ಆಚಾರ್ಯ ದೇವೋಭವ: ಗುರುವಿಗೆ ನಮನ ಸಲ್ಲಿಸಿದ ಗಣ್ಯರು
ಆಚಾರ್ಯ ದೇವೋಭವ ಎಂಬ ಸಂಸ್ಕೃತಿ ಭಾರತದ್ದು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಒಬ್ಬ ಗುರುವಿನ ಮಹತ್ವವನ್ನು ತಿಳಿಸುವ ಸಲುವಾಗಿಯೇ ಪ್ರತಿವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಕೆಲವೆಡೆ ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.
ಗುರುಶಿಷ್ಯ ಪರಂಪರೆಗೆ ನಾಂದಿ ಹಾಡಿದ ವ್ಯಾಸ ಮಹರ್ಷಿಗಳ ಜನ್ಮದಿನವೂ ಇಂದೇ ಆಗಿರುವುದರಿಂದ ಈ ದಿನ ವ್ಯಾಸರನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಲಾಗುತ್ತದೆ. ವ್ಯಾಸರು ಆಷಾಢ ಶುದ್ಧ ಪಾಡ್ಯದಿಂದ ಬ್ರಹ್ಮಸೂತ್ರವನ್ನು ಬರೆಯಲು ಆರಂಭಿಸಿ, ಪೂರ್ಣಿಮೆಯಂದು ಮುಗಿಸಿದರು ಎನ್ನಲಾಗುತ್ತದೆ.
ಕೆಲವು ದಾಖಲೆಗಳ ಪ್ರಕಾರ ಬುದ್ಧ ಸಹ ಜ್ಞಾನೋದಯವಾದ ನಂತರ ತನ್ನ ಮೊದಲ ಉಪದೇಶವನ್ನು ಇದೇ ದಿನ ನೀಡಿದ ಎನ್ನಲಾಗುತ್ತದೆ. ಆದ್ದರಿಂದ ಈ ದಿನವನ್ನು ಭಾರತದಾದ್ಯಂತ ಹಿಂದುಗಳು ಶ್ರದ್ಧೆ, ಭಕ್ತಿಯಿಂದ ಆಚರಿಸಿ, ತಮ್ಮ ತಮ್ಮ ಗುರುವಿಗೆ ನಮನ ಸಲ್ಲಿಸುತ್ತಾರೆ.
ಈ ದಿನ ಹಲವು ಗಣ್ಯರು ಟ್ವಿಟ್ಟರ್ ಮೂಲಕ ತಮ್ಮ ಗುರುಗಳಿಗೆ ನಮನ ಸಲ್ಲಿಸಿ, ವ್ಯಕ್ತಿಯ ಬದುಕಿನಲ್ಲಿ ಗುರುವಿನ ಪಾತ್ರದ ಮಹತ್ವವನ್ನು ವಿವರಿಸಿದ್ದಾರೆ.
|
ಗುರುವಿಗೆ ಕೃತಜ್ಞತೆ ಸಲ್ಲಿಸೋಣ
ಗುರುಪೂರ್ಣಿಮೆಯ ಶುಭ ದಿನದಂದು ನನ್ನೆಲ್ಲ ದೇಶಬಾಂಧವರಿಗೂ ಶುಭ ಹಾರೈಕೆಗಳು. ನಮ್ಮೆಲ್ಲ ಗುರುಗಳನ್ನು ನೆನಪಿಸಿಕೊಂಡು, ಅವರಿಗೆ ಕೃತಜ್ಞತೆ ಸಲ್ಲಿಸಲು ಇದು ಸೂಕ್ತ ದಿನ ಎಂದಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
|
ನಾವು ಗುರುವಿನ ಋಣದಲ್ಲಿದ್ದೇವೆ
ಗುರುಪೂರ್ಣಿಮೆಯ ಶುಭಾಶಯಗಳು. ನಮ್ಮೊಳಗೆ ಮೌಲ್ಯಗಳನ್ನು ತುಂಬಿ, ನಮಗೆ ಮಾರ್ಗದರ್ಶನ, ಸ್ಫೂರ್ತಿ ನೀಡಿದ ಗುರುಗಳಿಗಾಗಿ ಈ ದಿನ ಅರ್ಪಣೆ. ಅವರ ಋಣವನ್ನು ನಾವೆಂದಿಗೂ ತೀರಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್.
|
ಭಾರತದಲ್ಲಿ ಮಾತ್ರ ಈ ವಿಶಿಷ್ಟ ಆಚರಣೆ
ಭಾರತದಲ್ಲಿ ಮಾತಗ್ರವೇ ಇಂಥ ವಿಶಿಷ್ಟ ಆಚರಣೆ ಕಾಣುವುದಕ್ಕೆ ಸಾಧ್ಯ. ಗುರುವೇ ಬ್ರಹ್ಮಾಂಡದ ಶಕ್ತಿ ಎಂಬುದನ್ನು ಅರಿತವರು ಭಾರತೀಯರು ಎಂದಿದ್ದಾರೆ ಡಾ.ಡೇವಿಡ್ ಫ್ರಾಲಿ.
|
ಗುರುವಿನ ದಯೆ ನಮ್ಮ ಮೇಲಿರಲಿ
ವಿದ್ಯಾರ್ಥಿಗಳ ಬದುಕಲ್ಲಿ ಇದೊಂದು ಅಮೂಲ್ಯ ದಿನ. ಈ ಗುರು ಪೂರ್ಣಿಮೆಯಂದು ನಿಮಗೆ ಗುರುವಿನ ಆಶೀರ್ವಾದ ಲಭಿಸಲಿ. ಈ ಭೂಮಿಯ ಎಲ್ಲ ಗುರುಗಳಿಗೂ ನಮನಗಳು ಎಂದಿದ್ದಾರೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.
-
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
ಕೃಷಿಕರಿಗೆ ವರದಾನವಾದ ಶೈಲಜಾ ವಿಠಲ್ ಆವಿಷ್ಕರಿಸಿದ 35 ಕೃಷಿ ಯಂತ್ರೋಪಕರಣ, ಸಣ್ಣ ರೈತರಿಗೆ ದೊಡ್ಡ ಲಾಭ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Rashmika: ಹೈದರಾಬಾದ್ನಲ್ಲಿ ರಶ್ಮಿಕಾ-ವಿಜಯ್ ಅರತಕ್ಷತೆ: ನವದಂಪತಿಗೆ ಡಿಕೆ ಶಿವಕುಮಾರ್ ವಿಶ್












Click it and Unblock the Notifications