ಜೆಟ್ ಏರ್ವೇಸ್ ಷೇರು ಮಾರಾಟ: ಖರೀದಿಗೆ ಭಾರತೀಯರ ನಿರಾಸಕ್ತಿ
ನವದೆಹಲಿ, ಮೇ 11: ಸಾಲ ತೀರಿಸಲಾಗದೆ ದಿವಾಳಿಯಾಗಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡಲು ಯಾವ ಕಂಪೆನಿಗಳೂ ಮುಂದೆ ಬರುತ್ತಿಲ್ಲ.
ಜೆಟ್ ಏರ್ವೇಸ್ನಲ್ಲಿ ಶೇ 24ರಷ್ಟು ಷೇರುಗಳನ್ನು ಹೊಂದಿರುವ ಸೌದಿ ಮೂಲದ ಇತಿಹಾದ್ ಏರ್ವೇಸ್, ಬಿಡ್ಡಿಂಗ್ ಅವಧಿಯಲ್ಲಿ ಇದುವರೆಗೂ ಹೆಚ್ಚುವರಿ ಷೇರುಗಳ ಖರೀದಿಗೆ ಪಾಲ್ಗೊಂಡಿರುವ ಏಕೈಕ ಬಿಡ್ಡರ್ ಆಗಿದೆ. ಜೆಟ್ ಏರ್ವೇಸ್ನ ಶೇ 75ರಷ್ಟು ಷೇರುಗಳನ್ನು ಸಾಲದಾರ ಬ್ಯಾಂಕುಗಳು ಮಾರಾಟಕ್ಕೆ ಇರಿಸಿವೆ.
ಸಾಲದಾರರ ಪರವಾಗಿ ಬಿಡ್ಸ್ ಆಹ್ವಾನ ಮಾಡಿದ್ದ ಎಸ್ಬಿಐ ನೀಡಿದ್ದ ಅಂತಿಮ ಗಡುವಿನ ಕೊನೆಯ ಕ್ಷಣದಲ್ಲಿ ಇತಿಹಾದ್ ಬಿಡ್ ಸಲ್ಲಿಸಿದೆ. ಇದಕ್ಕೂ ಮುನ್ನ ಆಸಕ್ತಿ ವ್ಯಕ್ತಪಡಿಸುವಿಕೆ ಪ್ರಕ್ರಿಯೆ (ಇಒಐ) ಮೂಲಕ ಟಿಪಿಜಿ ಕ್ಯಾಪಿಟಲ್, ಇಂಡಿಗೋ ಪಾರ್ಟ್ನರ್ಸ್ ಮತ್ತು ಎನ್ಐಐಎಫ್ಗಳನ್ನು ಆಯ್ಕೆ ಮಾಡಿ ನಾಲ್ಕು ಕಂಪೆನಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು.

ಈಗ ಬಿಡ್ ಸಲ್ಲಿಸಿರುವ ಏಕೈಕ ಸಂಸ್ಥೆ ಇತಿಹಾದ್, ಷೇರು ಖರೀದಿಸಲು ಸಾಲಮನ್ನಾದ ಕಡ್ಡಾಯ ಕ್ರಮದ ಜತೆಗೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ಬೆಳವಣಿಗೆಗಳನ್ನು ಇತಿಹಾದ್ ಖಚಿತಪಡಿಸಿದ್ದು, ಜೆಟ್ ಏರ್ವೇಸ್ನ ಅಲ್ಪ ಪ್ರಮಾಣದ ಷೇರುಗಳ ಮೇಲೆ ಮರುಹೂಡಿಕೆ ಮಾಡಲು ಷರತ್ತುಬದ್ಧ ಆಸಕ್ತಿ ವ್ಯಕ್ತಪಡಿಸಿರುವುದಾಗಿ ಹೇಳಿದೆ.
ಭಾರತದ ಪ್ರಮುಖ ಬಂಡವಾಳ ಹೂಡಿಕೆದಾರರೊಂದಿಗೆ ಇತಿಹಾದ್ ಕಳೆದ 15 ತಿಂಗಳಿನಿಂದ ಮಾತುಕತೆ ನಡೆಸುತ್ತಿದ್ದು, ಜೆಟ್ ಏರ್ವೇಸ್ಅನ್ನು ಉಳಿಸಲು ಸತತ ಪ್ರಯತ್ನ ಮಾಡುತ್ತಿದೆ. ಇತಿಹಾದ್ ಇದರ ಏಕೈಕ ಹೂಡಿಕೆದಾರನಾಗಲು ಸಾಧ್ಯವಿಲ್ಲ. ಇತರೆ ಅಗತ್ಯಗಳಿಗಾಗಿ ಹೆಚ್ಚುವರಿ ಸೂಕ್ತ ಹೂಡಿಕೆದಾರರು ಬೇಕಿದ್ದಾರೆ ಎಂದು ಇತಿಹಾದ್ ಏರ್ಲೈನ್ಸ್ ಸಂಸ್ಥೆ ತಿಳಿಸಿದೆ.
ಇದರಿಂದ ಇತಿಹಾದ್, ಜೆಟ್ ಏರ್ವೇಸ್ನ ಗರಿಷ್ಠ ಶೇ 49ರಷ್ಟು ಷೇರುಗಳೊಂದಿಗೆ ಅಲ್ಪ ಹೂಡಿಕೆಯ ಪಾಲುದಾರನಾಗಿ ಉಳಿಯಲಿದ್ದರೆ, ಅದರ ಬಹುಪಾಲು ಹೂಡಿಕೆಯನ್ನು ಭಾರತೀಯರೇ ಮಾಡಬೇಕಿರುತ್ತದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications