ಭಾರತದ ವಿರುದ್ಧ ಖಲಿಸ್ತಾನಿಗಳ ಸಂಚು, ನಿಲ್ಲುತ್ತಿಲ್ಲ ಕಿತ್ತಾಟ & ತಿಕ್ಕಾಟ!
ಖಲಿಸ್ತಾನಿಗಳಿಗೆ ಭಾರತದ ವಿರುದ್ಧ ವಿಷ ಉಗುಳುವುದು ಬಿಟ್ಟು ಬೇರೆ ಏನು ಗೊತ್ತಾಗುತ್ತಿಲ್ಲ ಅಂತಾ ಕಾಣುತ್ತೆ. ಆದ್ರೆ ಭಾರತದ ಎಲ್ಲಾ ಸರ್ಕಾರಗಳು ಪಕ್ಷಾತೀತವಾಗಿ ಖಲಿಸ್ತಾನಿಗಳ ಈ ಸಂಚನ್ನು ವಿಫಲಗೊಳಿಸುತ್ತಾ ಬಂದಿವೆ. ಹೀಗಿದ್ದಾಗಲೇ ಖಲಿಸ್ತಾನಿಗಳ ಪರ ಪಾಶ್ಚಿಮಾತ್ಯರ ಬೆಂಬಲ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪಗಳ ನಡುವೆ ಅಮೆರಿಕದ ನೆಲದಲ್ಲಿ ಮಹತ್ವದ ಘಟನೆ ನಡೆದಿದೆ.
ಹೌದು ಖಾಲಿಸ್ತಾನ್ ರಾಷ್ಟ್ರ ಸ್ಥಾಪನೆ ಪ್ರತಿಪಾದಿಸುತ್ತಿರುವ ಅಮೆರಿಕ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು, ಎಂಬ ಆರೋಪವನ್ನ ಅಮೆರಿಕ ಮಾಡಿತ್ತು. ಈಗ ಈ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ಭಾರತದ ಪ್ರಜೆ ನಿಖಿಲ್ ಗುಪ್ತ ಎಂಬುವವರ ವಿರುದ್ಧ ಸಂಚು ರೂಪಿಸಿದ ದೋಷಾರೋಪ ಹೊರಿಸಿದೆ ಅಮೆರಿಕ. ನಿಖಿಲ್ ಗುಪ್ತಾ 2023 ರ ಜೂನ್ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ. ಆದ್ರೆ ಈಗ ಇದೇ ನಿಖಿಲ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.

ಅಮೆರಿಕ ಹೇಳುತ್ತಿರುವುದು ಏನು?
ಈ ಕುರಿತು ಹೇಳಿಕೆ ನೀಡಿರುವ, ಅಮೆರಿಕದ ಅಟಾರ್ನಿ ಕಚೇರಿಯ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ 'ಈ ಆರೋಪಿ ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರ ಸ್ಥಾಪನೆ ಪ್ರತಿಪಾದಿಸಿದ್ದ ನ್ಯೂಯಾರ್ಕ್ ನಗರದ ಭಾರತ ಮೂಲದ ವ್ಯಕ್ತಿಯೊಬ್ಬರನ್ನ ಹತ್ಯೆ ಮಾಡಲು ಸಂಚನ್ನ ಕೂಡ ರೂಪಿಸಿದ್ದ' ಅಂತ ಆರೋಪ ಮಾಡ್ಲಾಗಿದೆ. ಈ ಮೂಲಕ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನ ಆರೋಪವನ್ನ ನಿಖಿಲ್ ಗುಪ್ತ ತಲೆಗೆ ಕಟ್ಟಲಾಗುತ್ತಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.
ಅಮೆರಿಕ ಪ್ರಜೆಗಳ ರಕ್ಷಣೆ ಮಾಡುತ್ತೇವೆ!
ಹಾಗೇ ತಮ್ಮ ಹೇಳಿಕೆ ಮುಂದುವರಿಸಿರುವ ಡಾಮಿಯನ್ ವಿಲಿಯಮ್ಸ್, ಅಮೆರಿಕ ನೆಲದಲ್ಲಿ ಅಮೆರಿಕದ ಪ್ರಜೆಗಳನ್ನು ಹತ್ಯೆಗೈಯುವ ಯಾವುದೇ ರೀತಿ ಯತ್ನ ನಾವು ಸಹಿಸಲಾರೆವು ಅಂತಾ ಹೇಳಿದ್ದಾರೆ. ಅಲ್ದೆ ಇಲ್ಲಿರುವ ಅಥವಾ ವಿದೇಶದಲ್ಲಿ ಇರುವ ಅಮೆರಿಕನ್ನರಿಗೆ ಹಾನಿಮಾಡುವ ಯಾರನ್ನೇ ಆದರೂ ಅಡ್ಡಿಪಡಿಸುವ, ತನಿಖೆ ನಡೆಸುವ, ವಿಚಾರಣೆಗೆ ಒಳಪಡಿಸೋದಕ್ಕೆ ಸದಾ ಸಿದ್ಧ ಎಂದಿದ್ದಾರೆ ಡಾಮಿಯನ್ ವಿಲಿಯಮ್ಸ್. ಈ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಭಾರತೀಯ ಅಧಿಕಾರಿ ವಿರುದ್ಧ ಆರೋಪ?
ಇನ್ನು ಅಮೆರಿಕದ ಪ್ರಜೆಯನ್ನ ಹತ್ಯೆಗೈಯಲು ಭಾರತ ಸರ್ಕಾರದ ಅಧಿಕಾರಿಯೊಬ್ಬರು ನಿಖಿಲ್ ಗುಪ್ತಾನ ನಿಯೋಜಿಸಿದ್ದರು ಎಂದು ಅಮೆರಿಕ ಅಟಾರ್ನಿ ಕಚೇರಿ ಪ್ರಕಟಿಸಿದ ದೋಶಾರೋಪಣೆ ಆರೋಪ ಮಾಡಿದೆ. ಇಷ್ಟಾದರೂ ನಿಖಿಲ್ ಗುಪ್ತಾ ಯಾರ ಹತ್ಯೆಗೆ ಯತ್ನಿಸಿದ್ದ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಲ್ಲ. ಈ ನಡುವೆ ಅದು ಗುರುಪತ್ವಂತ್ ಸಿಂಗ್ ಪನ್ನೂನ್ ಆಗಿರಬೇಕೆಂಬ ಅನುಮಾನ ಮೂಡಿದೆ. ಹತ್ಯೆಯ ಸಂಚನ್ನು ನಿರ್ದೇಶಿಸಿದ ಆರೋಪದ ಹಿನ್ನೆಲೆ ಭಾರತೀಯ ಅಧಿಕಾರಿಯನ್ನು ದೋಷಾರೋಪಣೆ ಪತ್ರದಲ್ಲಿ ಸಿಸಿ-1 ಎಂದು ಹೆಸರಿಸಲಾಗಿದೆ. ಒಟ್ನಲ್ಲಿ ಈ ಮೂಲಕ ಖಲಿಸ್ತಾನಿ ವಿಚಾರದಲ್ಲಿ ಮತ್ತೊಮ್ಮೆ ಕಿಚ್ಚು ಹೊತ್ತಿಕೊಂಡಿದೆ. ಕೆನಡಾ ನಂತರ, ಮತ್ತೊಮ್ಮೆ ಖಲಿಸ್ತಾನಿಗಳ ವಿಚಾರ ಜಾಗತಿಕ ಮಟ್ಟದಲ್ಲಿ ಸುದ್ದಿಗೆ ಬಂದಿದೆ.
ಯಾವಾಗ ನಿಲ್ಲುತ್ತೆ ಖಲಿಸ್ತಾನಿ ಕಿರಿಕ್?
2023ರ ಮೇನಲ್ಲಿ ಸಿಸಿ-1 ಅಧಿಕಾರಿ ಗುಪ್ತಾನ, ಖಾಲಿಸ್ತಾನ್ ಪರವಾಗಿರುವ ಅಮೆರಿಕ ಪ್ರಜೆಯ ಹತ್ಯೆಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ನಿಖಿಲ್ ಗುಪ್ತಾ ತನ್ನ ಸಹವರ್ತಿ ಸಂಪರ್ಕಿಸಿದ್ದನು ಎಂದು ಆರೋಪ ಮಾಡಲಾಗಿದೆ. ಒಟ್ನಲ್ಲಿ ಖಲಿಸ್ತಾನಿಗಳು ಭಾರತದ ವಿರುದ್ಧ ಅದೇನೆಲ್ಲಾ ಕಿರಿಕ್ ಮತ್ತು ಕುತಂತ್ರ ಮಾಡಿದರೂ ಅದರು ವರ್ಕೌಟ್ ಆಗುತ್ತಿಲ್ಲ. ಈ ಬೆಳವಣಿಗೆ ಮಧ್ಯೆ ಕೆನಡಾ ರೀತಿಯೇ ಪಾಶ್ಚಿಮಾತ್ಯ ದೇಶಗಳು ಭಾರತದ ವಿರುದ್ಧ, ಬೇಕು ಅಂತಲೇ ಈ ರೀತಿ ವರ್ತಿಸುತ್ತಿರುವ ಆರೋಪ ಕೇಳಿಬಂದಿದೆ. ಇದಕ್ಕೆಲ್ಲಾ ಶೀಘ್ರದಲ್ಲೇ ಸೂಕ್ತ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications