DA Hike Update: ಮುಂದಿನ ವಾರವೇ ತುಟ್ಟಿಭತ್ಯೆ ಶೆ.3ರಷ್ಟು ಹೆಚ್ಚಳ ಆದೇಶ?
2025 January DA Hike Update: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನೊಂದು ವಾರದಲ್ಲಿ ಸಿಹಿ ಸುದ್ದಿ ನೀಡಲಿದೆ. ಮುಂದಿನ ವಾರ ಮಾರ್ಚ್ 13ರಂದು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಸಿಹಿ ಸುದ್ದಿ ಘೋಷಿಸುವ ಸಾಧ್ಯತೆ ಇವೆ. ನೌಕರರು ಬಹುನಿರೀಕ್ಷೆಯಿಂದ ಜನವರಿ 2025ರ ಮೊದಲ DA ಮತ್ತು DR ಹೆಚ್ಚಳ ಆದೇಶಕ್ಕೆ ಕಾಯುತ್ತಿದ್ದಾರೆ.
ಪ್ರತಿ ವರ್ಷವು ಎರಡು ಬಾರಿ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಏರಿಕೆ ಆಗುತ್ತವೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ತುಟ್ಟಿ ಭತ್ಯೆಯ ಪರಿಷ್ಕರಣೆ ಮಾಡುತ್ತದೆ. ಇದರಿಂದ ನೌಕರರಿಗೆ ಹಣದುಬ್ಬರ, ಆರ್ಥಿಕ ಹೊರೆ ಎದುರಿಸಲು ಅನುಕೂಲ ಮಾಡಿಕೊಡುತ್ತದೆ. ಜನವರಿಯಲ್ಲಿ ಅಂತಿಮಗೊಳಿಸಿದ ಡಿಎ ಹೆಚ್ಚಳ ಮಾರ್ಚ್ನಲ್ಲಿ ಅಂದರೆ ಹೋಳಿ ಹಬ್ಬದ ವೇಳೆಗೆ ಪ್ರಕಟಿಸುತ್ತದೆ. ಅದೇ ರೀತಿ ಜುಲೈ ಹೆಚ್ಚಳವನ್ನು ಸಾಮಾನ್ಯವಾಗಿ ಪ್ರತಿ ಅಕ್ಟೋಬರ್ ಅಂತ್ಯ ಇಲ್ಲವೇ ನವೆಂಬರ್ ಮೊದಲ ವಾರ ಪ್ರಕಟಿಸುತ್ತದೆ. ಆಗ ನೌಕರರಿಗ ದೀಪಾವಳಿ ಭರ್ಜರಿ ಗಿಫ್ಟ್ ಸಿಗುತ್ತದೆ.

ಇದೀಗ ಪ್ರಸಕ್ತ ವರ್ಷದ ಜನವರಿ ತಿಂಗಳ ತುಟ್ಟಿಭತ್ಯೆ ಏರಿಕೆಗೆ ನೌಕರರು ಮತ್ತು ತುಟ್ಟಿ ಪರಿಹಾರಕ್ಕಾಗಿ ಕೇಂದ್ರ ಪಿಂಚಣಿದಾರರು ಕಾಯುತ್ತಿದ್ದಾರೆ. ಮುಂದಿನ ವಾರ ಹೋಲಿ ಹಬ್ಬದ ಹೊತ್ತಿಗೆ ಶೇಕಡಾ 3ರಷ್ಟು ಪರಿಷ್ಕರಣೆ ಮಾಡಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದು ತಿಳಿದು ಬಂದಿದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ದೆಹಲಿಯಲ್ಲಿ ಬುಧವಾರ ಮಾರ್ಚ್ 5 ಸಚಿವ ಸಂಪುಟ ಸಭೆ ನಡೆಯಿತು. ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (DA) ಹೆಚ್ಚಳದ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ ಎನ್ನಲಾಗುತ್ತಿದೆ. ಇದು ಪ್ರತಿ ವರ್ಷದ ಪ್ರಕ್ರಿಯೆ ಆದ್ದರಿಂದ ಎಂದಿನಂತೆ ಸಕಾಲಕ್ಕೆ ಆದೇಶಿಸಬಹುದು ಅಂತಲೂ ಹೇಳಲಾಗುತ್ತದೆ.
ಈ ಹಿಂದಿನ ತುಟ್ಟಿಭತ್ಯೆ ಪರಿಷ್ಕರಣೆ ನೋಡುವುದಾದರೆ, 7ನೇ ವೇತನ ಆಯೋಗದಡಿಯಲ್ಲಿ ಕಳೆದ ವರ್ಷ 2024 ರ ಜುಲೈ ನಲ್ಲಿ ತುಟ್ಟಿಭತ್ಯೆ ಏರಿಕೆ ಆಗಿತ್ತು. ಆಗ ಶೇಕಡಾ 3ರಷ್ಟು ಎರಿಕೆ ಮಾಡಿದ್ದರಿಂದ ಶೇಕಡಾ 50ರಷ್ಟಿದ್ದ ತುಟ್ಟಿಭತ್ಯ ಪ್ರಮಾಣವು ಶೇಕಡಾ 53 ಕ್ಕೆ ತಲುಪಿತು.

ಅದರ ಹಿಂದಿನದ್ದು ಅಂದರೆ 2024ರ ಮಾರ್ಚ್ 7 ರಂದು ಸಚಿವ ಸಂಪುಟ ತುಟ್ಟಿ ಭತ್ಯೆ ಏರಿಕೆ ಮಾಡಿತ್ತು. ಆಗ ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದರಿಂದ ಶೇಕಡಾ 46 ರಷ್ಟಿದ್ದ ಡಿಎ ಪ್ರಮಾಣ ಶೇಕಡಾ 50ಕ್ಕೆ ತಲುಪಿತು. ಈ ಬಾರಿ ಶೇಡಕಾ 3ರಷ್ಟು ಹೆಚ್ಚಳ ಮಾಡಿದರೆ, ಹಾಲಿ ತುಟ್ಟಿಭತ್ಯೆ ಪ್ರಮಾಣ 53ರಿಂದ 56ಕ್ಕೆ ತಲುಪಲಿದೆ.
ಹೊಸ ವೇತನ ಆಯೋಗ ಜಾರಿ ಯಾವಾಗ?
ಇನ್ನು ಏಳನೇ ವೇತನ ಆಯೋಗದ ಅವಧಿಯು ಮುಂದಿನ 09 ತಿಂಗಳು ಮಾತ್ರವೇ ಇದೆ. ಇದಾದ ಬಳಿಕ 08 ನೇ ವೇತನ ಆಯೋಗ ಜಾರಿ ಮಾಡಬೇಕಿದೆ. ಇದಕ್ಕಾಗಿ ಕೇಂದ್ರ ಸಿದ್ಧತೆ ಮಾಡಿಕೊಂಡಿದೆ. ಈ ಹೊಸ ವೇತನ ಆಯೋಗದ ಮೇಲೂ ನೌಕರರಿಗೆ ಅಪಾರ ನಿರೀಕ್ಷೆಗಳು ಇವೆ. ಏಕೆಂದರೆ ಈ ಎಂಟನೇ ವೇತನ ಆಯೋಗ ಜಾರಿಯಾದರೆ, ಮೂಲ ವೇತನ ಹಾಗೂ ಇತರ ಭತ್ಯೆಗಳು ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ನೌಕರರು ಲೆಕ್ಕಾಚಾರ ಹಾಕಿದ್ದಾರೆ. ಇದರ ಅನುಷ್ಠಾನ ಆದೇಶ ಕುರಿತು ನೌಕರರು ಕಾಯುತ್ತಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications