Deepavali 2023: ತಮಿಳುನಾಡಿನ ಈ 7 ಗ್ರಾಮಗಳಲ್ಲಿ 'ಮೌನ ದೀಪಾವಳಿ' ಆಚರಣೆ, ಇತರರಿಗೆ ಮಾದರಿ ಆಗಿದ್ದೇಗೆ?
ಚೆನ್ನೈ, ನವೆಂಬರ್ 12: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿ ಸದ್ದುಗಳೇ ಕೇಳಿ ಬರುತ್ತವೆ. ಇದರ ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯವನ್ನು ತರುತ್ತದೆ. ಇದೇ ರೀತಿ ಎಲ್ಲೆಡೆ ಸಂಭ್ರಮಾಚರಣೆ ನಡೆದರೆ, ತಮಿಳುನಾಡಿನ ಈ 7 ಹಳ್ಳಿಗಳ ಜನರು ಮಾತ್ರ 'ಮೌನ ದೀಪಾವಳಿ' ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಏಳು ಹಳ್ಳಿಗಳು ಕೇವಲ ದೀಪಗಳು ಹಚ್ಚುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದ್ದಾರೆ. ಇಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲಾಗಿದೆ. ಕಾರಣ ಈ ಹಳ್ಳಿಗಳ ಸಮೀಪವೇ ಪಕ್ಷಧಾಮ ಇದೆ. ಈ ಕಾರಣದಿಂದ ಅರ್ಥಪೂರ್ಣ ಆಚರಣೆಗೆ ಈ ವರ್ಷ ರಾಜ್ಯ ಸಾಕ್ಷಿಯಾಗಿದೆ.

ಈರೋಡ್ ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ವಡಮುಗಂ ವೆಲ್ಲೋಡ್ನ ಸುತ್ತಮುತ್ತ ಈ ಗ್ರಾಮಗಳಿವೆ. ಇಲ್ಲಿ ಸಾವಿರಾರು ಸ್ಥಳೀಯ ಪಕ್ಷಿ ಪ್ರಭೇದಗಳು ಮತ್ತು ಇತರ ಪ್ರದೇಶಗಳಿಂದ ವಲಸೆ ಹಕ್ಕಿಗಳು ಆಗಮಿಸುತ್ತವೆ. ಇವುಗಳು ಅಕ್ಟೋಬರ್ ನಿಂದ ಜನವರಿ ತಿಂಗಳ ಮಧ್ಯೆ ಈ ಅಭಯಾರಣ್ಯಕ್ಕೆ ಭೇಟಿ ನೀಡಿ, ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.
900ಕ್ಕೂ ಹೆಚ್ಚು ಕುಟುಂಬಗಳ ವಾಸ
ಪ್ರತಿವರ್ಷ ಪಕ್ಷಿಗಳ ಆಗಮಿಸುತ್ತವೆ. ಪ್ರತಿ ವರ್ಷ ದೀಪಾವಳಿ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ತಿಂಗಳಲ್ಲಿ ಬರುವುದರಿಂದ ಪಕ್ಷಿಧಾಮದ ಸುತ್ತಮುತ್ತ ಅಂದಾಜು 900ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತವೆ. ಅವರೆಲ್ಲ ದೀಪಾವಳಿಯನ್ನು ಪಟಾಕಿ ಹೊಡೆಯದೇ ಸರಳವಾಗಿ ಆಚರಿಸುವ ಮೂಲಕ ಪಕ್ಷಿಗಳನ್ನು ರಕ್ಷಿಸುವ ನಿರ್ಧಾರ ಕೈಗೊಂಡರು.
ಈ ನಿರ್ಧಾರದಿಂದ ಈ ಏಳು ಗ್ರಾಮಗಳ ಜನರು ಕಳೆದ 22 ವರ್ಷಗಳಿಂದ ಈ ಸರಳ ದೀಪಾವಳಿ ಆಚರಣೆ ವಿಧಾನವನ್ನೇ ಅನುಸರಿಸುತ್ತಿದ್ದಾರೆ. ದೀಪಾವಳಿ ಆಚರಣೆಗೆಂದು ಅವರು ತಮ್ಮ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಾರೆ. ಕೇವಲ ಸದ್ದು ಬಾರದ ಮಿಂಚು ಪಟಾಕಿ ಸುಡಲು ಅನುಮತಿಸಿದ್ದಾರೆ. ಇಲ್ಲಿ ಮಕ್ಕಳಿಗೂ ಸಹ ಪಟಾಕಿ ಹೊಡೆಯಲು ಅವಕಾಶ ನೀಡುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪಕ್ಷಿ ಪ್ರೇಮಿಗಳ ಹಳ್ಳಿಗಳಿವು
ಈ ಬಾರೀಯ ಸಹ ಈರೋಡ್ ನ 'ಸೆಮ್ಮಂಡಂಪಳಯಂ, ಸೆಲ್ಲಪ್ಪಂಪಳಯಂ, ವಡಮುಗಂ ವೆಲ್ಲೊಡೆ, ಕರುಕ್ಕಂಕಟ್ಟು ವಲಸು, ಪುಂಗಂಪಾಡಿ ಸೇರಿದಂತೆ ಒಟ್ಟು ಏಳು ಸಾಂಪ್ರದಾಯಿಕವಾಗಿ ಮೌನ ದೀಪಾವಳಿ ಆಚರಿಸಿದ ಸಂತಸ ವ್ಯಕ್ತಪಡಿಸಿದರು.
ನೂರಾರು ಕುಟುಂಬಗಳು ಸರಳ ದೀಪಾವಳಿ ಆಚರಣೆಯಿಂದಾಗಿ ಶನಿವಾರ ಮತ್ತು ಭಾನುವಾರದಂದು ಅಭಯಾರಣ್ಯದಲ್ಲಿನ ಸಾವಿರಾರು ಪಕ್ಷಿಗಳು ಸುರಕ್ಷಿತವಾಗಿವೆ. ಯಾವುದೇ ಸದ್ದು, ಗದ್ದಲವಿಲ್ಲ ಸಾಮಾನ್ಯ ದಿನಗಳಂತೆ ಹಾರಾಡಿಕೊಂಡು ಇಲ್ಲಿ ಬದುಕುತ್ತಿವೆ. ಇವರ ಈ ಆಚರಣೆ ಅದೇಷ್ಟೋ ಊರು, ರಾಜ್ಯಗಳಿಗೆ ಮಾದರಿ ಆಗಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications