ಮೋದಿ ಭಕ್ತರಿಂದ ಮೀನು, ಲಡ್ಡು, ಮಾವು ಹಂಚಿಕೆ
ಬೆಂಗಳೂರು, ಮೇ.26: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಸಮಯದಲ್ಲಿ ಸಾರ್ವಜನಿಕರಿಗೆ ಹಂಚಲು ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿಗಳನ್ನು ತಯಾರಿಸಿದ್ದಾರೆ. ಮೋದಿ ಅವರ ಪೂರ್ವಿಕರ ಊರಿನಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ.
ಮೋದಿ ಅವರ ಊರು ವಾದ್ನಗರದಲ್ಲಿ ಮಣ್ಣಿನ ಮಗ ಮೋದಿ ಪ್ರಧಾನಿಯಾಗುವ ಸಂಭ್ರಮವನ್ನು ಎಲ್ಲರೂ ಆಚರಿಸುತ್ತಿದ್ದಾರೆ. ಸುಮಾರು 10 ಸಾವಿರ ಜನರಿಗೆ ಊಟೋಪಚಾರಗಳು ನಡೆದಿವೆ. ಮೋತಿಚೂರ್ ಲಡ್ಡು, ಮೋದಿ ಪೇಡಾ, ಮೊದಿ ಫಾಫ್ಡಾ, ಸಮೋಸಾ, ಮೋದಿ ಜಿಲೇಬಿ ಊಟದ ಮೆನುವಿನಲ್ಲಿದೆ. ಸುಮಾರು 125 ಕೆಜಿ ತೂಗುವ ಲಡ್ಡುವನ್ನು ಭಗವಾನ್ ಶಿವನಿಗೆ ಹಂಚಿ ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತಿದೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಸಮಯದಲ್ಲಿ ಸಾರ್ವಜನಿಕರಿಗೆ ಹಂಚಲು ಬಿಜೆಪಿ ಮುಖಂಡರು ದೇಶದ ಅನೇಕ ಕಡೆ ಇದೇ ರೀತಿ ವ್ಯವಸ್ಥೆ ಮಾಡಿದ್ದಾರೆ. ವಾರಣಾಸಿಯ ದಶಾಶ್ವಮೇಧ ಘಾಟ್ ನಲ್ಲಿ ಗಂಗಾಪೂಜೆ, ವಿಶೇಷ ಅರ್ಚನೆ ನಡೆಯುತ್ತಿದೆ. ದೇಶದ ಹಲವೆಡೆ ಮೋದಿ ಪ್ರಧಾನಿ ಸಮಾರಂಭ ಹಬ್ಬದ ವಾತಾವರಣ ಸೃಷ್ಟಿಸಿದೆ.

ಮಂಡ್ಯದಲ್ಲಿ ಬಿಜೆಪಿಯಿಂದ ಲಡ್ಡು ಹಂಚಿಕೆ
ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಸಮಯದಲ್ಲಿ ಸಾರ್ವಜನಿಕರಿಗೆ ಹಂಚಲು ಬಿಜೆಪಿ ಮುಖಂಡರು 20 ಸಾವಿರ ಲಡ್ಡು ಸಿದ್ಧಪಡಿಸಿದ್ದಾರೆ. ಸಂಜೆ 5 ಗಂಟೆಗೆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಮುಖ್ಯಬೀದಿಗಳಲ್ಲಿ ಸಾಗಿ, ಬಡಾವಣೆಗಳಲ್ಲಿ ಲಡ್ಡು ವಿತರಿಸಲಾಗುವುದು ಎಂದು ಉಮಾಶಂಕರ್, ಶ್ರೀಧರ್ ತಿಳಿಸಿದ್ದಾರೆ.
ಮಂಡ್ಯದ ಜೈನರ ಬೀದಿಯಲ್ಲಿರುವ ಹೋಟೆಲ್ ಶಂಕರ ವಿಲಾಸದಲ್ಲಿ ಸಾರ್ವಜನಿಕರಿಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರವರೆಗೆ ಹೋಟೆಲ್ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಕೇಸರಿಬಾತ್ ಹಂಚಲಾಗುತ್ತಿದೆ. ಮಂಡ್ಯ ನಗರದ 17 ದೇವಾಲಯಗಳಲ್ಲಿ ವಿಶೇಷ ಪೂಜೆ ಸಹ ಏರ್ಪಡಿಸಲಾಗಿದೆ.

ಕಲಿಮುಲ್ಲಾ ಮಾವಿನ ರಾಜ ನಮೋ ಆಮ್
ಮಾವು ಬೆಳೆಗಾರ ಹಾಜಿ ಕಲಿಮುಲ್ಲಾ ಎಂಬಾತ ಮಾವಿನ ಹಣ್ಣಿಗೆ ನಮೋ ಆಮ್ ಎಂದು ಹೆಸರಿಟ್ಟು ಸುದ್ದಿ ಮಾಡಿದ್ದಾರೆ. ಕಲಿಮುಲ್ಲಾ ಮಾವಿನ ರಾಜ ಎಂದೇ ಇಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಹಲವು ಗಣ್ಯ ವ್ಯಕ್ತಿಗಳಿಗೆ ಹೊಂದುವ ವಿಶಿಷ್ಟ ಹೈಬ್ರಿಡ್ ಮ್ಯಾಂಗೋ ತಳಿ ಸಂಶೋಧಿಸಿದ್ದ ಕಲಿಮುಲ್ಲಾ ನರೇಂದ್ರ ಮೋದಿಯ ಜನಪ್ರಿಯತೆಗೆ ತಕ್ಕಂತೆ ಒಂದು ಮಾವಿನ ತಳಿಯನ್ನ ಸಂಶೋಧಿಸಿ, ಅದಕ್ಕೆ ಮೋದಿಯ ಹೆಸರೇ ಇಟ್ಟಿಧ್ದಾರೆ.

ಚೆನ್ನೈನಲ್ಲಿ ನಮೋ ಫಿಶ್ ಸ್ಟಾಲ್
ಮೇ.26ರಂದು ನಮೋ ಟೀಸ್ಟಾಲ್ ನಂತೆ ನಮೋ ಮೀನು ಅಂಗಡಿಗಳನ್ನು ತೆರೆಯಲಾಗಿದ್ದು, ಒಂದು ಕೆಜಿ ಮೀನನ್ನು ಉಚಿತವಾಗಿ ಹಂಚಲಾಗುತ್ತಿದೆ ಎಂದು ಎಸ್ ಸತೀಶ್ ಕುಮಾರ್ ಹೇಳಿದ್ದಾರೆ. ಶಂಕರ ಹಾಗೂ ಕೋಲಾ ಜಾತಿ ಮೀನುಗಳನ್ನು ನೀಡಲಾಗುತ್ತಿದೆ. ಸುಮಾರು 200 ಜನರಿಗೆ ಸಿಗಲಿದೆ ಎಂಬ ಸುದ್ದಿಯಿದೆ.

ವಾರಣಾಸಿಯಲ್ಲಿ ಗಂಗಾಪೂಜೆ
ಮೋದಿ ಊರಿನಲ್ಲಿ ಇಂದಿನ ಮೆನು: ಮೋತಿಚೂರ್ ಲಡ್ಡು, ಮೋದಿ ಪೇಡಾ, ಮೊದಿ ಫಾಫ್ಡಾ, ಸಮೋಸಾ, ಮೋದಿ ಜಿಲೇಬಿ ಊಟದ ಮೆನುವಿನಲ್ಲಿದೆ. ಸುಮಾರು 125 ಕೆಜಿ ತೂಗುವ ಲಡ್ಡುವನ್ನು ಭಗವಾನ್ ಶಿವನಿಗೆ ಹಂಚಿ ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತಿದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications