ಆಚಾರ್ಯ ದೇವೋಭವ: ಗುರುವಿಗೆ ನಮನ ಸಲ್ಲಿಸಿದ ಗಣ್ಯರು
ಆಚಾರ್ಯ ದೇವೋಭವ ಎಂಬ ಸಂಸ್ಕೃತಿ ಭಾರತದ್ದು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಒಬ್ಬ ಗುರುವಿನ ಮಹತ್ವವನ್ನು ತಿಳಿಸುವ ಸಲುವಾಗಿಯೇ ಪ್ರತಿವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಕೆಲವೆಡೆ ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.
ಗುರುಶಿಷ್ಯ ಪರಂಪರೆಗೆ ನಾಂದಿ ಹಾಡಿದ ವ್ಯಾಸ ಮಹರ್ಷಿಗಳ ಜನ್ಮದಿನವೂ ಇಂದೇ ಆಗಿರುವುದರಿಂದ ಈ ದಿನ ವ್ಯಾಸರನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಲಾಗುತ್ತದೆ. ವ್ಯಾಸರು ಆಷಾಢ ಶುದ್ಧ ಪಾಡ್ಯದಿಂದ ಬ್ರಹ್ಮಸೂತ್ರವನ್ನು ಬರೆಯಲು ಆರಂಭಿಸಿ, ಪೂರ್ಣಿಮೆಯಂದು ಮುಗಿಸಿದರು ಎನ್ನಲಾಗುತ್ತದೆ.
ಕೆಲವು ದಾಖಲೆಗಳ ಪ್ರಕಾರ ಬುದ್ಧ ಸಹ ಜ್ಞಾನೋದಯವಾದ ನಂತರ ತನ್ನ ಮೊದಲ ಉಪದೇಶವನ್ನು ಇದೇ ದಿನ ನೀಡಿದ ಎನ್ನಲಾಗುತ್ತದೆ. ಆದ್ದರಿಂದ ಈ ದಿನವನ್ನು ಭಾರತದಾದ್ಯಂತ ಹಿಂದುಗಳು ಶ್ರದ್ಧೆ, ಭಕ್ತಿಯಿಂದ ಆಚರಿಸಿ, ತಮ್ಮ ತಮ್ಮ ಗುರುವಿಗೆ ನಮನ ಸಲ್ಲಿಸುತ್ತಾರೆ.
ಈ ದಿನ ಹಲವು ಗಣ್ಯರು ಟ್ವಿಟ್ಟರ್ ಮೂಲಕ ತಮ್ಮ ಗುರುಗಳಿಗೆ ನಮನ ಸಲ್ಲಿಸಿ, ವ್ಯಕ್ತಿಯ ಬದುಕಿನಲ್ಲಿ ಗುರುವಿನ ಪಾತ್ರದ ಮಹತ್ವವನ್ನು ವಿವರಿಸಿದ್ದಾರೆ.
|
ಗುರುವಿಗೆ ಕೃತಜ್ಞತೆ ಸಲ್ಲಿಸೋಣ
ಗುರುಪೂರ್ಣಿಮೆಯ ಶುಭ ದಿನದಂದು ನನ್ನೆಲ್ಲ ದೇಶಬಾಂಧವರಿಗೂ ಶುಭ ಹಾರೈಕೆಗಳು. ನಮ್ಮೆಲ್ಲ ಗುರುಗಳನ್ನು ನೆನಪಿಸಿಕೊಂಡು, ಅವರಿಗೆ ಕೃತಜ್ಞತೆ ಸಲ್ಲಿಸಲು ಇದು ಸೂಕ್ತ ದಿನ ಎಂದಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
|
ನಾವು ಗುರುವಿನ ಋಣದಲ್ಲಿದ್ದೇವೆ
ಗುರುಪೂರ್ಣಿಮೆಯ ಶುಭಾಶಯಗಳು. ನಮ್ಮೊಳಗೆ ಮೌಲ್ಯಗಳನ್ನು ತುಂಬಿ, ನಮಗೆ ಮಾರ್ಗದರ್ಶನ, ಸ್ಫೂರ್ತಿ ನೀಡಿದ ಗುರುಗಳಿಗಾಗಿ ಈ ದಿನ ಅರ್ಪಣೆ. ಅವರ ಋಣವನ್ನು ನಾವೆಂದಿಗೂ ತೀರಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್.
|
ಭಾರತದಲ್ಲಿ ಮಾತ್ರ ಈ ವಿಶಿಷ್ಟ ಆಚರಣೆ
ಭಾರತದಲ್ಲಿ ಮಾತಗ್ರವೇ ಇಂಥ ವಿಶಿಷ್ಟ ಆಚರಣೆ ಕಾಣುವುದಕ್ಕೆ ಸಾಧ್ಯ. ಗುರುವೇ ಬ್ರಹ್ಮಾಂಡದ ಶಕ್ತಿ ಎಂಬುದನ್ನು ಅರಿತವರು ಭಾರತೀಯರು ಎಂದಿದ್ದಾರೆ ಡಾ.ಡೇವಿಡ್ ಫ್ರಾಲಿ.
|
ಗುರುವಿನ ದಯೆ ನಮ್ಮ ಮೇಲಿರಲಿ
ವಿದ್ಯಾರ್ಥಿಗಳ ಬದುಕಲ್ಲಿ ಇದೊಂದು ಅಮೂಲ್ಯ ದಿನ. ಈ ಗುರು ಪೂರ್ಣಿಮೆಯಂದು ನಿಮಗೆ ಗುರುವಿನ ಆಶೀರ್ವಾದ ಲಭಿಸಲಿ. ಈ ಭೂಮಿಯ ಎಲ್ಲ ಗುರುಗಳಿಗೂ ನಮನಗಳು ಎಂದಿದ್ದಾರೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications