BSNL: ಗ್ರಾಹಕಸ್ನೇಹಿ 336 ದಿನಗಳ ವಿಶೇಷ ಪ್ಲಾನ್: ರಾಷ್ಟ್ರದ ಹೆಮ್ಮೆ ಗೌರವಿಸುತ್ತಾ ರಿಚಾರ್ಜ್ ಮಾಡಿಕೊಳ್ಳಿ...
BSNL Mobile Recharge News: ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಟವರ್ ನಿರ್ಮಿಸುವ ಮೂಲಕ ಸುವ್ಯವಸ್ಥಿತ ಸೇವೆ ನೀಡಲು ಮುಂದಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಹೊಸ ರಿಚಾರ್ಜ್ ಯೋಜನೆ ಪರಿಚಯಿಸುತ್ತಲೇ ಬಂದಿದೆ. ಇದೀಗ ಕೈಗೆಟುಕುವ ಬೆಲೆಗೆ 336 ದಿನಗಳ ಮೊಬೈಲ್ ರಿಚಾರ್ಜ್ ಯೋಜನೆ ನೀಡಿದೆ. ಪ್ಲಾನ್ ಅನ್ನು ನಿಗದಿತ ವೇದಿಕೆಗಳ ಮೂಲಕ ಮಾತ್ರವೇ ಪಡೆಯಬಹುದಾಗಿದೆ. ಜೂನ್ 30ರವರೆಗೆ ಮಾತ್ರ ಈ ಪ್ಲಾನ್ ಖರೀದಿಗೆ ಅವಕಾಶ ನೀಡಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಈ ₹1499 ರೂ. ಕೊಟ್ಟು ಖರೀದಿಸುವ ಪ್ಲಾನ್ನ ಹಣದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಶೇಕಡಾ 5ರಷ್ಟು ಕೊಡುಗೆಯಾಗಿ ನೀಡಲಿದೆ. 2.5ರಷ್ಟು ಹಣದಲ್ಲಿ ನಿಮಗೆ ರಿಚಾರ್ಜ್ ರೂಪದಲ್ಲಿ ಮರಳಿಸಲು ಮುಂದಾಗಿದೆ. ಅಂದರೆ ನೀವು ಸಶಸ್ತ್ರ ಪಡೆಗಳ ಸೇವೆ ಸ್ಮರಿಸುತ್ತಾ ಅವರಿಗಾಗಿ ಈ ರಿಚಾರ್ಜ್ ಪ್ಲಾನ್ ಮಾಡಿಕೊಳ್ಳುವಂತೆ ತಿಳಿಸಿದೆ. ಇದಕ್ಕಾಗಿ ಜೂನ್ 30ರವರೆಗೆ ಅವಕಾಶ ನೀಡಿದೆ.

BSNL ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರು ಬಿಎಸ್ಎನ್ಎಲ್ ಅಧಿಕೃತ ವೆಬ್ಸೈಟ್ (https://bsnl.co.in/mobile/recharge) ಅಥವಾ ಬಿಎಸ್ಎನ್ಎಲ್ ಆಪ್ https://selfcare.bsnl.co.in/home.xhtml ಮೂಲಕ ನೀವು ಈ ನೂತನ ರಿಚಾರ್ಜ್ ಪ್ಲಾನ್ ಪ್ರಯೋಜನೆ ಪಡೆದುಕೊಳ್ಳಬಹುದೆಂದು ತಿಳಿಸಿದೆ. ಹಾಗಾದ್ರೆ ಈ ರಿಚಾರ್ಜ್ ಪ್ಲಾನ್ ಏನೆಲ್ಲ ವಿಶೇಷತೆ ಹೊಂದಿದೆ. ವ್ಯಾಲಿಟಿಡಿ ವಿವರ ಇಲ್ಲಿದೆ.
ರಿಚಾರ್ಜ್ ಯೋಜನೆಯ ಪ್ರಯೋಜನಗಳು
ನೀವು BSNL 1499 ರೂಪಾಯಿಯ ಪ್ಲಾನ್ ಖರೀದಿಸಿದರೆ ನಿಮಗೆ 336 ದಿನಗಳ ಅವಧಿಗೆ ಅಂದರೆ ಹನ್ನೊಂದು ತಿಂಗಳ ವ್ಯಾಲಿಡಿಟಿಯ ಯೋಜನೆ ಇದಾಗಿದೆ. ಇದರಲ್ಲಿ ನೀವು ಅನಿಯಮಿತ ಕರೆಗಳ ಸೌಲಭ್ಯ ಪಡೆಯುತ್ತಿರಿ ಮತ್ತು 24 ಜಿಬಿ 4 ಜಿ ಇಂಟರ್ನೆಟ್ ಡೇಟಾ ನಿಮ್ಮದಾಗುತ್ತದೆ. ಈ ಯೋಜನೆ ಪಡೆಯಲು ಗಡುವು ಇದೆ. ಜೂನ್ 30ರಂದು ಕೊನೆ ದಿನವಿದ್ದು, ಅಷ್ಟರೊಳಗಾಗಿ ಈ ನೀವು ಈ ಕೈಗೆಟುಕುವ ಯೋಜನೆ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ
ಬಿಎಸ್ಎನ್ಎಲ್ ಸಂಸ್ಥೆ 5 ಟವರ್ಗಳಿಗೆ ಅಪ್ಡೇಟ್ ಆಗಲು ಹೆಚ್ಚುವರಿಯಾಗಿ ದೇಶದಲ್ಲಿ ಒಂದು ಲಕ್ಷ ಟವರ್ ನಿರ್ಮಾಣಕ್ಕೆ ಅನುಮೋದನೆ ಪಡೆಯಲಿದೆ. ಆದರೆ ಹಾಲಿ ಇರುವ 4 ಜಿ ನೆಟ್ವರ್ಕ್ ಸಮಸ್ಯೆ ಸಾಕಷ್ಟು ಕಡೆಗಳಲ್ಲಿ ಎದುರಾಗುತ್ತಿದೆ. ಕರೆ ಮಾಡಿದಾಗ ಸಮಸ್ಯೆ, ತಡವಾಗಿ ಕಾಲ್ ಕನೆಕ್ಟ್ ಆಗುವುದು ಹಾಗೂ ಇತರ ಸಮಸ್ಯೆಗಳನ್ನು ಗ್ರಾಹಕರು ಎದರಿಸುತ್ತಿದ್ದಾರೆ. ಗ್ರಾಹಕ ಸ್ನೇಹಿ ರಿಚಾರ್ಜ್ ಯೋಜನೆ ಘೋಷಿಸುತ್ತಿರುವ ಬಿಎಸ್ಎನ್ಎಲ್ ಶೀಘ್ರವೇ ಎಲ್ಲ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications