EPFO: ಇಪಿಎಫ್ ವರ್ಗಾವಣೆ ಈಗ ಇನ್ನೂ ಸುಲಭ; ಹೊಸ ನಿಯಮ ಜಾರಿಗೆ
ಇಪಿಎಫ್ಒ ಸದಸ್ಯರಿಗಾಗಿ ಹೊಸ ನಿಯಮ ಜಾರಿಯಾಗಿದ್ದು ಈಗ ಸದಸ್ಯರು ವೈಯಕ್ತಿಕ ವಿವರಗಳನ್ನು ಬದಲಾಯಿಸುವುದನ್ನು ಸುಲಭವಾಗಿಸಿದೆ. ಉದ್ಯೋಗ ನೀಡಿದ ಕಂಪನಿಯ ಹಸ್ತಕ್ಷೇಪವಿಲ್ಲದೆ ಆನ್ಲೈನಲ್ನಲ್ಲಿ ಇಪಿಎಫ್ ಅನ್ನುವ ವರ್ಗಾಯಿಸಲು ಅವಕಾಶ ನೀಡಲಾಗಿದೆ.
ಇಪಿಎಫ್ಒ ಸಂಸ್ಥೆಯ 7.6 ಕೋಟಿಗೂ ಹೆಚ್ಚು ಸದಸ್ಯರಯ ಈಗ ತಮ್ಮ ಹೆಸರು, ಜನ್ಮ ದಿನಾಂಕ ಸೇರಿದಂತೆ ಹಲವು ವೈಯಕ್ತಿಕ ವಿವರಗಳನ್ನು ಪರಿಶೀಲನೆ ಅಥವಾ ಇಪಿಎಫ್ಒ ಅನುಮೋದನೆಯಿಲ್ಲದೆ ಆನ್ಲೈನ್ನಲ್ಲಿ ಬದಲಾಯಿಸಬಹುದಾಗಿದೆ. ಶನಿವಾರದಿಂದ ಈ ಹೊಸ ಸೌಲಭ್ಯ ಜಾರಿಗೆ ಬಂದಿದೆ.

ಇ-ಕೆವೈಸಿ ಇಪಿಎಫ್ ಖಾತೆಗಳನ್ನು ಹೊಂದಿರುವ ನೌಕರರ ಇಪಿಎಫ್ಒ ಸದಸ್ಯರು ತಮ್ಮ ಇಪಿಎಫ್ ವರ್ಗಾವಣೆ ಹಕ್ಕುಗಳನ್ನು ಆಧಾರ್ ಒಟಿಪಿ ಮೂಲಕ ಆನ್ಲೈನ್ನಲ್ಲಿ ನೇರವಾಗಿ ತಾವು ಕೆಲಸ ಮಾಡುವ ಅಥವಾ ಮಾಡಿದ ಕಂಪನಿಯ ಹಸ್ತಕ್ಷೇಪದ ಅಗತ್ಯವಿಲ್ಲದೆ ಸಲ್ಲಿಸಲು ಕೂಡ ಅವಕಾಶವಿರುತ್ತದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಎರಡು ಹೊಸ ಸೇವೆಗಳನ್ನು ಪರಿಚಯಿಸಿದ್ದಾರೆ. ಸದಸ್ಯರು ಸಲ್ಲಿಸುವ ಸುಮಾರು 27% ದೂರುಗಳು ಸದಸ್ಯರ ವೈಯಕ್ತಿಕ ವಿವರ ಮತ್ತು ಕೆವೈಸಿಗೆ ಸಮಸ್ಯೆಗೆ ಸಂಬಂಧಿಸಿದ್ದಾಗಿದ್ದು ಹೊಸ ನಿಯಮ ಜಾರಿಗೆ ಬಂದ ನಂತರ ಸಮಸ್ಯೆ ಕಡಿಮೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲಸ ನೀಡುವ ಕಂಪನಿಗಳ ಹೊರೆ ಕೂಡ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ವೈಯಕ್ತಿಕ ವಿವರ ಬದಲಾವಣೆ ಸುಲಭ
ಇನ್ನು ಮುಂದೆ ಇಪಿಎಫ್ಒ ಪೋರ್ಟಲ್ನಲ್ಲಿ ತಿದ್ದುಪಡಿ ಪ್ರಕ್ರಿಯೆಯನ್ನು ಸರಳವಾಗಿಸಿದೆ. ಖಾತೆದಾರರು ತಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ರಾಷ್ಟ್ರೀಯತೆ, ತಂದೆ, ತಾಯಿ ಹೆಸರು, ವಿವಾಹ, ಸಂಗಾತಿಯ ಹೆಸರು, ಸೇರ್ಪಡೆ ದಿನಾಂಕ ಮತ್ತು ಮುಕ್ತಾಯದ ದಿನಾಂಕದಂತಹ ವೈಯಕ್ತಿಕ ವಿವರಗಳ ಸಾಮಾನ್ಯ ತಪ್ಪುಗಳನ್ನು ಕೆಲಸ ಮಾಡುವ ಕಂಪನಿಯ ಪರಿಶೀಲನೆ ಅಥವಾ ಇಪಿಎಫ್ಒ ಅನುಮೋದನೆಯಿಲ್ಲದೆ ಸರಿಪಡಿಸಲು ಉದ್ಯೋಗಿಗಳು ಅವಕಾಶ ಹೊಂದಿರುತ್ತಾರೆ.
ಅಕ್ಟೋಬರ್ 1, 2017ರ ಬಳಿಕ ಆಧಾರ್ ಲಿಂಕ್ ಕಡ್ಡಾಯಗೊಳಿಸಿದ ಬಳಿಕ ಯುಎಎನ್ ಪಡೆದಿರುವ ಸದಸ್ಯರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ಅಕ್ಟೋಬರ್ 1, 2017ರ ಮೊದಲು ಯುಎಎನ್ ಪಡೆದಿದ್ದರೆ ಕಂಪನಿಗಳು ಇಪಿಎಫ್ಒ ಅನುಮೋದನೆಯಿಲ್ಲದೆ ವಿವರಗಳನ್ನು ಸರಿಮಾಡಬಹುದು.
ಆಧಾರ್ ಸಂಖ್ಯೆ ಜೊತೆ ಯುಎಎನ್ ಲಿಂಕ್ ಮಾಡದಿದ್ದರೆ ಮಾತ್ರ ಯಾವುದೇ ತಿದ್ದುಪಡಿಯನ್ನು ಬೌತಿಕವಾಗಿ ಉದ್ಯೋಗದಾತರಿಗೆ ಸಲ್ಲಿಸಬೇಕಾಗುತ್ತದೆ. ಪರಿಶೀಲನೆ ಬಳಿಕ ಅನುಮೋದನೆಗಾಗಿ ಇಪಿಎಫ್ಒಗೆ ಸಲ್ಲಿಸಬೇಕಾಗುತ್ತದೆ.
ಉದ್ಯೋಗಕ್ಕೆ ಸೇರುವ ಸಮಯದಲ್ಲಿ ಯುಎಎಎನ್ ನೋಂದಣಿಯನ್ನು ಕಂಪನಿಗಳು ಮಾಡುತ್ತವೆ. ಅನೇಕ ಉದ್ಯೋಗಿಗಳ ನೋಂದಣಿ ಸಮಯದಲ್ಲಿ ವೈಯಕ್ತಿತ ಮಾಹಿತಿಗಳನ್ನು ಕೆಲವು ತಪ್ಪುಗಳು ಆಗಿರುತ್ತವೆ. ಈ ತಪ್ಪುಗಳನ್ನು ಸರಿಪಡಿಸಲು ಅಗತ್ಯ ದಾಖಲೆಗಳ ಜೊತೆ ಆನ್ಲೈನ್ನಲ್ಲಿ ಮನವಿ ಮಾಡಬೇಕಿತ್ತು, ಬದಲಾವಣೆ ಮಾಡಲು ಮೊದಲು ಮನವಿಯನ್ನು ಕಂಪನಿಗಳು ಪರಿಶೀಲನೆ ಮಾಡಬೇಕು. ನಂತರ ಅನುಮೋದನೆಗಾಗಿ ಇಪಿಎಫ್ಒಗೆ ರವಾನಿಸಬೇಕಿತ್ತು, ಇದನ್ನು ಜಂಟಿ ಘೋಷಣೆ ಎಂದು ಕರೆಯಲಾಗುತ್ತಿತ್ತು.
ಇಪಿಎಫ್ಒಗೆ ದಿನನಿತ್ಯ ಸಾವಿರಾರು ತಿದ್ದುಪಡಿ ಮನವಿಗಳು ಬರುತ್ತಿದ್ದವು ಈಗ ಈ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿ ಹೊಸ ನಿಯಮ ಜಾರಿ ಮಾಡಲಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications