ಅಧಿಕಾರ ದಾಹದ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ: ಮಾಯಾವತಿ
ನವದೆಹಲಿ, ಜುಲೈ 29: ಅಧಿಕಾರ ದಾಹದ ಬಿಜೆಪಿ, ಅಧಿಕಾರಕ್ಕಾಗಿ ಎಲ್ಲ ಮಿತಿಗಳನ್ನೂ ದಾಟಿದೆ ಎಂದು ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ ವಿಧಾನಪರಿಷತ್ ಸದಸ್ಯ, ಬಿಎಸ್ ಪಿ ನಾಯಕ ಠಾಕೂರ್ ಜೈವೀರ್ ಸಿಂಗ್ ಇಂದು(ಜುಲೈ 29) ಬಿಎಸ್ ಪಿ ಗೆ ರಾಜೀನಾಮೆ ನೀಡಿದ ನಂತರ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.

ಇದು ಬಿಜೆಪಿಯದೇ ಕುತಂತ್ರ ಎಂದು ದೂರಿರುವ ಮಾಯಾವತಿ, ಬಿಜೆಪಿ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಗುಜರಾತಿನಲ್ಲಿಯೂ ಬೇರೆ ಪಕ್ಷದ ನಾಯಕರು ತಮ್ಮ ಪಕ್ಷ ತೊರೆಯುವಂತೆ ಬಿಜೆಪಿ ಕುತಂತ್ರ ಮಾಡುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ತರವಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications