ್ಮಿರಿ-ಭರತ್‌ಪುರ ಜಿಲ್ಲೆಯಲ್ಲಿ ಆದಿಪುರುಷ ಪ್ರದರ್ಶನವನ್ನು ರಾಷ್ಟ್ರೀಯ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು, ಇದು ಸನಾತನ ಧರ್ಮದ ವಿರುದ್ಧದ ಪಿತೂರಿ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. 'ಕೊರಿಯಾ ಸಾಹಿತ್ಯ ಅವಮ್ ಕಲಾ ಮಂಚ್'ನ ಸದಸ್ಯರು ಮನೇಂದ್ರಗಢ ಪಟ್ಟಣದ ಸಂಕೀರ್ಣದಲ್ಲಿ ಚಲನಚಿತ್ರವನ್ನು ಪ್ರದರ್ಶಿಸುವ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯುವಕರೊಬ್ಬರನ್ನು ಇತ್ತೀಚೆಗೆ ಹೈದರಾಬಾದ್ ಥಿಯೇಟರ್‌ನ ಹೊರಗೆ ಪ್ರಭಾಸ್ ಅಭಿಮಾನಿಗಳಿಂದ ಥಳಿಸಿದ್ದಾರೆ. ಯುವಕ ಚಲನಚಿತ್ರವನ್ನು "ಕೆಟ್ಟದು" ಎಂದು ಹೇಳಿದ್ದು, ಅಲ್ಲಿದ್ದ ಜನರ ಕೋಪಕ್ಕೆ ಕಾತಣವಾಗಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಚಿತ್ರವು ಭಾರತದಲ್ಲಿ ಮಾತ್ರವಲ್ಲದೆ ನೆರೆಯ ನೇಪಾಳದಲ್ಲೂ ಸದ್ದು ಮಾಡುತ್ತಿದೆ. ಸೋಮವಾರದಿಂದ, ಕಠ್ಮಂಡುವಿನಲ್ಲಿ ಎಲ್ಲಾ ಹಿಂದಿ ಚಲನಚಿತ್ರಗಳ ಪ್ರದರ್ಶನವನ್ನು ಆದಿಪುರುಷನಲ್ಲಿ ಸೀತೆಯ ಚಿತ್ರಣವನ್ನು ನಿಷೇಧಿಸಲಾಗಿದೆ. ಪೌರಾಣಿಕ ಮಹಾಕಾವ್ಯ ಚಿತ್ರದ ನಿರ್ಮಾಪಕರು ಅದರ ಕಳಪೆ ಭಾಷೆಗಾಗಿ ಹೆಚ್ಚು ಟೀಕೆಗೊಳಗಾದ ನಂತರ "ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು" ನಿರ್ಧರಿಸಿದ್ದಾರೆ ಎಂದು ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಶುಕ್ಲಾ ಭಾನುವಾರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+