Gold Rate: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಳಿತ: ನಲುಗಿದ ಆಭರಣ ಮಾರುಕಟ್ಟೆ, ವ್ಯಾಪಾರಿಗಳಲ್ಲಿ ಆತಂಕ
ನವದೆಹಲಿ: ಚಿನ್ನ ಹಾಗೂ ಬೆಳ್ಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದೆ. ಬಂಗಾರ-ಬೆಳ್ಳಿ ದರಗಳ ಬದಲಾವಣೆಯು ವಿವಿಧ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಎಐ ನಿಂದ ಉದ್ಯೋಗ ನಷ್ಟ ಅನುಭವಿಸಿದ್ದ ಸಾಕಷ್ಟು ಕ್ಷೇತ್ರಗಳಿವೆ. ಅದರಂತೆ ಈ ಲೋಹಗಳ ಬೆಲೆ ದಿಢೀರ್ ಬದಲಾವಣೆಯಿಂದಾಗಿ ವ್ಯಾಪಾರವನ್ನು ಹೈರಾಣಾಗಿಸಿದೆ. ಜ್ಯುವೆಲ್ಲರಿ ವ್ಯಾಪಾರಿಗಳು, ತಯಾರಕರ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ.
ಚಿನ್ನ-ಬೆಳ್ಳಿಯ ಏರಿಳಿತವು ಚಿನ್ನಾಭರಣದ ವ್ಯಾಪಾರವನ್ನು ಕೊಲ್ಲುತ್ತಿದೆ. ಉದ್ಯೋಗ ನಷ್ಟದ ಸಮಸ್ಯೆ ತಂದೊಡುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿನ ಹಠಾತ್ ಮತ್ತು ತೀಕ್ಷ್ಣವಾದ ಬದಲಾವಣೆಗಳು ದೇಶದಲ್ಲಿ ಆಭರಣ ಮತ್ತು ಚಿನ್ನ, ಬೆಳ್ಳಿ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ದೊಡ್ಡ ವ್ಯಾಪಾರ ಕೇಂದ್ರಗಳಿಂದ ಸಣ್ಣ ಅಂಗಡಿಗಳಿಂದ ಮತ್ತು ಸಾಮಾನ್ಯ ಗ್ರಾಹಕರವರೆಗೂ ದರ ಹೆಚ್ಚಳ, ಬದಲಾವಣೆ ಪ್ರಭಾವ ಉಂಟಾಗಿದೆ.

ವ್ಯಾಪಾರ ಕುಂಠಿತ
ಬೆಳ್ಳಿಯ ವ್ಯಾಪಾರ ಕುಂಠಿತವಾಗಿದೆ. ಒಂದು ಕಾಲದಲ್ಲಿ ನಿರಂತರವಾಗಿ ತುಂಬಿ ತುಳುಕುತ್ತಿದ್ದ ಅಂಗಡಿಗಳು ಮತ್ತು ಕಾರ್ಯಾಗಾರಗಳು ಈಗ ಶಾಂತವಾಗಿವೆ. ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಸದ್ಯಕ್ಕೆ ಚಿನ್ನ, ಬೆಳ್ಳಿ ವ್ಯಾಪಾರ ಗಣನೀಯವಾಗಿ ಕಡಿಮೆ ಆಗಿದೆ. ಗ್ರಾಹಕರು ದರ ಕೇಳಿಯೇ ಚಿನ್ನ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನೇಕರು ಚಿನ್ನದ ಮೇಲೆ ಆನ್ಲೈನ್ ಹೂಡಿಕೆ ಮುಂದುವರಿಸಿದ್ದಾರೆ. ಹೀಗಿದ್ದಾಗ ವ್ಯಾಪಾರ ಹೇಗಾಗಬೇಕು. ಈ ವಲಯವನ್ನೇ ನೆಚ್ಚಿಕೊಂಡವರ ಸ್ಥಿತಿ ಇದೀಗ ಸಂಕಷ್ಟ ಎದುರು ನೋಡುತ್ತಿದೆ. ಈ ವಲಯದ ಅನೇಕ ಕಾರ್ಮಿಕರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೆಲವು ಅಂಗಡಿಗಳಲ್ಲಿ ಲಾಭ ಹೋಗಲಿ, ವ್ಯಾಪಾರವೇ ಇಲ್ಲದೇ ಆತಂಕಕ್ಕೀಡಾಗಿದ್ದು, ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುತ್ತಿವೆ ಎಂದು ವರದಿ ಆಗಿದೆ. ಕೆಲವು ವ್ಯಾಪಾರ ಸಂಸ್ಥೆಗಳು ದಿವಾಳಿಯಾಗಿವೆ ಎಂದು ವರದಿ ಆಗಿದೆ.
ಹಲವು ವಾರಗಳಿಗೂ ಮೊದಲು ಚಿನ್ನ ಬೆಳ್ಳಿ ದರವು ಹಂತ ಹಂತವಾಗಿ, ನಿಧಾನ ಪ್ರಕ್ರಿಯೆಯಲ್ಲಿ ಇಳಿಕೆ ಮತ್ತು ಏರಿಕೆ ಕಾಣುತ್ತಿದ್ದವು. ಇಂದು ಒಂದೇ ದಿನಕ್ಕೆ ದುಪ್ಪಟ್ಟು ಏರಿಕೆ ಮತ್ತು ಇಳಿಕೆ ಆಗುತ್ತಿದೆ. ವ್ಯಾಪಾರಿಗಳು ಸಾಲ ಮಾಡಿ ಖರೀದಿಸಿ ಮಾರಾಟ ಮಾಡಿದವರಿಗೂ ನಷ್ಟವಾಗಿದೆ. ಒಂದೇ ದಿನದೊಳಗೆ ಬೆಲೆಗಳು ತೀವ್ರವಾಗಿ ಬದಲಾಗುವುದರಿಂದ ಗ್ರಾಹಕರು ಗೊಂದಲ್ಲಿದ್ದಾರೆ. ಸರಿಯಾಗಿ ವ್ಯಾಪಾರ ಆಗುತ್ತಿಲ್ಲ. ಇಂತಹ ಬೆಳವಣಿಗೆ ಆಭರಣ ವಲಯಕ್ಕೆ ಮಾರಕವಾಗಿದೆ.
ಆರ್ಡರ್ ಬರುತ್ತಿಲ್ಲ, ಚಿನ್ನ ವಾಪಾಸ್ ಖರೀದಿ ಮೊದಲಿನಷ್ಟಿಲ್ಲ
ತಯಾರಕರು ದುಬಾರಿ ಕಚ್ಚಾ ಬೆಳ್ಳಿಯನ್ನು ಖರೀದಿಸಲು ಶಕ್ತರಾಗಿಲ್ಲ. ಸಗಟು ವ್ಯಾಪಾರಿಗಳು ಹೊಸ ಆರ್ಡರ್ಗಳನ್ನು ನೀಡುತ್ತಿಲ್ಲ. ಈ ಮಧ್ಯೆ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿ ಕಡಿಮೆ ಆಗಿದೆ. ಜನರು ಚಿನ್ನ ದುಬಾರಿ ಆಗುತ್ತಿದ್ದಂತೆ ಪರ್ಯಾಯವಾಗಿ ಬೆಳ್ಳಿ ಖರೀದಿಸುತ್ತಿದ್ದರು. ಇದೀಗ ಬೆಳ್ಳಿ ಸಹ ಕೈಗೆಟುಕದ ರೀತಿಯಲ್ಲಿ ಹೆಚ್ಚಾಗಿದ್ದರಿಂದ ಅದನ್ನು ಖರೀದಿಸಲು ಮುಂದಾ ಬಾರದು ವ್ಯಾಪಾರ ನೆಲಕಚ್ಚಿದೆ. ಆಭರಣಗಳನ್ನು ಖರೀದಿಸಲು ಕಡಿಮೆ ಜನರು ಬರುತ್ತಿದ್ದಾರೆ. ಸಣ್ಣ ಪುಟ್ಟ ಆಭರಣ ಬದಲಾವಣೆ, ರಿಪೇರಿ, ತಕ್ಕ ಮಟ್ಟಿನ ಖರೀದಿಗೆ ಬರುತ್ತಿದ್ದ ಜನರ ಪ್ರಮಾಣ ಇದೀಗ ಸಾಕಷ್ಟು ಇಳಿಕೆ ಆಗಿದೆ.
ಮಾರುಕಟ್ಟೆಯಲ್ಲಿ ನಗದು ಕೊರತೆ ಇರುವ ಕಾರಣ ಸಾಕಷ್ಟು ಅಂಗಡಿಯವರು ಗ್ರಾಹಕರಿಂದ ಚಿನ್ನ ಅಥವಾ ಬೆಳ್ಳಿಯನ್ನು ಮರಳಿ ಖರೀದಿಸಲು ಸಿದ್ಧರಿಲ್ಲ. ಏಕೆಂದರೆ ಖರೀದಿಸಿದ ಬಳಿಕ ಅವರಿಗೆ ನೀಡಲು ಹಣ ವ್ಯಾಪಾರಿಗಳಲ್ಲಿ ಇಲ್ಲದಾಗಿದೆ. ಅಲ್ಲದೇ ದರ ಹೆಚ್ಚಾದಾಗ ದೊಡ್ಡ ಮೊತ್ತ ನೀಡಬೇಕಾಗುತ್ತದೆ. ಮರಳ ಇಳಿಕೆ ಆದಾಗ ನಷ್ಟ ನೋಡಬೇಕಾಗುತ್ತದೆ ಎಂದು ವ್ಯಾಪಾರಿಗಳು ಖರೀದಿ ಕಡಿಮೆ ಮಾಡಿದ್ದಾರೆ.
ಜಾಗತಿಕ ಬೇಡಿಕೆ ಮತ್ತು ಮಾರುಕಟ್ಟೆ ಅನಿಶ್ಚಿತತೆಯಿಂದಾಗಿ 2025 ರವರೆಗೆ ಚಿನ್ನ ಮತ್ತು ಬೆಳ್ಳಿ ತೀವ್ರವಾಗಿ ಏರಿಕೆ ಆಯಿತು. ನಂತರ ದಿಢೀರ್ ದರ ಕುಸಿಯಿತು. ಈ ಕಾರಣದಿಂದ ವ್ಯಾಪಾರಿಗಳು, ಗ್ರಾಹಕರು ಬೆಲೆಯಲ್ಲಿ ಸ್ಥಿರತೆ ಕಾಯುವಿಕೆಯತ್ತ ನೋಡುತ್ತಿದ್ದಾರೆ. ಸಹಜ ಸ್ಥಿತಿ ಬಂದ ಮೇಲೆ ಮೊದಲಿನಂದ ವ್ಯಾಪಾರ ವಹೀವಾಟು, ಖರೀದಿ ನಡೆಯುವ ನಿರೀಕ್ಷೆ ಇದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications