ವಿಪ್ರೋ ಲಾಭ, ಆದಾಯ ಕುಸಿತ, ಹೂಡಿಕೆದಾರರಿಗೆ ಆತಂಕ
ಬೆಂಗಳೂರು, ಏಪ್ರಿಲ್ 26: ದೇಶದ ಮೂರನೇ ಅತಿದೊಡ್ಡ ಸಾಫ್ಟ್ವೇರ್ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೊ, ಮಾರ್ಚ್ ತ್ರೈಮಾಸಿಕದಲ್ಲಿ 1,800 ಕೋಟಿ ರುಗಳಷ್ಟು ನಿವ್ವಳ ಲಾಭ ಗಳಿಸಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 20.5ರಷ್ಟು ಲಾಭ ಕುಸಿದಿದೆ.
ಜತೆಗೆ ಮಾರುಕಟ್ಟೆಯ ನಿರೀಕ್ಷೆಗಿಂತ ಕಡಿಮೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,267 ಕೋಟಿ ರು ನಿವ್ವಳ ಲಾಭ ಗಳಿಸಿತ್ತು. ಸಂಸ್ಥೆಯ ಎರಡು ಗ್ರಾಹಕ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಇದರಿಂದ ಎದುರಾಗಬಹುದಾದ ಸವಾಲು ಎದುರಿಸಲು ಹೆಚ್ಚುವರಿ ಹಣ ತೆಗೆದು ಇರಿಸಲಾಗಿದೆ. ಹೀಗಾಗಿ ನಿವ್ವಳ ಲಾಭ ಕುಸಿದಿದೆ ಎಂದು ವಿಪ್ರೋ ಹೇಳಿದೆ.

ಆದರೆ, ಗುರುವಾರದಂದು ವಿಪ್ರೋ ಸಂಸ್ಥೆ ಷೇರುಗಳು ಶೇ 4ರಷ್ಟು ಕುಸಿತ ಕಂಡಿದ್ದು, ಬಂಡವಾಳ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಒಟ್ಟಾರೆ, ಈ ದಿನ 281.35 ರು ನಂತೆ ಶೇ 5.80ರಷ್ಟು ಕುಸಿತ ಕಂಡಿದೆ.
ಟೆಲಿಕಾಂ ಗ್ರಾಹಕ ಸಂಸ್ಥೆಯೊಂದು ನಷ್ಟಕ್ಕೆ ಗುರಿಯಾಗಿ ಸಾಲ ವಸೂಲಾತಿ ಪ್ರಕ್ರಿಯೆಗೆ ಒಳಪಟ್ಟಿದೆ. ಇದರಿಂದ ಈ ಬಾರಿ ಲಾಭವು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಬಿಎಸ್ಇ ಗೆ ವಿಪ್ರೋ ತಿಳಿಸಿತ್ತು.
'ಸೆಪ್ಟೆಂಬರ್ ತ್ರೈಮಾಸಿಕದ 1,930 ಕೋಟಿ ರು ಲಾಭಕ್ಕೆ ಹೋಲಿಸಿದರೆ, ಮಾರ್ಚ್ ತ್ರೈಮಾಸಿಕದಲ್ಲಿನ ಲಾಭದ ಕುಸಿತವು ಶೇ 7ರಷ್ಟಾಗಲಿದೆ. ಈ ಬಾರಿ ನಿವ್ವಳ ಲಾಭ ಕುಸಿತದ ಬಗ್ಗೆ ಆತಂಕ ಬೇಡ' ಎಂದು ಸಂಸ್ಥೆಯ ಸಿಇಒ ಅಬಿದಾಲಿ ನೀಮೂಚವಾಲಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ತ್ರೈಮಾಸಿಕ(Q4) ಅವಧಿಯ ಒಟ್ಟು ಆದಾಯ 14,304.6 ಕೋಟಿ ರು ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿನ 15,045.5 ಕೋಟಿ ರು ಗಳಿಷ್ಟಿತ್ತು. 2017ಕ್ಕೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿದೆ.
ಒಟ್ಟು 900 ಉದ್ಯೋಗಿಗಳನ್ನು 8 ಡೇಟಾ ಕೇಂದ್ರ ಹಂಚಿಕೆಗೆ ಎನ್ಸೊನೊ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ವಿಪ್ರೋ ಸಂಸ್ಥೆಯ ಹೆಲ್ತ್ ಕೇರ್ ಹಾಗೂ ಲೈಫ್ ಸೈನ್ಸ್ ವ್ಯವಹಾರ ಕುಂಠಿತವಾಗಿದೆ. ಎರಡು ಸಬ್ಸಿಡಿ ಸಂಸ್ಥೆ ಮುಚ್ಚಲು ಬೋರ್ಡ್ ನಿರ್ಧರಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications