ಆಂಧ್ರಪ್ರದೇಶದ ತಿರುಪತಿಯಲ್ಲಿ ಹಳಿತಪ್ಪಿದ ಪದ್ಮಾವತಿ ಎಕ್ಸ್ಪ್ರೆಸ್, ಪ್ರಾಣಹಾನಿಯಿಲ್ಲ
ಪಾಟ್ನಾ, ಜುಲೈ. 19: ತಿರುಪತಿ ಮತ್ತು ಸಿಕಂದರಾಬಾದ್ ನಡುವಿನ ಪದ್ಮಾವತಿ ಎಕ್ಸ್ಪ್ರೆಸ್ ರೈಲಿನ ಕೋಚ್ ಆಂಧ್ರಪ್ರದೇಶದ ತಿರುಪತಿಯಲ್ಲಿ ಬುಧವಾರ ಹಳಿತಪ್ಪಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಸಂಜೆ ಘಟನೆ ನಡೆದಿದ್ದು, ಈ ವೇಲೆ ತಿರುಪತಿ ರೈಲು ನಿಲ್ದಾಣದಲ್ಲಿ ಪದ್ಮಾವತಿ ಎಕ್ಸ್ಪ್ರೆಸ್ನ ಬೋಗಿಯಲ್ಲಿ ಪ್ರಯಾಣಿಕರು ಇರಲಿಲ್ಲ. ಬೋಗಿಗಳನ್ನು ರೈಲಿಗೆ ಜೋಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ರೈಲ್ವೇ ಸಿಬ್ಬಂದಿ ಬೋಗಿಗಳನ್ನು ಹಳಿಗಳಿಗೆ ಮರಳಿ ತರಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
VIDEO | Padmavati Express derails in Tirupati, Andhra Pradesh. More details are awaited. pic.twitter.com/Bw5kt2v4XQ
— Press Trust of India (@PTI_News) July 19, 2023
ವರದಿಗಳ ಪ್ರಕಾರ ತಿರುಪತಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ 6 ರಲ್ಲಿ ಶಂಟಿಂಗ್ ಪ್ರಕ್ರಿಯೆಯಲ್ಲಿ ಹಳಿ ತಪ್ಪಿದೆ. ಈ ಘಟನೆಯಿಂದಾಗಿ ನಿಲ್ದಾಣದಿಂದ ಹೊರಡುವ ಹಲವಾರು ರೈಲುಗಳ ವಿಳಂಬವಾಗಿದೆ ಎಂದು ವರದಿಯಾಗಿದೆ.












Click it and Unblock the Notifications