ಉಗ್ರರೊಂದಿಗೆ ಕಾದಾಟ: ಸೇನಾ ಕಮಾಂಡರ್ ಸಾವು, ಸೈನಿಕ ಗಾಯಾಳು
ಶ್ರೀನಗರ, ಜುಲೈ 11: ಶ್ರೀನಗರ ಸಮೀಪ ಕುಪವಾರಾದಲ್ಲಿ ಭಾರತೀಯ ಸೇನೆ ಹಾಗೂ ಉಗ್ರಗಾಮಿಗಳ ನಡುವೆ ನಡೆದ ಬಂದೂಕು ಕಾಳಗದಲ್ಲಿ ಓರ್ವ ಸೇನಾ ಕಮಾಂಡರ್ ಮೃತಪಟ್ಟಿದ್ದರೆ ಒಬ್ಬರು ತೀವ್ರ ಗಾಯಾಳವಾಗಿದ್ದಾರೆ.
ಕುಪವಾದ ಸೇದಾ ಗಂಗಾ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರರ ಜೊತೆ ಸೇನಾ ತುಕಡಿಯು ಎನ್ಕೌಂಟರ್ ದಾಳಿ ನಡೆಸಿದ್ದು, ಸೀಪೋಯಿ ಮುಕುಲ್ ಮೀನಾ ಎಂಬ ಕಮಾಂಡರ್ ಮೃತರಾಗಿದ್ದಾರೆ.
ಮಂಗಳವಾರ ರಾತ್ರಿ ಯಿಂದಲೇ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಾಚಾರಣೆ ಇನ್ನೂ ಮುಂದುವರೆದಿದೆ. ನಿನ್ನೆಯಷ್ಟೆ ಕಾಶ್ಮೀರದ ಶೋಫಿನ್ನಲ್ಲಿ ಉಗ್ರರೊಂದಿಗಿನ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಮತ್ತು ಒಬ್ಬ ನಾಗರೀಕ ಮೃತಪಟ್ಟಿದ್ದ.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ, ಪಿಡಿಪಿ ಮೈತ್ರಿ ಸರ್ಕಾರ ಮುರಿದುಬಿದ್ದು ರಾಜ್ಯಪಾಲರ ಆಡಳಿತ ಜಾರಿಯಾದಾಗಿನಿಂದಲೂ ಉಗ್ರರು ಹಾಗೂ ಸೇನೆ ನಡುವೆ ಎನ್ಕೌಂಟರ್ಗಳು ಹೆಚ್ಚಾಗಿವೆ.












Click it and Unblock the Notifications